Webdunia - Bharat's app for daily news and videos

Install App

2000ಕ್ಕೂ ಹೆಚ್ಚು ತೀರ್ಪನ್ನು ಕನ್ನಡದಲ್ಲಿಯೇ ನೀಡಿದ ಮಾದರಿ ನ್ಯಾಯಾಧೀಶ!

Webdunia
ಮಂಗಳವಾರ, 1 ನವೆಂಬರ್ 2016 (12:39 IST)

ಬೆಂಗಳೂರು: ವೆಬ್ ದುನಿಯಾ ಓದುಗರಿಗೆ ಕನ್ನಡವರಾಜ್ಯೋತ್ಸವದ ಶುಭಾಶಯಗಳು. ಕರ್ನಾಟಕ ಏಕೀಕರಣವಾಗಿ ಇಂದಿಗೆ ಬರೋಬ್ಬರಿ ಅರವತ್ತು ವರ್ಷ. ಇಷ್ಟೊಂದು ಸುದೀರ್ಘ ಅವಧಿ ಕಳೆದರೂ ಕರ್ನಾಟಕ ನೆಲ, ಜಲ, ಭಾಷೆ ವಿಷಯದಲ್ಲಿ ತೀರಾ ಹಿಂದುಳಿದಿದೆ. ಕನ್ನಡ, ಕನ್ನಡ ಎಂದು ಬೊಬ್ಬಿರಿಯುವವರಿಗೇನೂ ಇಲ್ಲಿ ಕಡಿಮೆಯಿಲ್ಲ. ಹಾಗೆ ಪರಭಾಷಾ ಹಾವಳಿಯೂ ಹೆಚ್ಚಾಗಿಯೂ ಎಲೆಮರೆಯ ಕಾಯಾಗಿ ಕನ್ನಡಕ್ಕಾಗಿ ದುಡಿಯುವವರು ಮಾತ್ರ ತೀರಾ ವಿರಳ. ಅದರಲ್ಲೂ ಪರಭಾಷಾ ಹಾವಳಿ ಹೆಚ್ಚಾಗಿರುವ ಪ್ರಸ್ತುತ ಸಂದರ್ಭದಲ್ಲಿ ಕನ್ನಡಕ್ಕೆ ಎಲ್ಲೂ ಜಾಗವಿಲ್ಲವೇನೋ ಎನ್ನುವ ಆತಂಕ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿಯೇ ಇಲ್ಲೊಬ್ಬ ನಿವೃತ್ತ ನ್ಯಾಯಾಧೀಶರು ತಮ್ಮ ವೃತ್ತಿ ಜೀವನದಲ್ಲಿ ಸರಿಸುಮಾರು 200ಕ್ಕೂ ಹೆಚ್ಚು ತೀರ್ಪನ್ನು ಕನ್ನಡದಲ್ಲಿಯೇ ನೀಡಿ, ಕನ್ನಡದ ಪ್ರೇಮ ಎತ್ತಿ ಹಿಡಿದಿದ್ದಾರೆ.
 


 

ಹೌದು, ಈ ನ್ಯಾಯಾಧೀಶರ ಹೆಸರು ಎಸ್.ಎಚ್. ಮಿಟ್ಟಲಕೋಡ. ಧಾರವಾಡ ನಿವಾಸ. ನ್ಯಾಯಾಲಯದಲ್ಲಿ ಕನ್ನಡ ಭಾಷೆ ಬಳಕೆ ಅಪರೂಪ ಹಾಗೂ ದೂರದ ಮಾತು. ಹೀಗಿದ್ದಾಗಲೂ ಇವರು ಮಿಟ್ಟಲಕೋಡ ಕನ್ನಡದಲ್ಲಿಯೇ ತೀರ್ಪು ನೀಡುತ್ತಿದ್ದರು. ಧಾರವಾಡದವರಾದ ಅವರಿಗೆ ಸಹಜವಾಗಿಯೇ ಸಾಹಿತ್ಯದ ಮೇಲೆ ಪ್ರೀತಿ. ಆ ಪ್ರೀತಿ ಆಂಗ್ಲ ಭಾಷೆಯಲ್ಲಿರುವ ಇಂಡಿಯನ್ ಪಿನಲ್ ಕೋಡ್ ನ್ನು ಕನ್ನಡದಲ್ಲಿ ಅರ್ಥ ಮಾಡಿಕೊಳ್ಳುವಲ್ಲಿಯೂ ಮುಂದುವರಿದಿತ್ತು. ಅಷ್ಟೇ ಆದರೆ ಇವರ ಸಾಧನೆ ಎಲ್ಲರಂತೆಯೇ ಅಂದುಕೊಳ್ಳಬಹುದಿತ್ತು. ಆದರೆ, ಅರ್ಥಮಾಡಿಕೊಂಡ ಕಾಯ್ದೆ-ಕಾನೂನುಗಳನ್ನು ಕನ್ನಡದಲ್ಲಿ ಅವತರಣಿಕೆ ಮಾಡಿ ತೀರ್ಪು ನೀಡುವವರೆಗೂ ಮುಂದುವರಿದಿತ್ತು.

 

ನ್ಯಾಯಾಂಗ ವ್ಯವಸ್ಥೆಯಲ್ಲಿ ಕನ್ನಡ ಬರಬೇಕು. ಅಲ್ಲಿರುವ ಕಾನೂನು ಕಾಯ್ದೆಗಳು ಸುಲಭವಾಗಿ ಶ್ರೀಸಾಮಾನ್ಯನಿಗೂ ಅರ್ಥವಾಗಬೇಕು ಎಂದು ವರು, ವಕೀಲ ಪದವಿ ಪಡೆದ ನಂತರ ನ್ಯಾಯಾಂಗ ವ್ಯವಸ್ಥೆಯಲ್ಲಿರುವ ಆಂಗ್ಲ ಭಾಷೆ ಪುಸ್ತಕಗಳನ್ನು ಹಾಗೂ ನ್ಯಾಯಾಂಗದ ಮಾಹಿತಿಯನ್ನು ಕನ್ನಡದಲ್ಲಿ ತರಲು ಪ್ರಯತ್ನಿಸಿದ್ದರು. ಆಂಗ್ಲ ಭಾಷೆ ಬಲ್ಲವರಷ್ಟೇ ನ್ಯಾಯಾಂಗದ ಅರಿವು ಹೊಂದುವುದಕ್ಕಿಂತ ಕನ್ನಡ ಬಲ್ಲವರು ಕೂಡಾ ದರ ಒಳ ಹೊರಗುಗಳನ್ನು ಅರಿಯಬೇಕೆಂದು ನ್ಯಾಯಾಂಗ ಸಾಹಿತ್ಯಕ್ಕೆ ಹೆಚ್ಚು ಮಹತ್ವ ನೀಡಿದ್ದರು. ಕನರ್ಾಟಕದ ನ್ಯಾಯಾಂಗದಲ್ಲೂ ಕನ್ನಡ ಭಾಷೆ ಪ್ರಾಬಲ್ಯ ಹೊಂದಲಿ ಎನ್ನುವ ಕಳಕಳಿ ಮಿಟ್ಟಲಕೋಡ ಅವರದು.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Mallikarjun Kharge: ಐಟಿ, ಇಡಿ ಬಿಟ್ಟು ಕಾಂಗ್ರೆಸ್ ಸರ್ಕಾರ ಬೀಳಿಸ್ತಾರೆ ಹುಷಾರ್: ಎಚ್ಚರಿಕೆ ಕೊಟ್ಟ ಖರ್ಗೆ

National Herald case ನಲ್ಲಿ ಸುಮ್ ಸುಮ್ನೇ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರಿಗೆ ತೊಂದರೆ ಕೊಡ್ತಿದೆ ಕೇಂದ್ರ: ಮಲ್ಲಿಕಾರ್ಜುನ ಖರ್ಗೆ

Waqf Bill:ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರಿರುವಂತೆ ಹಿಂದೂ ಟ್ರಸ್ಟ್ ಗಳಲ್ಲಿ ಮುಸ್ಲಿಮರಿಗೆ ಅವಕಾಶ ಕೊಡ್ತೀರಾ: ಸುಪ್ರೀಂಕೋರ್ಟ್

Bengaluralli ಏನಾಗುತ್ತಿದೆ, ಮಹಿಳೆಗೆ ಮರ್ಮಾಂಗ ತೋರಿಸಿ ಯುವಕನಿಂದ ಅಸಭ್ಯ ವರ್ತನೆ

ಗಣತಿ ಸುನಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ಕೊಚ್ಚಿ ಹೋಗುತ್ತಾರೆ: ಕುಮಾರಸ್ವಾಮಿ

ಮುಂದಿನ ಸುದ್ದಿ
Show comments