ನಾವು ಕಾಂಗ್ರೆಸ್ ನಿಷ್ಠರು, ನಿಮ್ಮ ನೋಟಿಸ್ಗೆ ಧಿಕ್ಕಾರವಿರಲಿ ಎಂದು ಮಾಜಿ ಸಂಸದ ಎಚ್.ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾವು ಒಳಗೊಂದು ಹೊರಗೊಂದು ನಡೆದುಕೊಂಡವರಲ್ಲ. ನಿಮ್ಮ ಆಪಾದನೆ ಕಪೋಲಕಲ್ಪಿತ, ನಮ್ಮ ವಿರುದ್ಧದ ಹುನ್ನಾರವಾಗಿದೆ ಎಂದು ತಿರುಗೇಟು ನೀಡಿದ್ದಾರೆ.
ಇನ್ನು ಕಾಲ ಮಿಂಚಿಲ್ಲ. ಬದಲಾವಣೆ ಮಾಡಿಕೊಳ್ಳಲು ಸಮಯವಿದೆ. ಹಿರಿಯರು ಯಾಕೆ ಹೇಳಿಕೆ ನೀಡುತ್ತಾರೆ ಎನ್ನುವುದನ್ನು ಅರಿತಿಕೊಳ್ಳಿ. ತಪ್ಪು ಮಾಡಿದಾಗ ಸರಿಪಡಿಸಿಕೊಳ್ಳುವಂತೆ ಹೇಳುವುದು ಹಿರಿಯ ನಾಯಕರ ಆದ್ಯ ಕರ್ತವ್ಯವಾಗಿರುತ್ತದೆ ಎಂದು ತಿರುಗೇಟು ನೀಡಿದ್ದಾರೆ.
ನಾವು ಕಾಂಗ್ರೆಸ್ ಪಕ್ಷದ ವಿರೋಧಿಗಳು. ನಮ್ಮ ಜೀವನವನ್ನೇ ಕಾಂಗ್ರೆಸ್ ಪಕ್ಷಕ್ಕೆ ಮುಡುಪಾಗಿಟ್ಟಿದ್ದೇವೆ. ಸಲಹೆಗಳನ್ನು ಒಳ್ಳೆಯ ರೀತಿಯಿಂದ ಸ್ವೀಕರಿಸುವುದು ಸೂಕ್ತ ಎಂದು ಮಾಜಿ ಸಂಸದ ಎಚ್.ವಿಶ್ವನಾಥ್ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.