Webdunia - Bharat's app for daily news and videos

Install App

ಉಮೇಶ್ ಜಾಧವ್ ಆಟ ನಡೆಯೋದಿಲ್ಲ…

Webdunia
ಭಾನುವಾರ, 19 ಮೇ 2019 (13:22 IST)
ಚಿಂಚೋಳಿ ಬೈ ಎಲೆಕ್ಷನ್ ಮತದಾನ ಬಿರುಸಿನಿಂದ ಸಾಗಿದೆ. ಚಿಂಚೋಳಿ ಉಪ ಚುನಾವಣೆ ಮತದಾನ ಹಿನ್ನೆಲೆಯಲ್ಲಿ ಸಾಲಿನಲ್ಲಿ ನಿಂತು ಮತ ಚಲಾವಣೆ ಮಾಡಿದ್ದಾರೆ ಕಾಂಗ್ರೆಸ್ ಅಭ್ಯರ್ಥಿ ಸುಭಾಷ ರಾಠೋಡ.  

ಸೇರಿ ಬಡಾ ತಾಂಡಾದ ಬೂತ್ ನ. 165 ರಲ್ಲಿ ಮತದಾನ ಮಾಡಿದ್ದಾರೆ ಸುಭಾಷ ರಾಠೋಡ ಚಿಂಚೋಳಿ ಕಾಂಗ್ರೆಸ್ ಅಭ್ಯರ್ಥಿ.
ರಾಠೋಡ ಮತ್ತು ಅವರ ಧರ್ಮಪತ್ನಿ ತಮ್ಮ ಹಕ್ಕು ಚಲಾಯಿಸಿದ್ರು.

ರಟಕಲ್ ರೇವಣಸಿದ್ದೇಶ್ವರ ದರ್ಶನದ ನಂತರ ಮತದಾನ ಮಾಡಿದ ರಾಠೋಡ್, ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಅಲೆಯಿದೆ. ಜನರ ಆಶೀರ್ವಾದ ಮಾರಿಕೊಂಡು ಹೋದ ಉಮೇಶ್ ಜಾಧವ್ ತಕ್ಕ ಪಾಠ ಕಲಿಸಲು ಮತದಾರ ತಮ್ಮನ್ನು ಬೆಂಬಲಿಸಲಿದ್ದಾರೆ ಎಂದರು.

ನಾನು ಹೊರಗಿನವನಲ್ಲ, ಇಲ್ಲಿಯೇ ಇದ್ದು ಕಳೆದ 20 ವರ್ಷಗಳಿಂದ ಕೆಲಸ ಮಾಡಿಕೊಂಡು ಬಂದಿದ್ದೇನೆ. ಆದರೆ ಬಂಜಾರ ಸಮಾಜದಲ್ಲಿ ಜಗಳ ಹಚ್ಚಿ ತನ್ನ ಸ್ವಾರ್ಥಕ್ಕಾಗಿ ಉಮೇಶ್ ಜಾಧವ್ ಬಂಜಾರ ಸಮುದಾಯವನ್ನು ಬಲಿಕೊಡುತ್ತಿದ್ದಾನೆ. ಜನ ಎಚ್ಚೆತ್ತಿದ್ದು ಅವರ ಆಟ ನಡೆಯಲ್ಲ. ತಮ್ಮ ಗೆಲುವು ನಿಶ್ಚಿತ ಅಂತ ಮತದಾನದ ನಂತರ ಸುಭಾಷ್ ರಾಠೋಡ್ ಹೇಳಿದ್ರು.



ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments