Webdunia - Bharat's app for daily news and videos

Install App

ಏರಿದ ತರಕಾರಿ ಬೆಲೆ ಇಳಿಯುವ ಲಕ್ಷಣವಿಲ್ಲ, ಬೀನ್ಸ್ ಸದ್ಯಕ್ಕೆ ಮುಟ್ಟೋ ಹಾಗೇ ಇಲ್ಲ

Krishnaveni K
ಮಂಗಳವಾರ, 21 ಮೇ 2024 (11:16 IST)
ಬೆಂಗಳೂರು: ಮಳೆಯ ಕೊರತೆಯಿಂದಾಗಿ ರಾಜ್ಯದಲ್ಲಿ ತರಕಾರಿ ಬೆಲೆ ಗಗನಕ್ಕೇರಿದೆ. ಅದರಲ್ಲೂ ಬೀನ್ಸ್ ಬೆಲೆ ಕೇಳಿದರೆ ಸದ್ಯಕ್ಕೆ ಮುಟ್ಟೋ ಹಾಗೇ ಇಲ್ಲ. ತರಕಾರಿಗಳ ಸದ್ಯದ ಮಾರುಕಟ್ಟೆ ಬೆಲೆ ಡೀಟೈಲ್ ಇಲ್ಲಿದೆ.

ಬಿರುಬಿಸಿಲಿನಿಂದಾಗಿ ರಾಜ್ಯದಲ್ಲಿ ತರಕಾರಿ ಬೆಳೆ ಕಡಿಮೆಯಾಗಿದೆ. ಬೆಳೆದ ತರಕಾರಿ ಗಿಡಗಳಿಗೆ ನೀರಿಲ್ಲದೇ ಒಣಗಿ ಹೋಗಿವೆ. ಹೀಗಾಗಿ ತರಕಾರಿ ಬೆಲೆ ಕಳೆದ ಮೂರು ವಾರಗಳಿಂದ ವಿಪರೀತ ಹೆಚ್ಚಾಗಿದೆ. ಅದರಲ್ಲೂ ಬೀನ್ಸ್, ಬಟಾಣಿ, ಬೆಳ್ಳುಳ್ಳಿ, ಶುಂಠಿ, ಹಸಿಮೆಣಸಿನಕಾಯಿ ಇತ್ಯಾದಿ ದಿನನಿತ್ಯ ಉಪಯೋಗಿಸುವ ತರಕಾರಿಗಳ ಬೆಲೆ ವಿಪರೀತ ಏರಿಕೆಯಾಗಿದೆ. ಸದ್ಯಕ್ಕೆ ತರಕಾರಿಯೇ ಮಧ‍್ಯಮ ವರ್ಗದವರಿಗೆ ಹೊರೆಯಾಗಿದೆ.

ಕಳೆದ ಒಂದು ವಾರದಿಂದ ರಾಜ್ಯದ ಹಲವೆಡೆ ಮಳೆಯಾಗಿದೆ. ಆದರೆ ಇದುವರೆಗೆ ತರಕಾರಿ ಬೆಲೆ ಇಳಿದಿಲ್ಲ. ಮುಂದೆ ಎರಡು ವಾರಗಳ ನಂತರ ತರಕಾರಿ ಬೆಲೆ ಇಳಿಯುವ ನಿರೀಕ್ಷೆಯಿದೆ. ಸದ್ಯಕ್ಕೆ ಬೀನ್ಸ್ ಬೆಲೆ 235 ರೂ.ಗೆ ಏರಿಕೆಯಾಗಿದೆ. 140 ರೂ.ಇದ್ದ ಬಟಾಣಿ 190 ರೂ.ಗೆ ಏರಿಕೆಯಾಗಲಿದೆ. 300 ರೂ. ಇದ್ದ ಬೆಳ್ಳುಳ್ಳಿ 318 ರೂ. ತಲುಪಿದೆ. 180 ರೂ. ಇದ್ದ ಶುಂಠಿ 195 ರೂ. ತಲುಪಿದೆ. ಹಸಿಮೆಣಸಿನಕಾಯಿ 110 ರೂ. ತಲುಪಿದೆ.

ಕ್ಯಾರೆಟ್ 80, ನವಿಲುಕೋಸು 60 ಆಲೂಗಡ್ಡೆ 50, ಹಾಗಲಕಾಯಿ 82, ಬದನೆಕಾಯಿ, ಹಾಗಲಕಾಯಿ 70 ರೂ., ಈರುಳ್ಳಿ 42 ರೂ. ಗೆ ತಲುಪಿದೆ. ಸದ್ಯಕ್ಕೆ ಮಧ್ಯಮವರ್ಗದವರಿಗೆ ತರಕಾರಿ ಖರೀದಿ ಮಾಡುವುದೇ ಹೊಡೆಯಾಗಿದೆ. ಬೆಲೆ ಕೇಳಿ ತರಕಾರಿ ಖರೀದಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇಸ್ರೇಲ್, ಇರಾನ್ ಯುದ್ಧ ಆದ್ರೆ ಟೆನ್ಷನ್ ಪಾಕಿಸ್ತಾನಕ್ಕೆ: ಯಾಕೆ ಗೊತ್ತಾ

ಅಹಮದಾಬಾದ್ ವಿಮಾನ ಪತನ: ಸಾವಿನ ಸಂಖ್ಯೆ 274 ಕ್ಕೆ ಏರಿಕೆ

ವಿಮಾನದಲ್ಲಿ ಯಾವಾಗಲೂ ಎಲ್ಲಿ ಕೂತರೆ ಸೇಫ್ ಇಲ್ಲಿದೆ ನೋಡಿ ವಿವರ

Karnataka Weather: ಜೂನ್ 16 ರವರೆಗೂ ಈ ಜಿಲ್ಲೆಗಳ ಹವಾಮಾನ ತಪ್ಪದೇ ಗಮನಿಸಿ

ಅಹಮ್ಮದಾಬಾದ್ ವಿಮಾನ ದುರಂತದಲ್ಲಿ ಸಾವಿಗೀಡಾದವರ ಒಟ್ಟು ಸಂಖ್ಯೆ ಇಲ್ಲಿದೆ

ಮುಂದಿನ ಸುದ್ದಿ
Show comments