Webdunia - Bharat's app for daily news and videos

Install App

ರಕ್ತ ಚಂದನ ಮಾರಾಟ ಯತ್ನ: ನಾಲ್ವರ ಬಂಧನ

Webdunia
ಶುಕ್ರವಾರ, 27 ಮಾರ್ಚ್ 2015 (18:02 IST)
1.25 ಲಕ್ಷ ಮೌಲ್ಯದ ರಕ್ತ ಚಂದನವನ್ನು ಮಾರಲು ಯತ್ನಿಸುತ್ತಿದ್ದ ಮೂವರು ಮತ್ತು ಖರೀದಿ ಯತ್ನದಲ್ಲಿದ್ದ ಓರ್ವ ಆರೋಪಿ ಸೇರಿ ಒಟ್ಟು ನಾಲ್ವರು ಆರೋಪಿಗಳನ್ನು ನಗರ ಪೊಲೀಸರು ಇಂದು ಬಂಧಿಸಿದ್ದಾರೆ. 

ರಕ್ತ ಚಂದನವನ್ನು ಮಾರಲು ಯತ್ನಿಸುತ್ತಿದ್ದ ಮೂವರ ಬೆಂಗಳೂರು ಮೂಲದವರಾಗಿದ್ದು, ಬಂಧಿತರನ್ನು ಪಾರ್ಥಸಾರಥಿ, ಸುನೀಲ್ ಕುಮಾರ್ ಮತ್ತು ವಿಜಯ್ ಕುಮಾರ್ ಎಂದು ಗುರುತಿಸಲಾಗಿದೆ. ಇನ್ನು ಹಣವನ್ನು ತೆತ್ತು ಖರೀದಿಗೆ ಮುಂದಾಗಿದ್ದ ಬಂಧಿತನನ್ನು ಮಾಕ್ವಿ ಜಿಯಾಂಗ್ ಎಂದು ಹೇಳಲಾಗಿದ್ದು, ಚೀನಾ ಮೂಲದ ವ್ಯಕ್ತಿ ಎಂದು ತಿಳಿದು ಬಂದಿದೆ. 

ಬಂಧಿತರಿಂದ ಮಾತಲು ಯತ್ನಿಸುತ್ತಿದ್ದ 1.25 ಲಕ್ಷ ಮೌಲ್ಯದ ರಕ್ತ ಚಂದನ 2.50 ಲಕ್ಷ ನಗದು ಹಣ, ಇತರೆ ದೇಶಗಳ ಕರೆನ್ಸಿಗಳು ಮತ್ತು 8 ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. 

ಈ ಬಂಧನ ಕಾರ್ಯಾಚರಣೆಯನ್ನು ನಗರದ ಕೋರಮಂಗಲ ಠಾಣಾ ಪೊಲೀಸರು ನಡೆಸಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments