Webdunia - Bharat's app for daily news and videos

Install App

ಮಳೆ ಬಂದರೂ ತರಕಾರಿ ಬೆಲೆ ಇಳಿಕೆಯಾಗಿಲ್ಲ, ದೈನಂದಿನ ಬಳಕೆಯ ತರಕಾರಿ ಬೆಲೆ ಎಷ್ಟಿದೆ

Krishnaveni K
ಗುರುವಾರ, 13 ಜೂನ್ 2024 (10:49 IST)
ಬೆಂಗಳೂರು: ಬೇಸಿಗೆಯಲ್ಲಿ ನೀರಿಲ್ಲದ ಕಾರಣ ತರಕಾರಿ ಬೆಲೆ ಏರಿಕೆಯಾಗಿದೆ ಎನ್ನಲಾಗುತ್ತಿತ್ತು. ಆದರೆ ಈಗ ಮಳೆ ಬಂದರೂ ತರಕಾರಿ ಬೆಲೆ ಮಾತ್ರ ಬೆಂಗಳೂರಿನಲ್ಲಿ ದಿನೇ ದಿನೇ ಏರಿಕೆಯಾಗುತ್ತಲೇ ಇದೆ.

ಈ ಬಾರಿ ಕೆಲವೆಡೆ ಅತಿಯಾದ ಮಳೆಯಾಗಿ ಬೆಳೆ ಹಾನಿಯಾಗಿದೆ. ಹೀಗಾಗಿ ತರಕಾರಿ ಬೆಲೆ ಮತ್ತೆ ಏರಿಕೆಯಾಗುತ್ತಲೇ ಇದೆ. ಕೆಲವು ದಿನಗಳ ಹಿಂದೆಯೇ ಬೀನ್ಸ್ ಬೆಲೆ 200 ರ ಗಡಿ ದಾಟಿತ್ತು. ಕ್ಯಾರೆಟ್, ಬಟಾಣಿ ಬೆಲೆಯೂ 150 ರ ಗಡಿ ದಾಟಿತ್ತು. ಈಗಿನ ಪ್ರಕಾರ ಬೀನ್ಸ್ ಕೊಂಚ ಇಳಿಕೆಯಾದರೂ ನವಿಲುಕೋಸು,  ಬಟಾಣಿ ಬೆಲೆ 100 ಕ್ಕಿಂತೂ ಹೆಚ್ಚೇ ಇದೆ.

ದೈನಂದಿನವಾಗಿ ಹೆಚ್ಚಾಗಿ ಬಳಕೆಯಾಗುವ ಬೀನ್ಸ್ ,ಕ್ಯಾರೆಟ್, ಬಟಾಣಿ, ಟೊಮೆಟೊ ಬೆಲೆಗಳಲ್ಲಿ ಮತ್ತೆ ಏರಿಕೆಯಾಗಿದೆ. 200 ರ ಗಡಿ ದಾಟಿದ್ದ ಬೀನ್ಸ್ 100 ರೊಳಗೆ ಬಂದು ನಿಂತಿತ್ತು. ಆದರೆ ಈಗ 80-100 ರವರೆಗೆ ಬಂದಿದೆ. ಇದ್ದಿದ್ದರಲ್ಲಿ ಬೆಂಡೆಕಾಯಿ ಮಾತ್ರ ಇಳಿಕೆಯಾಗಿದ್ದು ಸದ್ಯಕ್ಕೆ 30 ರೂ.ವರೆಗೆ ಬಂದು ನಿಂತಿದೆ.

ಕ್ಯಾರಟ್ 80 ರೂ., ನವಿಲುಕೋಸು 100 ರೂ., ದಪ್ಪ ಮೆಣಸಿನಕಾಯಿ 60-70 ರೂ., ಟೊಮೆಟೊ 50 ರೂ., ಆಲೂಗಡ್ಡೆ 40 ರೂ.ವರೆಗೆ ಬಂದು ನಿಂತಿದೆ. ಅಕಾಲಿಕ ಮಳೆಯಿಂದಾಗಿ ಕೆಲವೆಡೆ ಬೆಳೆ ನಷ್ಟವಾಗಿದೆ. ಹೀಗಾಗಿ ಈಗ ತರಕಾರಿ ಬೆಲೆ ಮತ್ತೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments