Select Your Language

Notifications

webdunia
webdunia
webdunia
webdunia

ಕೇಂದ್ರ ಸಚಿವರೇ ಪ್ರಧಾನಿ ಯಾರೆಂದು ಮರೆತರೇ?

ಕೇಂದ್ರ ಸಚಿವರೇ ಪ್ರಧಾನಿ ಯಾರೆಂದು ಮರೆತರೇ?
ಬೆಂಗಳೂರು , ಭಾನುವಾರ, 10 ಮೇ 2015 (12:28 IST)
ವಿಧಾನಸೌಧದ ಬ್ಯಾಂಕ್ವೆಟ್​ ಹಾಲ್‌ನಲ್ಲಿ ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಕೇಂದ್ರ ಸಚಿವರಾದ ಅನಂತ್​ ಕುಮಾರ್ ಅವರು​ ಪ್ರಧಾನಿ ಮೋದಿ ಎನ್ನುವ ಬದಲು ವಾಜಪೇಯಿ ಎಂದು ಹೇಳಿ ಮುಜುಗರಕ್ಕೆ ಒಳಗಾದರು. 

 
ಪ್ರಧಾನಿ ನರೇಂದ್ರ ಮೋದಿ ಎನ್ನುವ ಬದಲು ಅನಂತ ಕುಮಾರ್ ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿಯವರ ಹೆಸರನ್ನು ಹೇಳಿದರು.  ಅವರ ಮಾತಿನಲ್ಲಾದ ತಪ್ಪನ್ನು ಗಮನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, "ಈಗಿನ ಪ್ರಧಾನಿ ವಾಜಪೇಯಿಯಲ್ಲ ರೀ, ಮೋದಿಯವರು", ಎಂದು ನೆನಪಿಸಿದ್ದಾರೆ. 
 
ಸಿದ್ದರಾಮಯ್ಯನವರ ಮಧ್ಯಪ್ರವೇಶದಿಂದ ತಮ್ಮ ಮಾತಿನಲ್ಲಾದ ತಪ್ಪನ್ನು ಅರಿತುಕೊಂಡ ಅನಂತ್​ ಕುಮಾರ್,​ "ನಾನು ವಾಜಪೇಯಿಯವರ ಸರಕಾರದಲ್ಲೂ ಸಚಿವನಾಗಿದ್ದೆ. ಹೀಗಾಗಿ ಅವರ ಹೆಸರೇ ಬಂದುಬಿಟ್ಟಿತು" ಎಂದು ತಮ್ಮ ಸಂಭೋಧನೆಯಲ್ಲಾದ ತಪ್ಪನ್ನು ಸಮರ್ಥಿಸಿಕೊಂಡರು. 

Share this Story:

Follow Webdunia kannada