ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಕೇಂದ್ರ ಸಚಿವರಾದ ಅನಂತ್ ಕುಮಾರ್ ಅವರು ಪ್ರಧಾನಿ ಮೋದಿ ಎನ್ನುವ ಬದಲು ವಾಜಪೇಯಿ ಎಂದು ಹೇಳಿ ಮುಜುಗರಕ್ಕೆ ಒಳಗಾದರು.
ಪ್ರಧಾನಿ ನರೇಂದ್ರ ಮೋದಿ ಎನ್ನುವ ಬದಲು ಅನಂತ ಕುಮಾರ್ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಹೆಸರನ್ನು ಹೇಳಿದರು. ಅವರ ಮಾತಿನಲ್ಲಾದ ತಪ್ಪನ್ನು ಗಮನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, "ಈಗಿನ ಪ್ರಧಾನಿ ವಾಜಪೇಯಿಯಲ್ಲ ರೀ, ಮೋದಿಯವರು", ಎಂದು ನೆನಪಿಸಿದ್ದಾರೆ.
ಸಿದ್ದರಾಮಯ್ಯನವರ ಮಧ್ಯಪ್ರವೇಶದಿಂದ ತಮ್ಮ ಮಾತಿನಲ್ಲಾದ ತಪ್ಪನ್ನು ಅರಿತುಕೊಂಡ ಅನಂತ್ ಕುಮಾರ್, "ನಾನು ವಾಜಪೇಯಿಯವರ ಸರಕಾರದಲ್ಲೂ ಸಚಿವನಾಗಿದ್ದೆ. ಹೀಗಾಗಿ ಅವರ ಹೆಸರೇ ಬಂದುಬಿಟ್ಟಿತು" ಎಂದು ತಮ್ಮ ಸಂಭೋಧನೆಯಲ್ಲಾದ ತಪ್ಪನ್ನು ಸಮರ್ಥಿಸಿಕೊಂಡರು.