Webdunia - Bharat's app for daily news and videos

Install App

ಹಳೆ ನೋಟಿಗೆ ಮುಕ್ತಿ ನೀಡಲು ಬಂಗಾರ ಖರೀದಿಗೆ ಮುಂದಾದ ಕರಾವಳಿ ಜನತೆ

Webdunia
ಬುಧವಾರ, 9 ನವೆಂಬರ್ 2016 (11:34 IST)
ಮಂಗಳೂರು: ನಿನ್ನೆ ಮಧ್ಯರಾತ್ರಿಯಿಂದ ದಿಢೀರ ಎಂದು 500, 1000 ರೂ. ನೋಟು ಚಲಾವಣೆ ರದ್ದಾದ ಹಿನ್ನೆಲೆಯಲ್ಲಿ ಮಂಗಳೂರಿನ ವಿವಿಧ ಜ್ಯುವೆಲ್ಲರಿ ಶಾಪ್‌ಗಳಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತಿದೆ.

ಈಗಾಗಲೇ ಕೆಲವರು ತಾವು ಸಂಗ್ರಹಿಸ ಇಟ್ಟುಕೊಂಡಿರುವ 500, 1000 ರೂ.ಗಳನ್ನು ಬ್ಯಾಂಕ್ ಗೆ ನೀಡಲು ಕೆಲವು ನಿಯಮಾವಳಿ ಫಾಲೋ ಮಾಡಬೇಕಾಗುತ್ತದೆ ಎಂದು, ನೇರವಾಗಿ ಜ್ಯುವೆಲ್ಲರಿ ಶಾಪ್ ಗೆ ಬಂದು ಬಂಗಾರ ಖರೀದಿಯಲ್ಲಿ ತೊಡಗುತ್ತಿದ್ದಾರೆ. ನೂಕು ನುಗ್ಗಲಿನ ಮಧ್ಯೆ ಗ್ರಾಹಕರು ಬಂಗಾರ ಖರೀದಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಈ ಮೂಲಕ ಕರಾವಳಿ ಜನತೆ ಹಳೆಯ ನೋಟುಗಳನ್ನು ಖಾಲಿ ಮಾಡುವ ಪ್ರಯತ್ನದಲ್ಲಿ ಮುಂದಾಗುತ್ತಿದ್ದಾರೆ.
 
ಇಂದು ಬ್ಯಾಂಕ್ ವ್ಯವಹಾರ ಹಾಗೂ ಇಂದು, ನಾಳೆ ಎಟಿಎಂ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲವು ಎಟಿಎಂ ಕೇಂದ್ರದಲ್ಲಿ ಮನಿ ನೋ ಸ್ಟಾಕ್ ಎಂದು ನಾಮ ಫಲಕ ಡಿಸ್'ಪ್ಲೇ ಮಾಡಲಾಗಿದ್ದರೆ, ಇನ್ನು ಕೆಲವು ಎಟಿಎಂ ಕೇಂದ್ರದ ಎದುರು ಸಾರ್ವಜನಿಕರು ಸಾಲುಗಟ್ಟಿ ನಿಂತಿರುವ ದೃಶ್ಯಗಳು ಕಂಡು ಬರುತ್ತಿವೆ.
 
ಜ್ಯುವೆಲ್ಲರಿ ಅಂಗಡಿಯ ಜೊತೆಗೆ ಪ್ರತಿಯೊಂದು ಅಂಗಡಿಯ ಎದುರು ಸಾರ್ವಜನಿಕರ ವ್ಯಾಪಾರ ಬಿರುಸಾಗಿ ನಡೆಯುತ್ತಿದೆ. ಹೇಗಾದರೂ ಮಾಡಿ ತಮ್ಮಲ್ಲಿರುವ ಹಳೇ ನೋಟುಗಳನ್ನು ವರ್ಗಾವಣೆ ಮಾಡಲೇಬೇಕೆಂದು ಅಗತ್ಯವಿಲ್ಲದಿದ್ದರೂ ಕೆಲವಷ್ಟು ಸಾಮಗ್ರಿಗಳನ್ನು ಖರೀದಿಸುತ್ತಿದ್ದಾರೆ. ಕೆಲವು ಅಂಗಡಿಕಾರರು ಹಳೆ ನೋಟುಗಳನ್ನು ಪಡೆಯಲು ಹಿಂದೇಟು ಹಾಕುತ್ತಿರುವುದು ಸಹ ಸಾಮಾನ್ಯವಾಗಿದೆ. ಹಾಗೆ, ಹಣವನ್ನು ಬದಲಾಯಿಸಿಕೊಳ್ಳಲು ಪೆಟ್ರೊಲ್ ಬಂಕ್'ಗಳಿಗೂ ಜನರು ಹರಿದು ಬರುತ್ತಿದ್ದಾರೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price today: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಸರ್ಕಾರಿ ನೌಕರರು, ಗುತ್ತಿಗೆದಾರರಿಗೆ ಗುಡ್ ನ್ಯೂಸ್: ಆರೋಗ್ಯ ಇಲಾಖೆಯಿಂದ ಭರ್ಜರಿ ಆಫರ್

ಪಾಕಿಸ್ತಾನವನ್ನು ನೈಸ್ ಮಾಡುತ್ತಿರುವ ಡೊನಾಲ್ಡ್ ಟ್ರಂಪ್ ಗಿದೆ ಖತರ್ನಾಕ್ ಪ್ಲ್ಯಾನ್

Karnataka Weather: ಎರಡು ದಿನಗಳಿಗೆ ಹವಾಮಾನದಲ್ಲಿ ಆಗಲಿದೆ ಮಹತ್ವದ ಬದಲಾವಣೆ

ಇಸ್ರೇಲ್ ದಾಳಿಗೆ ಗಟ್ಟಿಯಾಗಿ ನಿಲ್ಲುವಂತೆ ಇರಾನ್ ನಾಯಕ ಖಮೇನಿ ಜನತೆಗೆ ಸಂದೇಶ

ಮುಂದಿನ ಸುದ್ದಿ
Show comments