Webdunia - Bharat's app for daily news and videos

Install App

ಇದು ಮಂಗಳಮುಖಿಯ ಉದಾರತೆ ಕಥೆ

Webdunia
ಮಂಗಳವಾರ, 25 ಅಕ್ಟೋಬರ್ 2016 (16:37 IST)
ತುಮಕೂರು: ಒಂದು ಗೇಣು ಜಾಗಕ್ಕೆ ಬಂಗಾರದ ಬೆಲೆ ಇರುವ ಇಂದಿನ ದಿನಗಳಲ್ಲಿ, ಮಾರುದ್ದ ಜಾಗಕ್ಕೆ ಜಗಳ, ಕೊಲೆಯಾಗುವ ಪ್ರಸ್ತುತ ಸಂದರ್ಭದಲ್ಲಿ ಮಂಗಳಮುಖಿಯೊಬ್ಬರು ತನ್ನ ಸ್ವಂತ ಸೈಟ್ ನ್ನೇ ಮನೆಗೆಲಸದಾಕೆಗೆ ದಾನ ಮಾಡಿ ಉದಾರತೆ ಮೆರೆದಿದ್ದಾರೆ.
 

 
ನಗರದ ಶೆಟ್ಟಿಹಳ್ಳಿ ನಿವಾಸಿಯಾದ ದೀಪಿಕಾ ಮಂಗಳಮುಖಿಯಾದರೂ ಸಮಾಜದಲ್ಲಿ ದೊಡ್ಡ ಹೆಸರು ಪಡೆದುಕೊಂಡಿದ್ದಾರೆ. ಇವರ ದಾನ-ಧರ್ಮದ ಕಾರ್ಯಗಳು ಹಾಗೂ ಸಮಾಜ ಸೇವೆ ಜನಪ್ರತಿನಿಧಿಯನ್ನೂ ತಲೆ ಕೆಳಗೆ ಹಾಕುವಂತೆ ಮಾಡುತ್ತದೆ. ಇದ್ದಷ್ಟು ಸಾಕಾಗುವುದಿಲ್ಲ ಎನ್ನುತ್ತ ಬೇಕು ಬೇಕೆಂದು ಹಪಹಪಿಸುವ ಮಂದಿಗೆ ದೀಪಿಕಾ ಮಾದರಿಯಾಗಿದ್ದಾರೆ. ತಾನು ಕಷ್ಟುಪಟ್ಟು ಸಂಪಾದಿಸಿ ಖರೀದಿಸಿದ( 40/15) ಅಡಿ ಅಳತೆಯ ಸೈಟನ್ನು ತಮ್ಮ ಮನೆಯಲ್ಲಿ ಅಡುಗೆ ಕೆಲಸ ಮಾಡುವ ಗೌರಮ್ಮ ಮತ್ತು ನಾಗರಾಜು ಕುಟುಂಬಕ್ಕೆ ದಾನವಾಗಿ ನೀಡಿದ್ದಾರೆ.
 
ಗೌರಮ್ಮರದು ಮೂರು ಮಕ್ಕಳ ಕುಟುಂಬ. ಮಕ್ಕಳನ್ನು ಶಾಲೆಗೆ ಕಳುಹಿಸಿ ಓದಲಾಗದ ಬಡತನ. ಇದರಿಂದಾಗಿ ಒಬ್ಬಾತನ ಶಾಲೆಯನ್ನು ಬಿಡಿಸಿ ಕೂಲಿ ಕೆಲಸಕ್ಕೆ ಕಳುಹಿಸಿದ್ದರು. ಮನೆ ಬಾಡಿಗೆಯನ್ನು ಸಹ ಕಟ್ಟಲು ಸಾಧ್ಯವಾಗದ ಪರಿಸ್ಥಿತಿ. ಗೌರಮ್ಮರ ನೋವನ್ನು ಪ್ರತಿದಿನ ನೋಡುತ್ತಿದ್ದ ದೀಪಿಕಾ, ಅವರ ಕಷ್ಟಕ್ಕೆ ಹೆಗಲಾಗಿ ದಾನು ಖರೀದಿಸಿದ ಸೈಟನ್ನು ದಾನವಾಗಿ ಕೊಟ್ಟಿದ್ದಾರೆ.
 
ಅಷ್ಟೇ ಅಲ್ಲ, ಆ ಸೈಟನಲ್ಲಿ ಮನೆಯನ್ನೂ ನಿರ್ಮಿಸಿಕೊಡುವುದಾಗಿ ಹೇಳಿದ್ದಾರೆ. ದೀಪಿಕಾ ಅವರ ಸಹಾಯದಿಂದ ಗೌರಮ್ಮರ ಬದುಕು ಈಗ ಹಸನಾಗುವ ಕಾಲ ಸನ್ನಿಹಿತವಾಗಿದೆ. ದೀಪಿಕಾ ಕೈ ಹಿಡಿಯದಿದ್ದರೆ ಕುಟುಂಬವೇ ಬೀದಿಗೆ ಬೀಳುತ್ತಿತ್ತು. ನಮ್ಮ ಪಾಲಿಗೆ ದೇವರಂತೆ ಬಂದು ದೀಪಿಕಾ ಅವರು ಕೈ ಹಿಡಿದಿದ್ದಾರೆ ಎಂದು ಗೌರಮ್ಮ ಕಣ್ತುಂಬಿಸಿಕೊಂಡು ಹೇಳುತ್ತಾರೆ.
 
ಮಂಗಳಮುಖಿ ಎಂದರೆ ಕೀಳಾಗಿ ನೋಡುವ ಸಮಾಜಕ್ಕೆ ಹಾಗೂ ಕೆಲವು ಮಂಗಳಮುಖಿಯರಿಗೆ ದೀಪಿಕಾ ನಿಜಕ್ಕೂ ಆದರ್ಶನೀಯ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಣ್ವಸ್ತ್ರ ಬೆದರಿಕೆಗೆ ನಾವು ಜಗ್ಗಲ್ಲ, ಬಗ್ಗಲ್ಲ: ಭಾರತದ ತಾಕತ್ತು ಜಗತ್ತಿಗೆ ಗೊತ್ತಾಯಿತು ಎಂದ ಪ್ರಧಾನಿ ಮೋದಿ

PM Modi: ಪ್ರಧಾನಿ ಮೋದಿ ಭಾಷಣ ಕನ್ನಡದಲ್ಲಿ ಸಂಪೂರ್ಣವಾಗಿ ಇಲ್ಲಿದೆ ನೋಡಿ

ಭಾರತದ ಮೇಲಿನ ದಾಳಿಯನ್ನು ಸಂಭ್ರಮಿಸಿದ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ, ಪಾಕ್‌ ಸೇನೆಯನ್ನು ಬಣ್ಣಿಸಿದ್ದು ಹೀಗೇ

Operation Sindoor: 17 ನವಜಾತ ಹೆಣ್ಣು ಮಕ್ಕಳಿಗೆ ಸಿಂಧೂರ್‌ ನಾಮಕರಣ

ಪೌರ ಕಾರ್ಮಿಕರ ವಿಚಾರದಲ್ಲಿ ದಿಟ್ಟ ಹೆಜ್ಜೆಯಿಟ್ಟ ಸಿಎಂ ಸಿದ್ದರಾಮಯ್ಯ ಸರ್ಕಾರ

ಮುಂದಿನ ಸುದ್ದಿ
Show comments