ಬೈಕ್ ತಪಾಸಣೆ ವೇಳೆ ಮರಕಾಸ್ತ್ರಗಳು ಪತ್ತೆ: ಮೂವರು ಆರೋಪಿಗಳ ಬಂಧನ

Webdunia
ಶನಿವಾರ, 28 ಆಗಸ್ಟ್ 2021 (15:57 IST)
ಬೆಂಗಳೂರು: ನಗರದಲ್ಲಿ ಬೈಕ್ ನಲ್ಲಿ ಬಂದ ಮೂವರ ಬಳಿ ಮಾರಕಾಸ್ತ್ರಗಳು ಶುಕ್ರವಾರ ಪತ್ತೆಯಾಗಿದೆ. ಬೈಕ್ನಾಕಾಬಂದಿಯಲ್ಲಿನ ತಪಾಸಣೆ ವೇಳೆ ಮಾರಕಾಸ್ತ್ರಗಳಿರುವುದು ಬ್ಯಾಡರ
ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿಕ್ಕಿಬಿದ್ದಿದ್ದಾರೆ.

ಮೂವರು ಆರೋಪಿಗಳು ಪಾಲಿಕೆ ವ್ಯಾಪ್ತಿಯಲ್ಲಿ ಕೆಲಸ  ಮಾಡುತ್ತಿದ್ದರು. ವಾರ್ಡ್ ನಂಬರ್ 40ರ ಹೇರೋಹಳ್ಳಿಯಲ್ಲಿ ಕಸ ಕಲೆ ಹಾಕುತ್ತಿದ್ದರು. ಕಸ ಕಲೆ ಹಾಕುವಾಗ ಮನೆ ಮಾಲೀಕರು ಪ್ರೀತಿಯಿಂದ ಒಂದಷ್ಟು ಟಿಪ್ಸ್ ಹಣ ಕೊಡುತ್ತಿದ್ದರು. ಟಿಪ್ಸ್ ಹಣಕ್ಕಾಗಿ ಬೇರೆ ಇಬ್ಬರು ಹೊಸದಾಗಿ ಬಂದು ದುಪ್ಪಟ್ಟು ಟಿಪ್ಸ್ ಪಡೆಯುತ್ತಿದ್ದದ್ದು ಗೊತ್ತಾಗಿ ಅವರಿಬ್ಬರನ್ನು ಮುಗಿಸಲು ಮಾರಕಾಸ್ತ್ರಗಳನ್ನ ಹಿಡಿದು ಕೊಲೆಗೆ ಮಾಡಲು ಆರೋಪಿಗಳು ಹೊರಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಸಂಬಂದ ಇದೀಗ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು.ಇದೀಗ ಅಪ್ತಾಪ್ತ ಯುವಕರಿಬ್ಬರನ್ನು ಸೇರಿ ಮೂರು ಜನರನ್ನು ಬಂಧಿಸಿ ವಿಚಾರಣೆ ನೆಡೆಸುತ್ತಿದ್ದಾರೆ. ಬಂಧಿತರಿಂದ ಎರಡು ಲಾಂಗು , ಚಾಕು, ಒಂದು ಡಿಯೋ ಬೈಕ್ ವಶಕ್ಕೆ ಪಡೆದು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜಕಾರಣದಲ್ಲಿ ಇಂತಹ ಘಟನೆಗಳು ಸಾಮಾನ್ಯ, ಧೃತಿಗೆಡಬೇಡಿ: ಪ್ರದೀಪ್ ಈಶ್ವರ್‌ಗೆ ಸಿದ್ಧರಾಮಯ್ಯ ಧೈರ್ಯ

ರೆಸ್ಟೋರೆಂಟ್‌ನ ಚಿಮಿಣಿಯಲ್ಲಿ ಸಂಗ್ರಹವಾದ ಎಣ್ಣೆಯಿಂದ ಬೆಂಕಿ, ದೆಹಲಿಯಲ್ಲಿ ತಪ್ಪಿದ ದೊಡ್ಡ ಅವಘಡ, Video

ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಆತ್ಮಹತ್ಯೆ, ಪತಿ, ಅತ್ತೆ, ಮಾವನ ವಿರುದ್ಧದ ಮಹತ್ವದ ತೀರ್ಪು

ಕೇತನ್ ಅಗರ್ವಾಲ್ ಹತ್ಯೆ ಬಳಿಕ ಪುಣೆ ಕೋಟೆಗೆ ಪ್ರವಾಸಿಗರ ದಂಡು, ಸಿಕ್ತು ಹೊಸ ನಾಮಕರಣ

ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸಿಕೊಂಡು ಕಾರು ಚಾಲಕ ಈ ರೀತಿ ನಡೆಸುಕೊಳ್ಳುವುದಾ, Video

ಮುಂದಿನ ಸುದ್ದಿ
Show comments