Webdunia - Bharat's app for daily news and videos

Install App

ಸಚಿವ ಎಂ.ಬಿ.ಪಾಟೀಲರನ್ನ ಮಂಪರು ಪರೀಕ್ಷೆಗೊಳಪಡಿಸಿ: ವಿ.ಸೋಮಣ್ಣ

Webdunia
ಮಂಗಳವಾರ, 12 ಸೆಪ್ಟಂಬರ್ 2017 (14:52 IST)
ಬೆಂಗಳೂರು: ಚುನಾವಣೆ ಸಮೀಪಿಸುತ್ತಿದ್ದಂತೆ ವೀರಶೈವ ಲಿಂಗಾಯತರ ಮಧ್ಯೆ ಒಡಕು ಮೂಡಿಸಲು ಸಚಿವ ಎಂ.ಬಿ.ಪಾಟೀಲ್ ಯತ್ನಿಸುತ್ತಿದ್ದಾರೆ. ಅಂತಹ ಪುಣ್ಯಾತ್ಮನಿಗೆ ನೆಮ್ಮದಿ ಸಿಗಂದಂತಾಗಲಿ ಎಂದು ಮಾಜಿ ಸಚಿವ ವಿ.ಸೋಮಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಎಂ.ಬಿ.ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಸಿದ್ದಗಂಗಾ ಶ್ರೀಗಳ ಹೇಳಿಕೆಯನ್ನು ತಿರುಚಿದ್ದಾರೆ. ಸ್ವಾಮೀಜಿ ಲಿಂಗಾಯತ ಧರ್ಮದ ಪರ ಎಂದಿರುವುದು ಸರಿಯಲ್ಲ. ನೀರಾವರಿ ಸಚಿವರಿಗೆ ಇದು ಶೋಭೆ ತರುವುದಿಲ್ಲ ಎಂದು ಹೇಳಿದ್ದಾರೆ.

ಶ್ರೀಗಳು ಸಮಾಜ ಒಗ್ಗಟ್ಟಿನಿಂದ ಹೋಗಬೇಕೆಂದಿದ್ದಾರೆ. ಸಮಾಜ ಬಾಂಧವರಲ್ಲಿ ನಾನು ವಿನಂತಿ ಮಾಡುತ್ತೇನೆ. ಸಿದ್ದಗಂಗಾ ಶ್ರೀಗಳು ಮಠ ಅಥವಾ ಒಂದು ಸಮಾಜಕ್ಕೆ ಸೀಮಿತವಾಗಿಲ್ಲ. ಎಲ್ಲಾ ವರ್ಗ, ದುರ್ಬಲರಿಗೂ ಆಶ್ರಯದಾತರಾಗಿದ್ದಾರೆ. ಪ್ರತಿ ದಿನ 10 ಸಾವಿರ ಮಕ್ಕಳಿಗೆ ವಿದ್ಯಾದಾನ, ಅನ್ನದಾನ ಮಾಡುತ್ತಿದ್ದಾರೆ. ಅಂತಹ ತಪಸ್ವಿಗಳ ಹೆಸರು ಪದೇ ಪದೇ ಹೇಳುವುದು ಎಷ್ಟರ ಮಟ್ಟಿಗೆ ಸರಿ. ಶ್ರೀಗಳು ತಮ್ಮ ಭಾವನೆಗಳನ್ನು ತಿಳಿಸಿದ್ದಾರೆ. ಎಂ.ಬಿ.ಪಾಟೀಲರು ಆಣೆ ಮಾಡುತ್ತೇನೆ ಎಂದಿದ್ದಾರೆ. ಸಚಿವರಾಗಿ ಮೊದಲು ಆ ಕೆಲಸ ಮಾಡಲಿ. ಮುತ್ಸದ್ದಿಯ ಹೊಟ್ಟೆಯಲ್ಲಿ ಎಂಥವನು ಹುಟ್ಟಿದ್ದಾನೆ ಎಂದು ಕಿಡಿಕಾರಿದ್ದಾರೆ.

2018ರಲ್ಲಿ ಬಿಎಸ್ ವೈ ಸಿಎಂ ಎಂದು ಘೋಷಣೆಯಾದ ಕೂಡಲೇ ಹೊಟ್ಟೆಯುರಿ ಶುರುವಾಗಿದೆ. ನಮ್ಮ ಧರ್ಮ ಕಾಪಾಡಲು ಮಹಾಸಭಾ, ಸ್ವಾಮೀಜಿಗಳು ಇದ್ದಾರೆ. ಹೀಗಿರುವಾಗ ಏಕೆ ಪಾಟೀಲರು ಹೀಗೆ ಮಾತನಾಡುತ್ತಾರೆ. ಸಮಾಜ ಇಬ್ಭಾಗ ಮಾಡುವುದು ಒಳಿತಲ್ಲ ಎಂದಿದ್ದಾರೆ. ಅವರು ಸಮಾಜವನ್ನು ಗೊಂದಲಕ್ಕೀಡು ಮಾಡಿದ್ದಾರೆ. ಅವರನ್ನು ಮಂಪರು ಪರೀಕ್ಷೆಗೊಳಪಡಿಸಬೇಕು. ಸಚಿವರ ಗಾಂಭೀರ್ಯತೆ ಬಿಟ್ಟು ಮಾತಾಡುತ್ತಿದ್ದಾರೆ. ವೀರಶೈವ ಮಹಾಸಭಾ ಎಲ್ಲವನ್ನೂ ನೊಡಿಕೊಳ್ಳಲಿದೆ. ನಮ್ಮ ಸಮಾಜವನ್ನು ಬೀದಿಗೆ ತರೋರಿಗೆ ಬುದ್ಧಿ ಹೇಳಬೇಕು. ಇಂದು ಸಂಜೆ 5 ಕ್ಕೆ ವೀರಶೈವ ಮಹಾಸಭಾದಿಂದ ಶ್ರೀಗಳನ್ನು ಭೇಟಿಯಾಗಿ ಈ ಕುರಿತು ಚರ್ಚಿಸುವುದಾಗಿ ತಿಳಿಸಿದ್ದಾರೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೆಪಿಎಸ್‍ಸಿ ಪರೀಕ್ಷಾರ್ಥಿಗಳ ಹೋರಾಟಕ್ಕೆ ಬಿಜೆಪಿ ಬೆಂಬಲ: ಛಲವಾದಿ ನಾರಾಯಣಸ್ವಾಮಿ

Operation Sindoor: ಸೇನಾ ಕಾರ್ಯಾಚರಣೆಯಲ್ಲಿ 100 ಉಗ್ರರು ಫಿನೀಷ್‌: ವಿಪಕ್ಷಗಳಿಗೆ ರಾಜನಾಥ್‌ ಮಾಹಿತಿ

Karnataka BJP: ಆಪರೇಷನ್ ಸಿಂಧೂರ್ ಯಶಸ್ವಿಯಾಗಲೆಂದು ಬಿಜೆಪಿ ಪೂಜೆ

Rahul Gandhi: ಆಪರೇಷನ್ ಸಿಂದೂರ ಬಳಿಕ ರಾಹುಲ್ ಗಾಂಧಿ, ಖರ್ಗೆ ಇಷ್ಟು ಗಂಭೀರ ಯಾಕೆ: ನೆಟ್ಟಿಗರ ಪ್ರಶ್ನೆ

Operation Sindoor: ಸರ್ವಪಕ್ಷ ಸಭೆಗೆ ಮತ್ತೆ ಪ್ರಧಾನಿ ಮೋದಿ ಗೈರು: ವಿಪಕ್ಷಗಳ ಕೆಂಗಣ್ಣು

ಮುಂದಿನ ಸುದ್ದಿ
Show comments