Webdunia - Bharat's app for daily news and videos

Install App

ಅನ್ನ ಭಾಗ್ಯ ಬೇಕಿದ್ದರೆ, ಶೌಚಾಲಯವೂ ಬೇಕು!

Webdunia
ಶುಕ್ರವಾರ, 7 ಜುಲೈ 2017 (10:19 IST)
ರೋಣ: ಮನೆಗೊಂದರಂತೆ ಶೌಚಾಲಯವಿರಬೇಕು. ಶೌಚಾಲಯ ಬಳಸಿ ಸ್ವಚ್ಛ ಭಾರತ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು ಎಂದು ಕೇಂದ್ರ ಸರ್ಕಾರ ಜಾಹೀರಾತು ನೀಡುತ್ತಲೇ ಇದೆ. ಇದೀಗ ಅನ್ನಭಾಗ್ಯ ಬೇಕಿದ್ದರೆ ಶೌಚಾಲಯವೂ ಬೇಕಂತೆ!


ಗ್ರಾಮಗಳಲ್ಲಿ ಶೌಚಾಲಯ ಬಳಕೆ ಬಗ್ಗೆ ಜನರಿಗೆ ಎಷ್ಟೇ ತಿಳುವಳಿಕೆ ಹೇಳಿದರೂ, ಪರಿಸ್ಥಿತಿ ಸುಧಾರಣೆಯಾಗುತ್ತಿಲ್ಲ. ಜನರನ್ನು ಹೇಗೆ ಸರಿದಾರಿಗೆ ತರುವುದು ಎಂದು ತಲೆಕೆಡಿಸಿಕೊಂಡಿದ್ದ ರೋಣ ತಹಶೀಲ್ದಾರ ಈ ನಿಟ್ಟಿನಲ್ಲಿ ಹೊಸ ತಂತ್ರ ರೂಪಿಸಿದ್ದಾರೆ.

ಇಲ್ಲಿನ ಜನರಿಗೆ ಅನ್ನ ಭಾಗ್ಯ ಯೋಜನೆಯಡಿ ಅಕ್ಕಿ ಬೇಕಿದ್ದರೆ, ಮನೆಯಲ್ಲಿ ಶೌಚಾಲಯವಿರಬೇಕು ಎಂದು ತಹಶೀಲ್ದಾರರು ಆದೇಶಿಸಿದ್ದಾರೆ. ಒಂದು ವೇಳೆ ಜುಲೈ 30 ರೊಳಗೆ ಶೌಚಾಲಯ ನಿರ್ಮಿಸದಿದ್ದರೆ ಪಡಿತರ ಚೀಟಿಯನ್ನೇ ರದ್ದುಗೊಳಿಸಲಾಗುವುದು ಎಂದು ಹುಕುಂ ಮಾಡಿದ್ದಾರೆ.

ಹೀಗಾದರೂ ಜನರಿಗೆ ಚುರುಕು ಮುಟ್ಟಲಿ. ಆ ಮೂಲಕ ಎಲ್ಲರೂ ಶೌಚಾಲಯ ಬಳಕೆ ಮಾಡಿ ಆಗಸ್ಟ್ 15 ರ ಸ್ವಾತಂತ್ರ್ಯೋತ್ಸವದ ವೇಳೆಗೆ ಬಯಲು ಮುಕ್ತ ತಾಲೂಕಾಗಿ ಪರಿವರ್ತಿಸಲು ತಹಶೀಲ್ದಾರ ಶಿವಲಿಂಗ ಪ್ರಭು ಪಣ ತೊಟ್ಟಿದ್ದಾರೆ.

ಇದನ್ನೂ ಓದಿ.. ಅರಸಿನ ಹಾಕಿದ ಹಾಲು ಕುಡಿಯುವುದರಿಂದ ಹೀಗೂ ಆಗುತ್ತದೆ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments