Select Your Language

Notifications

webdunia
webdunia
webdunia
webdunia

ಸಹೋದರಿಯನ್ನು ರಕ್ಷಿಸಲು ಧಾವಿಸಿದ ಇಬ್ಬರು ಸಹೋದರರ ದುರ್ಮರಣ

ಸಹೋದರಿಯನ್ನು ರಕ್ಷಿಸಲು ಧಾವಿಸಿದ ಇಬ್ಬರು ಸಹೋದರರ ದುರ್ಮರಣ
ತುಮಕೂರು , ಶುಕ್ರವಾರ, 12 ಡಿಸೆಂಬರ್ 2014 (11:05 IST)
ಬಟ್ಟೆ ಒಣಗಿಸುತ್ತಿದ್ದ ಸಂಧರ್ಭದಲ್ಲಿ ಅಗ್ನಿಸ್ಪರ್ಶಕ್ಕೆ ಸಿಲುಕಿದ ಸಹೋದರಿಯನ್ನು ರಕ್ಷಿಸು ಹೋದ ಆಕೆಯ ಇಬ್ಬರು ಅಣ್ಣಂದಿರು ಸಾವನ್ನಪ್ಪಿರುವ ಮನಕಲಕುವ ಘಟನೆ ಜಿಲ್ಲೆಯ ಮಧುಗಿರಿ ತಾಲೂಕಿನ ಶ್ಯಾನಗಾನಹಳ್ಳಿ ಎಂಬ ಗ್ರಾಮದಲ್ಲಿ ನಡೆದಿದೆ. 
 
ಮೃತ ಸಹೋದರರನ್ನು ನಾರಾಯಣಪ್ಪ(45) ಹಾಗೂ ರಾಮಚಂದ್ರಪ್ಪ(48) ಎನ್ನಲಾಗಿದ್ದು, ಸಹೋದರಿ ಈಶ್ವರಮ್ಮ ಎಂಬುವವರು ಹೋಗೆದಿದ್ದ ಬಟ್ಟೆಗಳನ್ನು ಒಣಗಿಸುವ ಸುವಾಗಿ ಆರಿಸಲು ಮುಂದಾಗಿದ್ದರು. ಈ ವೇಳೆ ತಮ್ಮ ಸಹೋದರಿ ವಿದ್ಯುತ್ ಅವಘಡಕ್ಕೆ ಸಿಲುಕಿದ್ದುದನ್ನು ಕಂಡ ಸಹೋದರರಿಬ್ಬರು ಆಕೆಯನ್ನು ರಕ್ಷಿಸಲು ಯತ್ನಿಸಿದ್ದಾರೆ. ಆದರೆ ದುರಾದೃಷ್ಟ ಎಂಬಂತೆ ಆಕೆ ಸುರಕ್ಷಿತವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಆದರೆ ಅಲ್ಪ-ಸ್ವಲ್ಪ ಗಾಯಗಳಾಗಿದ್ದು, ಆಕೆಯನ್ನು ಇಲ್ಲಿನ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ರಕ್ಷಿಸಲು ಧಾವಿಸಿದ ಇಬ್ಬರು ಸಹೋದರರು ವಿದ್ಯುತ್ ಅವಘಡದಲ್ಲಿ ಸಿಲುಕಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. 
 
ಘಟನಾ ಸ್ಥಳಕ್ಕೆ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. 

Share this Story:

Follow Webdunia kannada