Select Your Language

Notifications

webdunia
webdunia
webdunia
webdunia

ಪ್ರತ್ಯೇಕ ರಾಜ್ಯದ ಕೂಗನ್ನು ಮತ್ತೆ ಎಬ್ಬಿಸಿದ ಉಮೇಶ್ ಕತ್ತಿ

ಪ್ರತ್ಯೇಕ ರಾಜ್ಯದ ಕೂಗನ್ನು ಮತ್ತೆ ಎಬ್ಬಿಸಿದ ಉಮೇಶ್ ಕತ್ತಿ
ಬೆಳಗಾವಿ , ಸೋಮವಾರ, 15 ಸೆಪ್ಟಂಬರ್ 2014 (12:08 IST)
ಬೆಳಗಾವಿಯಲ್ಲಿ ಮಾಜಿ ಸಚಿವ ಉಮೇಶ್ ಕತ್ತಿ ಮತ್ತೆ ಪ್ರತ್ಯೇಕ ರಾಜ್ಯದ ಕೂಗನ್ನು ಎಬ್ಬಿಸಿದ್ದಾರೆ. ಬೆಂಗಳೂರಿನಿಂದ ಕುಳಿತು ಹೇಳಿಕೆ ನೀಡುವವರ ಬಗ್ಗೆ ನಾನು ಚಿಂತಿಸಬೇಕಿಲ್ಲ. ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಅವರಿಗೆ ಯಾವುದೇ ಚಿಂತೆ ಇಲ್ಲ. ಪ್ರತ್ಯೇಕ ರಾಜ್ಯಕ್ಕೆ ಹೋರಾಡುವುದು ನನ್ನ ಜನ್ಮಸಿದ್ಧ ಹಕ್ಕು ಎಂದು ಹೇಳಿಕೆ ನೀಡಿದ್ದಾರೆ. ವಾಟಾಳ್ ನಾಗರಾಜ್ ಬೆಂಗಳೂರಿನಲ್ಲಿ ಕುಳಿತು ಮಾತಾಡ್ತಾರೆ, ಆದರೆ ಉತ್ತರ ಕರ್ನಾಟಕದ ಪರಿಸ್ಥಿತಿ ಬಗ್ಗೆ ಅವರಿಗೆ ಯಾವುದೇ ಮಾಹಿತಿಯಿಲ್ಲ ಎಂದು ಉಮೇಶ್ ಕತ್ತಿ ಹೇಳಿದರು.

ನಾನು ನನ್ನ ಹೇಳಿಕೆಗೆ ಬದ್ಧವಾಗಿದ್ದೇನೆ, ಅಚಲವಾಗಿದ್ದೇನೆ ಎಂದು ಕತ್ತಿ ಹೇಳಿದರು. ಈ ಭಾಗದ ಜನರ ಅಭಿವೃದ್ಧಿಗೆ ಹೋರಾಟ ಮಾಡುತ್ತೇನೆ. ಇನ್ನ ನನ್ನ ಉತ್ತರಕರ್ನಾಟಕದ ಬೇಡಿಕೆ ಎಂದು ಕತ್ತಿ ಹೇಳಿದರು.  ಈ ಕುರಿತು ಪ್ರತಿಕ್ರಿಯಿಸಿದ ವಾಟಾಳ್ ನಾಗರಾಜ್ ಎಂಇಎಸ್‌ಗೆ ಬೆಂಬಲ ಕೊಟ್ಟು ಪ್ರತ್ಯೇಕ ರಾಜ್ಯದ ಕೂಗನ್ನು ಎಬ್ಬಿಸಿದ್ದಾರೆ.

ಉತ್ತರ ಕರ್ನಾಟಕದ ಬಗ್ಗೆ ಹೋರಾಟ ಮಾಡುವುದಕ್ಕೆ ನಾನು ಸಿದ್ಧ. ಉತ್ತರ ಕರ್ನಾಟಕ ಅಭಿವೃದ್ಧಿಯಾಗಿಲ್ಲ ಎನ್ನುವುದು ನಿಜ. ಆದರೆ ಅದಕ್ಕಾಗಿ ರಾಜ್ಯವನ್ನೇ ವಿಭಜಿಸಬೇಕೆನ್ನುವುದು ಮೂರ್ಖತನ, ಉಮೇಶ್ ಕತ್ತಿ ಓರ್ವ ಹುಚ್ಚ, ಹುಚ್ಚ, ಬೆಳಗಾವಿಯನ್ನು ಉಮೇಶ್ ಕತ್ತಿ ಹಾಳು ಮಾಡಿದ್ದಾರೆ ಎಂದು ವಾಟಾಳ್ ಹೇಳಿದರು. 

Share this Story:

Follow Webdunia kannada