Webdunia - Bharat's app for daily news and videos

Install App

ಮಳೆ ಬಂದರೂ ತರಕಾರಿ ಬೆಲೆ ಇಳಿಕೆಯಾಗಿಲ್ಲ, ದೈನಂದಿನ ಬಳಕೆಯ ತರಕಾರಿ ಬೆಲೆ ಎಷ್ಟಿದೆ

Krishnaveni K
ಗುರುವಾರ, 13 ಜೂನ್ 2024 (10:49 IST)
ಬೆಂಗಳೂರು: ಬೇಸಿಗೆಯಲ್ಲಿ ನೀರಿಲ್ಲದ ಕಾರಣ ತರಕಾರಿ ಬೆಲೆ ಏರಿಕೆಯಾಗಿದೆ ಎನ್ನಲಾಗುತ್ತಿತ್ತು. ಆದರೆ ಈಗ ಮಳೆ ಬಂದರೂ ತರಕಾರಿ ಬೆಲೆ ಮಾತ್ರ ಬೆಂಗಳೂರಿನಲ್ಲಿ ದಿನೇ ದಿನೇ ಏರಿಕೆಯಾಗುತ್ತಲೇ ಇದೆ.

ಈ ಬಾರಿ ಕೆಲವೆಡೆ ಅತಿಯಾದ ಮಳೆಯಾಗಿ ಬೆಳೆ ಹಾನಿಯಾಗಿದೆ. ಹೀಗಾಗಿ ತರಕಾರಿ ಬೆಲೆ ಮತ್ತೆ ಏರಿಕೆಯಾಗುತ್ತಲೇ ಇದೆ. ಕೆಲವು ದಿನಗಳ ಹಿಂದೆಯೇ ಬೀನ್ಸ್ ಬೆಲೆ 200 ರ ಗಡಿ ದಾಟಿತ್ತು. ಕ್ಯಾರೆಟ್, ಬಟಾಣಿ ಬೆಲೆಯೂ 150 ರ ಗಡಿ ದಾಟಿತ್ತು. ಈಗಿನ ಪ್ರಕಾರ ಬೀನ್ಸ್ ಕೊಂಚ ಇಳಿಕೆಯಾದರೂ ನವಿಲುಕೋಸು,  ಬಟಾಣಿ ಬೆಲೆ 100 ಕ್ಕಿಂತೂ ಹೆಚ್ಚೇ ಇದೆ.

ದೈನಂದಿನವಾಗಿ ಹೆಚ್ಚಾಗಿ ಬಳಕೆಯಾಗುವ ಬೀನ್ಸ್ ,ಕ್ಯಾರೆಟ್, ಬಟಾಣಿ, ಟೊಮೆಟೊ ಬೆಲೆಗಳಲ್ಲಿ ಮತ್ತೆ ಏರಿಕೆಯಾಗಿದೆ. 200 ರ ಗಡಿ ದಾಟಿದ್ದ ಬೀನ್ಸ್ 100 ರೊಳಗೆ ಬಂದು ನಿಂತಿತ್ತು. ಆದರೆ ಈಗ 80-100 ರವರೆಗೆ ಬಂದಿದೆ. ಇದ್ದಿದ್ದರಲ್ಲಿ ಬೆಂಡೆಕಾಯಿ ಮಾತ್ರ ಇಳಿಕೆಯಾಗಿದ್ದು ಸದ್ಯಕ್ಕೆ 30 ರೂ.ವರೆಗೆ ಬಂದು ನಿಂತಿದೆ.

ಕ್ಯಾರಟ್ 80 ರೂ., ನವಿಲುಕೋಸು 100 ರೂ., ದಪ್ಪ ಮೆಣಸಿನಕಾಯಿ 60-70 ರೂ., ಟೊಮೆಟೊ 50 ರೂ., ಆಲೂಗಡ್ಡೆ 40 ರೂ.ವರೆಗೆ ಬಂದು ನಿಂತಿದೆ. ಅಕಾಲಿಕ ಮಳೆಯಿಂದಾಗಿ ಕೆಲವೆಡೆ ಬೆಳೆ ನಷ್ಟವಾಗಿದೆ. ಹೀಗಾಗಿ ಈಗ ತರಕಾರಿ ಬೆಲೆ ಮತ್ತೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರೆಗ್ನೆನ್ಸಿಗೆ ಟ್ರೈ ಮಾಡುತ್ತಿದ್ದರೆ ಮಹಿಳೆಯರು ಇದನ್ನು ಗಮನಿಸಬೇಕು ಅಂತಾರೆ ಡಾ ಪದ್ಮಿನಿ ಪ್ರಸಾದ್

ಅಂದು ಮುಖ್ಯಮಂತ್ರಿ ಆಗುವ ಆಸೆ ಈಡೇರಲಿಲ್ಲ ಎಂದು ಈಗ ಈಡೇರಿಸಿಕೊಳ್ತಾರಾ ಮಲ್ಲಿಕಾರ್ಜುನ ಖರ್ಗೆ

Karnataka Weather: ತಣ್ಣಗಾಯಿತೇ ಮಳೆಯ ಅಬ್ಬರ, ಹವಾಮಾನ ಬದಲಾವಣೆ ತಪ್ಪದೇ ಗಮನಿಸಿ

ಧರ್ಮಸ್ಥಳ: 15 ಶವ ಹೂತಿಟ್ಟ ಸ್ಥಳವನ್ನು ಗುರುತಿಸಿದ ದೂರುದಾರ, ಪ್ರದೇಶಕ್ಕೆ ಗನ್‌ಮ್ಯಾನ್ ಭದ್ರತೆ

ನಾಳೆ ನಾಗರಪಂಚಮಿ: ನಾಗದೋಷಗಳಿಗೆ ಈ ದಿನ ವಿಶೇಷ ಪೂಜೆ ನೆರವೇರಿಸಿದ್ರೆ ದೂರವಾಗುತ್ತೆ ಸಂಕಷ್ಟ

ಮುಂದಿನ ಸುದ್ದಿ
Show comments