Webdunia - Bharat's app for daily news and videos

Install App

ಪಾಲಕ್ಕಾಡ್, ಗೋಣಿಚೀಲದಲ್ಲಿ ಶಸ್ತ್ರಾಸ್ತ್ರಗಳು ಪತ್ತೆ: ವೈಜ್ಞಾನಿಕ ಪರೀಕ್ಷೆಗೆ ರವಾನೆ

Webdunia
ಗುರುವಾರ, 18 ನವೆಂಬರ್ 2021 (21:34 IST)
ಪಾಲಕ್ಕಾಡು ಜಿಲ್ಲೆಯ ಕಣ್ಣನ್ನೂರು ಎಂಬಲ್ಲಿ ಗೋಣಿಚೀಲವೊಂದರಲ್ಲಿ ಶಸ್ತ್ರಾಸ್ತ್ರಗಳನ್ನು ಎಸೆದು ಹೋಗಿರುವುದು ಪತ್ತೆಯಾಗಿದೆ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪಾಲಕ್ಕಾಡು ಎಲಪಲ್ಲಿಯಲ್ಲಿ ಇತ್ತೀಚೆಗೆ ಆರ್’ಎಸ್‍ಎಸ್ ಮಂಡಲ ಬೌದ್ಧಿಕ್ ಪ್ರಮುಖ್ ಆಗಿದ್ದ ಸಂಜಿತ್‍ರನ್ನು ಕೊಲೆಗೈದ ಪಾತಕಿಗಳು ಶಸ್ತ್ರಾಸ್ತ್ರಗಳನ್ನು ಎಸೆದು ಪರಾರಿಯಾಗಿರಬಹುದೆಂದು ಸಂಶಯಿಸಲಾಗಿದೆ.
ನಾಲ್ಕು ರಾಡ್ ಗಳನ್ನು ಗೋಣಿಚೀಲದಲ್ಲಿ ಸುತ್ತಿ ಎಸೆದಿರುವುದು ಪತ್ತೆಯಾಗಿದೆ. ರಾಷ್ಟ್ರೀಯ ಹೆದ್ದಾರಿ ಬಳಿಯ ಸರ್ವೀಸ್ ರಸ್ತೆ ಪರಿಸರದಲ್ಲಿ ಈ ಶಸ್ತ್ರಾಸ್ತ್ರಗಳು ಕಂಡುಬಂದಿವೆ. ಇದನ್ನು ಗಮನಿಸಿದ ಸ್ಥಳೀಯರು ಠಾಣೆಗೆ ಮಾಹಿತಿ ನೀಡಿದ ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಸಿಐಎ ನೇತೃತ್ವದ ಪೊಲೀಸರು ಶಸ್ತ್ರಾಸ್ತ್ರಗಳನ್ನು ವೈಜ್ಞಾನಿಕ ಪರೀಕ್ಷೆಗೆ ಕಳುಹಿಸಿದ್ದಾರೆ.
ನಾಲ್ಕು ಸರಳುಗಳಲ್ಲಿ ಎರಡು ತುಕ್ಕು ಹಿಡಿದಿರುವುದು ಕಂಡು ಬಂದಿದೆ. ಆದರೆ ಒಂದು ಬಹುಮಟ್ಟಿಗೆ ಹೊಸದು. ರಕ್ತದ ಕಲೆಗಳು ಅಥವಾ ಇತರ ಚಿಹ್ನೆಗಳು ಸ್ಪಷ್ಟವಾಗಿಲ್ಲ. ವೈಜ್ಞಾನಿಕ ಪರೀಕ್ಷೆಯ ನಂತರವಷ್ಟೇ ಎಲಪಲ್ಲಿಯಲ್ಲಿ ನಡೆದ ಕೊಲೆಗೂ ಈ ಆಯುಧಗಳಿಗೂ ಸಂಬಂಧವಿದೆಯೇ ಎಂಬುದು ಖಚಿತವಾಗಲಿದೆ ಎಂದು ಸಿಐ ತಿಳಿಸಿದ್ದಾರೆ. ಇದೇ ವೇಳೆ ಸಂಜಿತ್ ರನ್ನು ಕೊಲೆಗೈದು ಎರಡು ದಿನಗಳು ಕಳೆದರೂ ಹಂತಕರನ್ನು ಪತ್ತೆಹಚ್ಚುವಲ್ಲಿ ಹಾಗೂ ಯಾವುದೇ ಸಾಕ್ಷ್ಯವನ್ನು ಹುಡುಕುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಬಿಜೆಪಿ ಪಾಲಕ್ಕಾಡು ಮಂಡಲ ಸಮಿತಿಯು ಆಕ್ರೋಶ ವ್ಯಕ್ತಪಡಿಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Bengaluru stampede: ನಂಗೆ ಮಗ ಬೇಕು.. ಮಗನ ಸಮಾಧಿ ಮೇಲೆ ಬಿದ್ದು ಗೋಳಾಡಿದ ಭೂಮಿಕ್ ತಂದೆ

Chinnaswamy stampede: ಕಮಿಷನರ್ ಬಿ ದಯಾನಂದ ಪರವಾಗಿ ಪ್ರತಿಭಟಿಸಿದ ಕಾನ್ಸ್ ಟೇಬಲ್ ಕೊನೆಗೆ ಆಗಿದ್ದೇನು

Namma Metro: ತಾಯಂದಿರೇ ಗಮನಿಸಿ, ನಮ್ಮ ಮೆಟ್ರೋ ನಿಲ್ದಾಣದಲ್ಲಿ ಇನ್ನು ಈ ಸೌಲಭ್ಯವಿರಲಿದೆ

Karnataka Rains: ಈ ದಿನದಿಂದ ರಾಜ್ಯದಲ್ಲಿ ಭಾರೀ ಮಳೆ, ಮುಂಗಾರು ಅಬ್ಬರ ಶುರು

Chinnaswamy stampede: ಸಿಎಂ ಕಚೇರಿಯಿಂದಲೇ ಪೊಲೀಸರಿಗೆ ಒತ್ತಡ ಬಂದಿತ್ತು, ಶಾಕಿಂಗ್ ಸತ್ಯ ರಿವೀಲ್

ಮುಂದಿನ ಸುದ್ದಿ
Show comments