ಪಾಲಕರು ಮನೆಯೊಳಗೆ ಇಲ್ಲದ ಸಂದರ್ಭ ನೋಡಿ 3 ವರ್ಷದ ಮಗುವನ್ನು ಎತ್ತಿಕೊಂಡು ತನ್ನ ಮನೆಗೆ ಕರೆದುಕೊಂಡು ಹೋದ ನೆರೆಮನೆಯ ನಿವಾಸಿ, 16 ವರ್ಷದ ಬಾಲಕ ಆ ಹಾಲುಗಲ್ಲದ ಕಂದನ ಮೇಲೆ ಅತ್ಯಾಚಾರ ಎಸಗಿದ ಹೇಯ ಘಟನೆ ಬೆಂಗಳೂರಿನಿಂದ 30 ಕೀಮೀ ದೂರದ ರಾಮನಗರ ಜಿಲ್ಲೆಯ ತಟ್ಟೆಗುಪ್ಪೆಯಲ್ಲಿ ನಡೆದಿದೆ.
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಮಗುವನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದು ತಂದಾಗ ಮಗುವಿನ ಖಾಸಗಿ ಭಾಗದಲ್ಲಿ ಸ್ವೆಲ್ಲಿಂಗ್ ಆಗುತ್ತಿರುವುದನ್ನು ಗಮನಿಸಿದ ವೈದ್ಯರು ಮಗು ಲೈಂಗಿಕವಾಗಿ ಬಳಸಲ್ಪಟ್ಟಿದೆ ಎಂದು ಆಕೆಯ ಪಾಲಕರ ಬಳಿ ಹೇಳಿದ್ದಾರೆ.
ಆರೋಪಿ ಸ್ಥಳೀಯ ಗ್ರಾಮಪಂಚಾಯತ್ ಸದಸ್ಯನ ತಮ್ಮನ ಮಗನೆಂದು ತಿಳಿದು ಬಂದಿದ್ದು, ಆತನನ್ನು ಬಂಧಿಸಿರುವ ತಲಘಟ್ಟಪುರ ಠಾಣಾ ಪೋಲಿಸರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.
ಮಗು ಗಂಭೀರವಾದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಆಕೆಗೆ ತತ್ಕ್ಷಣ ಹಾರ್ಟ್ ಸರ್ಜರಿ ಮಾಡಬೇಕಾಗಿದೆ. ಆಕೆ ಚೇತರಿಸಿಕೊಂಡ ನಂತರ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವಾಗಿರುವ ಬಗ್ಗೆ ಪರೀಕ್ಷೆ ನಡೆಸಲಾಗುವುದು ಎಂದು ತಿಳಿದುಬಂದಿದೆ.