Webdunia - Bharat's app for daily news and videos

Install App

ಲಂಚ ಸಾರ್ ಲಂಚ.. B ಖಾತೆಯಿಂದ A ಖಾತೆಗೆ ವರ್ಗಾಯಿಸಲು ಜಿಬಿಎ ಅಧಿಕಾರಿಗಳ ಲಂಚ: ಕ್ಲಾಸ್ ತೆಗೆದುಕೊಂಡ ಜನ Video

ಕೃಷ್ಣವೇಣಿ ಕೆ
ಶುಕ್ರವಾರ, 7 ಆಗಸ್ಟ್ 2026 (11:23 IST)
Photo Credit: X
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ರಾಜರಾಜೇಶ್ವರಿನಗರ ವಲಯ ಕಚೇರಿಯಲ್ಲಿ ಅಧಿಕಾರಿಗಳ ಲಂಚಾವತಾರ ಹಾಗೂ ಗೂಂಡಾ ವರ್ತನೆ ಮಿತಿಮೀರಿದ್ದು, ಸಾರ್ವಜನಿಕರ ಆಕ್ರೋಶ ಮುಗಿಲು ಮುಟ್ಟಿದೆ.
 
ಆಸ್ತಿಯ 'B' ಖಾತೆಯಿಂದ 'A' ಖಾತೆಗೆ ಪರಿವರ್ತನೆ  ಮಾಡಿಕೊಡಲು ಜಂಟಿ ಆಯುಕ್ತರ ಸಹಿ ಬೇಕಿದ್ದಲ್ಲಿ ಭಾರೀ ಪ್ರಮಾಣದ ಲಂಚ ನೀಡಲೇಬೇಕು ಎಂಬ ಅಸಲಿ ದಂಧೆ ಬೆಳಕಿಗೆ ಬಂದಿದೆ.

 

ಲಂಚ ನೀಡಿದರೆ ಮಾತ್ರ ಸಹಿ

 
ರಾಜರಾಜೇಶ್ವರಿನಗರ ವ್ಯಾಪ್ತಿಯಲ್ಲಿ ಆಸ್ತಿ ಹೊಂದಿರುವ ನಾಗರಿಕರು ತಮ್ಮ ಆಸ್ತಿಯನ್ನು 'B' ಖಾತೆಯಿಂದ 'A' ಖಾತೆಗೆ ವರ್ಗಾಯಿಸಲು ನಿಯಮಾನುಸಾರ ಅರ್ಜಿ ಸಲ್ಲಿಸಿದರೂ, ಅಧಿಕಾರಿಗಳು ಹತ್ತಾರು ನೆಪ ಹೇಳಿ ಅಲೆಸುತ್ತಿದ್ದಾರೆ. ಲಂಚದ ಹಣ ಕೈಸೇರಿದರೆ ಮಾತ್ರ ಜಂಟಿ ಆಯುಕ್ತರು ಕಡತಕ್ಕೆ ಸಹಿ ಹಾಕುತ್ತಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. 
 
ನ್ಯಾಯ ಕೇಳಲು ಕಚೇರಿಗೆ ಬರುವ ಸಾರ್ವಜನಿಕರು ಹಾಗೂ ಆಸ್ತಿ ಮಾಲೀಕರೊಂದಿಗೆ ಕಚೇರಿಯ ಸಿಬ್ಬಂದಿ ಮತ್ತು ಅಧಿಕಾರಿಗಳು ಕನಿಷ್ಠ ಸೌಜನ್ಯವೂ ಇಲ್ಲದೆ ಅಸಭ್ಯವಾಗಿ, ಗೂಂಡಾಗಳಂತೆ ವರ್ತಿಸುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ. ಎಲ್ಲಾ ಕಾಯ್ದೆ-ಕಾನೂನು ಮತ್ತು ಸರಿಯಾದ ದಾಖಲೆಗಳಿದ್ದರೂ ಸಹ ಕಮಿಷನ್ ನೀಡದಿದ್ದರೆ ಕಡತಗಳನ್ನು ತಿಂಗಳಾನುಗಟ್ಟಲೆ ಬಾಕಿ ಇಟ್ಟು ಸಾರ್ವಜನಿಕರಿಗೆ ಅನಗತ್ಯ ಕಿರುಕುಳ ನೀಡಲಾಗುತ್ತಿದೆ.
 
GBA ಕಚೇರಿಗಳಲ್ಲಿ ಪಾರದರ್ಶಕ ಆಡಳಿತ ತರಬೇಕಾದ ಅಧಿಕಾರಿಗಳೇ ಈ ರೀತಿ ಕಮಿಷನ್ ದಂಧೆಯಲ್ಲಿ ತೊಡಗಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ತಕ್ಷಣವೇ ಲೋಕಾಯುಕ್ತ ಹಾಗೂ ಹಿರಿಯ ಅಧಿಕಾರಿಗಳು ರಾಜರಾಜೇಶ್ವರಿನಗರ ವಲಯ ಕಚೇರಿಯ ಮೇಲೆ ದಾಳಿ ನಡೆಸಿ, ಲಂಚಕೋರ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
pic.twitter.com/Sqsd4tBiyd

 

— DEEPU GOWDRU (@DEEPUVAJRAMUNI) August 6, 2026

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಮಮಂದಿರದ ಪ್ರತಿಯೊಂದ ನಿರ್ಧಾರಗಳನ್ನು ಮೋದಿಯೇ ಮಾಡಿದ್ದರಿಂದ ದೇಣಿಗೆ ವಿವಾದಕ್ಕೂ ಅವರೇ ಉತ್ತರಿಸಬೇಕು

ಭಾರತೀಯ ಮೂಲದ ಯುವತಿಯನ್ನು ಕೊಂದ 7 ತಿಂಗಳ ಬಳಿಕ ಆಕೆಯ ಪ್ರಿಯಕರ ಅರೆಸ್ಟ್‌

ಡಿಕ್ಕಿಯ ರಭಸಕ್ಕೆ ಸೇತುವೆಯಿಂದ ಕೆಳಗೆ ಬಿದ್ದ ಬೆಂಗಳೂರಿಗೆ ಬರುತ್ತಿದ್ದ ವೋಲ್ವೋ ಬಸ್‌, 40 ಮಂದಿಗೆ ಗಾಯ, Video

ಬಿಡದಿ ಪಾದಯಾತ್ರೆಗೆ ಇದಕ್ಕಿಂತ ಶ್ರೇಷ್ಠವಾದ ಆಶೀರ್ವಾದ ಬೇರೊಂದಿರಲು ಸಾಧ್ಯವಿಲ್ಲ, ವಿಡಿಯೋ ಹಂಚಿಕೊಂಡ ನಿಖಿಲ್ ಕುಮಾರಸ್ವಾಮಿ

ಬಿಡದಿ ಟೌನ್‌ಶಿಪ್‌: ಜಾಮೀನು ನೀಡಲು ಇಚ್ಛೆಯಿಲ್ಲದವರಿಗೆ ಒತ್ತಾಯವಿಲ್ಲ

ಮುಂದಿನ ಸುದ್ದಿ
Show comments