Webdunia - Bharat's app for daily news and videos

Install App

ಯಶೋಮಾರ್ಗಕ್ಕೆ ಒಲಿದ ಗಂಗೆ.. ಬರದ ನಾಡಲ್ಲಿ ಭಗೀರಥನಾದ ರಾಕಿಂಗ್ ಸ್ಟಾರ್

Webdunia
ಮಂಗಳವಾರ, 28 ಮಾರ್ಚ್ 2017 (12:18 IST)
ರಾಕಿಂಗ್ ಸ್ಟಾರ್ ಯಶ್ ಬರದಿಂದ ತತ್ತರಿಸುತ್ತಿದ್ದ ಗ್ರಾಮಗಳಿಗೆ ನೀರು ಸರಬರಾಜು ಮಾಡುವ ಮೂಲಕ ಜನಸೇವೆ ಮಾಡಿದ್ದ ಬಗ್ಗೆ ಕೇಳಿದ್ವಿ. ಇದೀಗ, ಯಶ್ ಒಂದು ಕೆರೆ ಹೂಳೆತ್ತುವ ಮೂಲಕ ರೈತರ ಕೃಷಿಗೂ ನೆರವಾಗುವ ಕೆಲಸಕ್ಕೂ ಚಾಲನೆ ನೀಡಿದ್ದರು. ಒಳ್ಳೆಯ ಕೆಲಸ ಮಾಡುವವರಿಗೆ ದೈವ ಬಲವಿರುತ್ತದೆ ಎಂಬ ಮಾತು ಇಲ್ಲಿ ನಿಜವಾಗಿದೆ. ಯಶ್ ಕೈಗುಣ ಎಂಬಂತೆ ಕೆರೆ ಹೂಳೆತ್ತುವ ಸಂದರ್ಭ 8 ಅಡಿಯಲ್ಲೇ ಜಲ ಉಕ್ಕಿದ್ದು, ಗ್ರಾಮಸ್ಥರಿಗೆ ಸಂತಸ ತಂದಿದೆ.

ರಾಜ್ಯಾದ್ಯಂತ ಬರ ಕಾಡುತ್ತಿರುವ ಈ ಸಂದರ್ಭದಲ್ಲಿ ನೂರಾರು ಅಡಿ ಕೊರೆದರೂ ಒಂದನಿ ನೀರು ಸಿಗುತ್ತಿಲ್ಲ. ಅದರೆ, ಇಲ್ಲಿ ಎಂಟೇ ಅಡಿ ಗಂಗಾ ಮಾತೆ ಒಲಿದಿದ್ದಾಳೆ.

ಯಶೋಮಾರ್ಗಕ್ಕೆ ಒಲಿದ ಗಂಗೆ: ಕೊಪ್ಪಳ ಜಿಲ್ಲೆಯ ತಲ್ಲೂರಿನ 96 ಎಕರೆ ಪ್ರದೇಶದ ಕೆರೆಯ ಹೂಳೆತ್ತುವ ಕಾರ್ಯವನ್ನ ಯಶ್ ಅವರು ತಮ್ಮ ಯಶೋಮಾರ್ಗ ಫೌಂಡೇಶನ್ ಕೈಗೆತ್ತುಕೊಂಡಿದ್ದರು. ಫೆಬ್ರವರಿ 28ರಂದು ಪತ್ನಿ ರಾಧಿಕಾ ಪಂಡಿತ್ ಜೊತೆ ಆಗಮಿಸಿದ್ದ ಯಶ್, 4 ಕೋಟಿ ರೂ. ವೆಚ್ಚದಲ್ಲಿ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿದ್ದರು.

ಇದೀಗ, ಈ ಹೂಳೆತ್ತಿದ್ದ ಜಾಗದಲ್ಲಿ ನೀರು ಜಿನುಗಿದ್ದು, ನಟ ಯಶ್ ಈ ಗ್ರಾಮಕ್ಕೆ ಅಕ್ಷರಶಃ ಭಗೀರಥರಾಗಿದ್ದಾರೆ.

 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಷಪ್ರಾಶನದಿಂದ ಐದು ಹುಲಿಗಳು ಸಾವು ಪ್ರಕರಣ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಎಂದ ಸಿದ್ದರಾಮಯ್ಯ

ಒಡಿಶಾದ ಪುರಿ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ: ಮೂರು ಮಂದಿ ಸಾವು, ಹಲವರಿಗೆ ಗಾಯ

ಉತ್ತರಾಖಂಡದ ಬಾಲಿಗಢದಲ್ಲಿ ಭೀಕರ ಮೇಘಸ್ಫೋಟ: ಪ್ರವಾಹದಲ್ಲಿ ಸಿಲುಕಿ 9 ಕಾರ್ಮಿಕರ ಕಣ್ಮರೆ

ಸಂವಿಧಾನದ ಬಗ್ಗೆ ಆರ್ ಎಸ್ಎಸ್ ನ ದತ್ತಾತ್ರೇಯ ಹೊಸಬಾಳೆ ಮಾತು ಒಪ್ಪಲ್ಲ: ಎಚ್ಎಂ ರೇವಣ್ಣ

ರಮೇಶ್ ಜಾರಕಿಹೊಳಿ ಸಿಡಿ ಮಾಡಿದವರು ಯಾರೆಂದು ಹೇಳಿದ ಬಸನಗೌಡ ಪಾಟೀಲ್ ಯತ್ನಾಳ್

ಮುಂದಿನ ಸುದ್ದಿ
Show comments