Webdunia - Bharat's app for daily news and videos

Install App

ಬೇರೆ ಮದುವೆಯಾಗಬಾರದೆಂದು ನಾಲಿಗೆ, ತುಟಿ ಕಚ್ಚಿದನಂತೆ!

Webdunia
ಸೋಮವಾರ, 9 ಜನವರಿ 2017 (10:13 IST)
ಕೆ.ಜಿ ಹಳ್ಳಿಯಲ್ಲಿ ನಡೆದಿದ್ದ ಯುವತಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಪರಷ್ಪರ ಪ್ರೀತಿಸುತ್ತಿದ್ದ ಯುವಕ-ಯುವತಿ ಮದುವೆಯಾಗುವ ಉದ್ದೇಶದಿಂದ ಈ ನಾಟಕವನ್ನಾಡಿದ್ದರು ಎಂದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.
 
ಹೊಸ ವರ್ಷದಂದು ನಡೆದ ಎರಡು ಪ್ರತ್ಯೇಕ ಲೈಂಗಿಕ ದೌರ್ಜನ್ಯದ ಪ್ರಕರಣಗಳು ದೇಶಾದ್ಯಂತ ಖಂಡನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ತೀವ್ರ ತನಿಖೆ ನಡೆಸಿದ ಪೊಲೀಸರಿಗೆ ಯುವತಿ ಗೊಂದಲಮಯ ಹೇಳಿಕೆ ನೀಡುತ್ತಿದ್ದುದು ಹಲವು ಅನುಮಾನಗಳನ್ನು ಹುಟ್ಟಿಹಾಕಿತ್ತು. ಯುವಕನೊಬ್ಬ ಹಿಂಬಾಲಿಸಿ ತಬ್ಬಿ ತುಟಿ, ನಾಲಿಗೆ ಕಚ್ಚಿದ್ದ ಎಂದಿದ್ದ ಯುವತಿ ಮರುದಿನ ನಾನೇ ಕಚ್ಚಿಕೊಂಡೆ ಎಂದಿದ್ದಳು.
 
ಪೊಲೀಸರು ನೀಡಿದ್ದ ಸಿಸಿ ಟಿವಿ ದೃಶ್ಯಾವಳಿಯಲ್ಲಿದ್ದ ಆರೋಪಿಯನ್ನು ಗುರುತಿಸಿದ ಯುವತಿಯ ಮನೆಯವರು ಆತ ಇರ್ಷಾದ್ ಎಂಬಾತ ಎಂದು ಗುರುತಿಸಿದ್ದರು. ಯುವತಿಯ ಮೊಬೈಲ್ ಕಾಲ್ ವಿವರ ಪರಿಶೀಲಿಸಿದಾಗ ಆಕೆ ಹಿಂದಿನ ದಿನ ರಾತ್ರಿ ಇರ್ಷಾದ್‌ನೊಂದಿಗೆ ಮಾತನಾಡಿರುವುದು ಬೆಳಕಿಗೆ ಬಂದಿತ್ತು .
 
ತಕ್ಷಣ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾವಿಬ್ಬರು ಪ್ರೀತಿಸುತ್ತಿದ್ದೇವೆ. ಆಕೆಯನ್ನು ಬೇರೆ ಯಾರೂ ಮದುವೆಯಾಗಬಾರದೆಂದು ಹೀಗೆ ಮಾಡಿದ್ದೇನೆ ಎಂದು ಬಾಯ್ಬಿಟ್ಟಿದ್ದಾನೆ.
 
ಇರ್ಷಾದ್‌ಗೆ ಈಗಾಗಲೇ ಮದುವೆಯಾಗಿದ್ದು ಮೂರು ವರ್ಷದಿಂದ ಯುವತಿಯನ್ನು ಪ್ರೀತಿಸುತ್ತಿದ್ದ. ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದರೆ ಬೇರೆ ಯಾರೂ ಮದುವೆಯಾಗುವುದಿಲ್ಲ. ಪತ್ನಿಯನ್ನು ಒಪ್ಪಿಸಿ ತಾನೇ ಮದುವೆಯಾಗಬಹುದು ಎಂಬ ಉದ್ದೇಶದಿಂದ ಆತ ಹೀಗೆ ಮಾಡಿದ್ದಾನೆ. ಆತನ ತಂತ್ರಕ್ಕೆ ಯುವತಿಯೂ ಸಾಥ್ ನೀಡಿದ್ದಾಳೆ. 
 
ಪೊಲೀಸ್ ಬಂಧನದಲ್ಲಿರುವ ಆರೋಪಿಯನ್ನು ಇಂದು ಬೆಳಿಗ್ಗೆ 11 ಗಂಟೆಗೆ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗುತ್ತದೆ. 
 
ಆತನ ಮೇಲೆ ಆರೋಪ ಮಾಡಿದಂತಹ ಯುವತಿ ಮೇಲೆ ಸಹ ಕೇಸ್ ದಾಖಲಿಸಲು ಪೊಲೀಸರು ನಿರ್ಧರಿಸಿದ್ದಾರೆ. ಕಾನೂನು ತಜ್ಞರ ಸಲಹೆ ಪಡೆದು ಸದ್ಯದಲ್ಲಿಯೇ ಯುವತಿ ಮೇಲೆ ಕಾನೂನು ದುರ್ಬಳಕೆ, ಸಮಾಜದ ಮೇಲೆ ಕೆಟ್ಟ ಪರಿಣಾಮ
,ಪೊಲೀಸರ ಸಮಯ ವ್ಯರ್ಥ ಸೇರಿದಂತೆ ಇತರ ಆರೋಪಗಳಡಿ ದೂರು ದಾಖಲಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ