Select Your Language

Notifications

webdunia
webdunia
webdunia
webdunia

ಮಕ್ಕಳಾಗದಕ್ಕೆ ಬೇಸರಗೊಂಡ ದಂಪತಿ ಆತ್ಮಹತ್ಯೆಗೆ ಶರಣು

ಮಕ್ಕಳಾಗದಕ್ಕೆ ಬೇಸರಗೊಂಡ ದಂಪತಿ ಆತ್ಮಹತ್ಯೆಗೆ ಶರಣು
ಗದಗ , ಶುಕ್ರವಾರ, 27 ಫೆಬ್ರವರಿ 2015 (10:52 IST)
ಮಕ್ಕಳಾಗದ್ದಕ್ಕೆ ಬೇಸರಗೊಂಡ ದಂಪತಿಗಳು ಇಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ನಡೆದಿದೆ. 
 
ಆತ್ಮಹತ್ಯೆ ಮಾಡಿಕೊಂಡಿರುವ ದಂಪತಿಗಳನ್ನು ಬಸವರಾಜ್(34) ಮತ್ತು ಆತನ ಪತ್ನಿ ಸುಧಾ(27) ಎಂದು ಹೇಳಲಾಗಿದ್ದು, ಬೆಳ್ಳಂಬೆಳಗ್ಗೆ ಪತಿ ನೇಣಿಗೆ ಶರಣಾಗಿದ್ದರು. ಇದನ್ನು ಕಂಡ ಪತ್ನಿ ಕೂಡ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ದಂಪತಿಗಳು ಕಳೆದ 8 ವರ್ಷಗಳ ಹಿಂದೆ ಮಧುವೆಯಾಗಿದ್ದರು. ಆದರೆ ಇಷ್ಟು ವರ್ಷಗಳಾದರೂ ಮಕ್ಕಳಾಗಿರಲಿಲ್ಲ. ಇದರಿಂದ ಮನನೊಂದ ದಂಪತಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. 
 
ಘಟನೆಯನ್ನು ಪರಿಶೀಲಿಸುತ್ತಿರುವ ಮುಂಡರಗಿ ಠಾಣಾ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Share this Story:

Follow Webdunia kannada