ವಿಬ್ಗಯಾರ್ ಶಾಲೆಯ ಸಂಸ್ಥಾಪಕ ಅಧ್ಯಕ್ಷ ರುಸ್ತುಂ ಕೇರವಾಲ ಅವರನ್ನು ಡಿಯು ಡಮಾನ್ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಐಪಿಸಿ ಸೆಕ್ಷನ್ 21, 201 ಅಡಿಯಲ್ಲಿ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಲಾಗಿದೆ. ವಿಬ್ಗಯಾರ್ ಶಾಲೆಯ ಬಾಲಕಿಯ ಮೇಲೆ ಅತ್ಯಾಚಾರ ಘಟನೆಗೆ ಸಂಬಂಧಿಸಿದಂತೆ ರುಸ್ತುಂ ಕೇರವಾಲರನ್ನು ಬಂಧಿಸಲಾಗಿದೆ.
ಅತ್ಯಾಚಾರ ಘಟನೆಯ ನಂತರ ಅವರು ತಲೆತಪ್ಪಿಸಿಕೊಂಡಿದ್ದರು. ರುಸ್ತುಂ ಕೇರವಾಲಾ ಬೆಂಗಳೂರಿನಲ್ಲಿ ಪೋಷಕರು ಕೇಳಿದ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿರಲಿಲ್ಲ. ಅಲ್ಲದೇ ಅತ್ಯಾಚಾರ ಸಾಕ್ಷ್ಯಗಳನ್ನು ನಾಶಪಡಿಸುವ ಆರೋಪವನ್ನು ಅವರ ವಿರುದ್ಧ ಹೊರಿಸಲಾಗಿದೆ.ಈ ಕುರಿತು ಪೊಲೀಸ್ ಆಯುಕ್ತ ಎಂ.ಎನ್. ರೆಡ್ಡಿ ಸುದ್ದಿಗೋಷ್ಠಿ ನಡೆಸಿ ಈ ವಿಷಯವನ್ನು ತಿಳಿಸಿದ್ದಾರೆ.
ಹಿಂದಿನ ಸಂಸ್ಥೆಯಲ್ಲಿ ಅತ್ಯಾಚಾರ ಆರೋಪಿಯನ್ನು ವಜಾ ಮಾಡಿದ್ದರೂ ಅವನ ಪೂರ್ವಾಪರ ವಿಚಾರಿಸದೇ ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ ಎಂದು ರೆಡ್ಡಿ ತಿಳಿಸಿದ್ದಾರೆ. ಅಲ್ಲದೇ ಆರೋಪದ ಬಗ್ಗೆ ಪೊಲೀಸರಿಗೆ ಕೂಡಲೇ ಮಾಹಿತಿ ನೀಡದೇ ಬಚ್ಚಿಡುವ ಯತ್ನ ಮಾಡಲಾಗಿದೆ ಎಂದು ರುಸ್ತುಂ ವಿರುದ್ಧ ಆರೋಪಿಸಲಾಗಿದೆ.