ಲಾಲ್ಬಾಗ್ ಸಮೀಪ ನಿನ್ನೆ ಕೆಲವು ಯುವಕರು ಹಕ್ಕಿಯ ರೆಕ್ಕೆಗಳು ಗಾಳಿಪಟದ ದಾರಕ್ಕೆ ಸಿಲುಕಿ ಕೊಂಡಿರುವುದನ್ನು ಗಮನಿಸಿದರು. ತಲೆಕೆಳಗಾಗಿ ಜೋತಾಡುತ್ತಿದ್ದ ಹಕ್ಕಿ ಸತ್ತಿರಬೇಕೆಂದು ಅವರು ಭಾವಿಸಿದರು. ಅದು ಎಷ್ಟು ದಿನಗಳಿಂದ ಅದೇ ಸ್ಥಿತಿಯಲ್ಲಿತ್ತು ಗೊತ್ತಿಲ್ಲ. ಮುದ್ದು ಹಕ್ಕಿ ಆ ಬಂಧನದಿಂದ ತಪ್ಪಿಸಿಕೊಳ್ಳಲು ಒದ್ದಾಡುತ್ತಿತ್ತು. ಸಾಕಷ್ಟು ದಣಿದಿದ್ದ ಹಕ್ಕಿಯನ್ನು ರಕ್ಷಿಸಲು ಪಣ ತೊಟ್ಟ ವ್ಯಕ್ತಿಯೊಬ್ಬ ಹಲವು ಜನರನ್ನು ಒಟ್ಟು ಸೇರಿಸಿದ. ಬಿಎಮ್ಟಿಸಿ ಬಸ್ ಒಂದರ ಸಹಾಯದಿಂದ ಹಕ್ಷಿಯ ರಕ್ಷಣಾ ಕಾರ್ಯ ನಡೆಸಲಾಯಿತು. ಮುಂದೇನಾಯಿತು ಎಂಬುದನ್ನು ನೀವೇ ನೋಡಿ...
ನಮ್ಮ ಉದಾಸೀನತೆಗೆ ಮುಗ್ಧ ಪ್ರಾಣಿ-ಪಕ್ಷಿಗಳು ಅನುಭವಿಸುವ ನೋವಿಗೆ ಇದೊಂದು ದೃಷ್ಟಾಂತ...
ವಿಡಿಯೋ