Webdunia - Bharat's app for daily news and videos

Install App

ನಾಳೆ ಕರ್ನಾಟಕ ಬಂದ್, ಏನೇನು ಲಭ್ಯವಿರುತ್ತದೆ, ಏನೇನಿರುವುದಿಲ್ಲ?

Webdunia
ಗುರುವಾರ, 8 ಸೆಪ್ಟಂಬರ್ 2016 (14:33 IST)
ಕಾವೇರಿ ನೀರು ತಮಿಳುನಾಡಿಗೆ ಬಿಡುಗಡೆ ಮಾಡಿದ್ದಕ್ಕೆ ಪ್ರತಿಭಟಿಸಿ ನಾಳೆ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದ್ದು, ಬಂದ್ ಹಿನ್ನೆಲೆಯಲ್ಲಿ ಏನೇನು ಬಂದ್ ಆಗಲಿದೆ, ಏನೇನು ಕಾರ್ಯನಿರ್ವಹಿಸಲಿದೆ ಎಂದು ಕೆಳಗೆ ನೀಡಲಾಗಿದೆ.
 
ಕಾವೇರಿ ನೀರಿಗಾಗಿ ನಾಳಿನ ಬಂದ್‌ ಸಂಪೂರ್ಣ ಯಶಸ್ವಿಯಾಗುವ ಎಲ್ಲಾ ಲಕ್ಷಣಗಳು ಕಂಡುಬಂದಿವೆ. ನಾಳೆ ಅಂಗಡಿ, ಮುಂಗಟ್ಟುಗಳನ್ನು ಸ್ವಯಂಪ್ರೇರಣೆಯಿಂದ ಬಂದ್ ಮಾಡಲು ನಿರ್ಧರಿಸಲಾಗಿದೆ. ಮಾಲ್‌ಗಳು ಮುಚ್ಚುವ ಸಾಧ್ಯತೆಯಿರುತ್ತದೆ. ಪೆಟ್ರೋಲ್‌ ಬಂಕ್ ಸೇವೆ ಇರುವುದಿಲ್ಲವಾದ್ದರಿಂದ ಇಂದೇ ಸಾಕಷ್ಟು ಪೆಟ್ರೋಲ್ ವಾಹನಗಳಿಗೆ ಹಾಕಿಸಿಕೊಳ್ಳುವ ತರಾತುರಿಯಲ್ಲಿ ವಾಹನ ಸವಾರರಿದ್ದಾರೆ.ಶಾಲೆ ಕಾಲೇಜುಗಳಿಗೆ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ.

ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಆಟೋ, ಟ್ಯಾಕ್ಸಿ ಸಂಚಾರ ಸ್ಥಗಿತಗೊಳ್ಳಲಿದೆ. ಟ್ಯಾಕ್ಸಿ ಮತ್ತು ಆಟೋ ಚಾಲಕರು ಬಂದ್‌ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ನಾಳೆ ಅಗತ್ಯ ವಸ್ತುಗಳಾದ ಹಾಲು, ಔಷಧಿ ಮುಂತಾದ ಸೇವೆಗಳು ಲಭ್ಯವಿರುತ್ತದೆ. ಆಂಬ್ಯುಲೆನ್ಸ್ ಸೇವೆ, ರೈಲು ಸಂಚಾರ, ತರಕಾರಿ ಲಭ್ಯವಿರುತ್ತದೆ.

ನಾಳೆ ಬಂದ್ ಹಿನ್ನೆಲೆಯಲ್ಲಿ ರಜೆಯ ವಿಚಾರ ತೆಗೆದುಕೊಂಡರೆ ರಾಜ್ಯದ ಜನರಿಗೆ ಸಾಲು, ಸಾಲು ರಜೆ ಸಿಗಲಿದೆ. ಶುಕ್ರವಾರ ಕರ್ನಾಟಕ ಬಂದ್‌ಗೆ ರಜೆ, ಶನಿವಾರ ಸೆಕೆಂಡ್ ಸಾಟರ್ಡೆ ರಜಾ, ಭಾನುವಾರ ಎಂದಿನ ರಜ ಮತ್ತು ಮಂಗಳವಾರ ಬಕ್ರೀದ್‌ಗೆ ರಜೆ.

ಸೋಮವಾರ ಒಂದು ದಿನ ರಜೆ ತೆಗೆದುಕೊಂಡರೆ 5 ದಿನಗಳ ಸಾಲು ರಜೆ ಸಿಗಲಿದ್ದು, ಬೆಂಗಳೂರು ನಾಗರಿಕರು  ಆರಾಮವಾಗಿ ಮನೆಯಲ್ಲಿ ಟಿವಿ ನೋಡುತ್ತಾ ಕಾಲಕಳೆಯುತ್ತಾರಾ ಅಥವಾ ವಾಟಾಳ್ ಹೇಳಿದಂತೆ ಬಂದ್‌ನಲ್ಲಿ ಭಾಗವಹಿಸಿ ಮಂಡ್ಯದ ರೈತರಿಗೆ ಬೆಂಬಲ ನೀಡುತ್ತಾರಾ ಎಂದು ಕಾದುನೋಡಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments