ಜಮೀರ್ ಅವರನ್ನು ಮೀರ್ ಸಾದಿಕ್ ಅವರಿಗೆ ಹೋಲಿಸಿದ್ದ ದೇವೇಗೌಡರು ಈಗ ಯುಟರ್ನ್ ಹೊಡೆದಿದ್ದು ಜಮೀರ್ ಅಹ್ಮದ್ ಅವರನ್ನು ಮೀರ್ ಸಾದಿಕ್ಗೆ ಹೋಲಿಸಿಲ್ಲ ಎಂದು ಈಗ ಹೇಳಿದ್ದಾರೆ. ಜೆಡಿಎಸ್ನಲ್ಲಿ ಬೆಳೆದು ಬೇರೆ ಪಕ್ಷದ ಲಾಭ ಪಡೆಯುತ್ತಿದ್ದಾರೆ. ಲಾಭ ಪಡೆಯುತ್ತಿರುವವರು ಹಾಸನದಲ್ಲೂ ಇದ್ದಾರೆ ಎಂದು ಪರೋಕ್ಷವಾಗಿ ದೇವೇಗೌಡರು ಸಿಎಂ ಸಿದ್ದರಾಮಯ್ಯ ಅವರಿಗೆ ಕೂಡ ಟಾಂಗ್ ನೀಡಿದ್ದಾರೆ.
ಪಕ್ಷದ ಶಾಸಕ ಜಮೀರ್ ಅಹಮ್ಮದ್ ಮೀರ್ ಸಾದಿಕ್ ವರ್ಗಕ್ಕೆ ಸೇರಿದವರಾಗಿದ್ದು, ಅಕ್ರಮವಾಗಿ ಹಣ ಸಂಪಾದಿಸಿ ಜನರನ್ನು ಮೆಕ್ಕಾಗೆ ಕಳುಹಿಸಿದರೆ ದೇವರು ಅವರನ್ನು ಕ್ಷಮಿಸುವುದಿಲ್ಲ ಎಂದು ದೇವೇಗೌಡರು ಹರಿಹಾಯ್ದಿದ್ದರು. ಹೆಬ್ಟಾಳ ಉಪಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ಆರ್.ಟಿ.ನಗರದಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು.
ದೇವೇಗೌಡರ ಮೀರ್ ಸಾದಿಕ್ ಹೇಳಿಕೆಯಿಂದ ಜಮೀರ್ ಅಹ್ಮದ್ ಸಿಟ್ಟಾಗಿ ಈ ಕುರಿತು ಚರ್ಚಿಸಲು ತಮ್ಮ ಸಮುದಾಯದ ಸಭೆಗಳನ್ನು ಕರೆದಿದ್ದರು. ಆದರೆ ದೇವೇಗೌಡರು ಈಗ ತಾವು ಜಮೀರ್ ಅವರನ್ನು ಮೀರ್ ಸಾದಿಕ್ ವರ್ಗಕ್ಕೆ ಸೇರಿದವರೆಂದು ಹೇಳಿಯೇ ಇಲ್ಲ ಎಂದು ಯುಟರ್ನ್ ಹೊಡೆದಿದ್ದಾರೆ.