ಅಸ್ಪ್ರಶ್ಯತೆ ಈಗಲೂ ಜೀವಂತ ಇರುವುದು ಎಲ್ಲಿ ಗೊತ್ತಾ?

Webdunia
ಶುಕ್ರವಾರ, 6 ಜುಲೈ 2018 (15:27 IST)
ಇಂದಿನ ಆಧುನಿಕ ಸಮಾಜದಲ್ಲಿಯೂ ಕೂಡ ಅಸ್ಪ್ರಶ್ಯತೆಯಂತ  ಕೆಲ ಪದ್ಧತಿಗಳು ಅಂದಿನಿಂದ ಇವತ್ತಿನವರೆಗೂ ಜಿವಂತ ಇವೆ. ಇವುಗಳನ್ನು ತೊಡೆದು ಹಾಕಲು ಕಾನೂನು ಮತ್ತು ಅದಕ್ಕೆ ಪೂರಕವಾಗಿ ಇಲಾಖೆಗಳು ಇದ್ದರೂ ಸಹಿತ ನಿಷ್ಪ್ರಯೋಜಕ. ಯಾಕೆಂದ್ರೆ ಅಂದಿನ ಆ ಅನಿಷ್ಠ ಪದ್ಧತಿಗಳು ಇಂದು ಕಡಿಮೆಯಾದರೂ ಸಹಿತ ಅದರ ಛಾಯೆ ಮಾತ್ರ ಮಾಸದೇ ಹಾಗೆ ಉಳಿದಿವೆ.

 
ಗದಗದ ಮುಂಡರಗಿ ತಾಲ್ಲೂಕಿನ ಸಿಂಗಾಟಲೂರ ಗ್ರಾಮದಲ್ಲಿ ಮೇಲ್ವರ್ಗದವರು ಕೆಳವರ್ಗದವರ ಮೇಲೆ ನಡೆಸಿರುವ ಅಸ್ಪೃಶ್ಯತೆ ಇದಕ್ಕೊಂದು ತಾಜಾ ಉದಾಹರಣೆ. ಸ್ವಾತಂತ್ರ್ಯ ದೊರೆತು 70 ವರ್ಷ ಸಮಿಪಿಸುತ್ತಿದ್ದರೂ  ಈ ಗ್ರಾಮದಲ್ಲಿ ಮನುಷ್ಯರ ಮನುಷ್ಯರನ್ನ ಹೀನಾಯವಾಗಿ ಕಾಣುವ ಹಾಗೂ ಮಾನವೀಯತೆಯನ್ನ  ಮರೆಮಾಚುವಂತ ಘಟನೆಗಳು ಇಂದಿಗೂ ಕೂಡ ಹೊಟಲ್ ಗಳಲ್ಲಿ ನಡೆಯುತ್ತಿವೆ. ಇಲ್ಲಿ ಮೇಲ್ವರ್ಗದ ಜನ ಎನಿಸಿಕೊಂಡವರು ಕೆಳ ವರ್ಗದವರಿಗೆ, ದಲಿತರಿಗೆ ಚಹದ ಅಂಗಡಿಯ ಒಳಗಡೆ ಪ್ರವೇಶಿಸದಂತೆ ಹೇಳಿ  ತಾವೆ ಕೈಯಾರೆ ನೀರು ಹಾಕಿ ಅವರನ್ನು ಕಡೆಗಣಿಸುತ್ತಿದ್ದಾರೆ. ಹೀಗಾಗಿ ತಮ್ಮ ಹಲವು ಮೂಡ ನಂಬಿಕೆಗಳ ಆಚರಣೆಗಳಿಂದ ದಲಿತರನ್ನ ಸಮಾಜದಿಂದ ದೂರ ಇಡುತ್ತಿದ್ದಾರೆ.

ನಾವೆಲ್ಲ ಹಿಂದೂ, ನಾವೆಲ್ಲ ಒಂದು ಎನ್ನುವ ಜನರಿಗೆ ಮಾತ್ರ ಈ ತಾರತಮ್ಯ ಕಾಣುತ್ತಿಲ್ಲವೆನೋ? ಇಂಥ ಜಾತಿಭೇಧದ ವಿರುದ್ಧ ಯಾಕೆ ಮೌನವಾಗಿದ್ದಾರೆ ? ಅನ್ನೋದು ಯಕ್ಷ ಪ್ರಶ್ನೆಯಾಗಿದೆ. ಅಲ್ಲದೇ ಈಗಾಗಲೇ ಡಿಎಸ್ಎಸ್ ಸೇರಿದಂತೆ ಅನೇಕ ಪ್ರಗತಿಪರ ಚಿಂತಕರು, ಸಂಘಟನೆಗಳು ಈ ಗ್ರಾಮಗಳಲ್ಲಿ ನಡೆಯುತ್ತಿರುವ ಅಮಾನವೀಯ ಸಂಗತಿಗಳ ಕುರಿತು ಫೋಟೋ ಹಾಗೂ ಆಧಾರ ಸಹಿತ ಸಾಕಷ್ಟು ಬಾರಿ ಸಂಬಂದಿಸಿದ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ತಹಶಿಲ್ದಾರರಿಗೆ ತಿಳಿಸಿದ್ದಾರೆ. ಆದರೆ ಈವರೆಗೂ ಯಾವುದೇ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗದೇ ಇರೋದು ಅನುಮಾನಕ್ಕೀಡು ಮಾಡಿದೆ ಅಂತಾ ಅಲ್ಲಿನ ನಾಗರಿಕರು ಆರೋಪಿಸಿದ್ದಾರೆ. ಅಲ್ಲದೇ ಅಧಿಕಾರಿಗಳ ಈ ನಡವಳಿಕೆಗೆ ಸ್ಥಳಿಯ ಚಿಂತಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮುಂಬೈ ಉಗ್ರ ದಾಳಿ ನಡೆದಿದ್ದು ಇದೇ ದಿನ: ಅಂದು ಏನಾಗಿತ್ತು ಇಲ್ಲಿದೆ ವಿವರ

ಬಡತನ, ಕಷ್ಟ ಬಾಳಾ ನೋಡೀನ್ರೀ, ಅದು ಸಮಾಜದೊಳಗೆ ಯಾರಿಗೂ ಬರಬಾರದು ಎಂದಿದ್ದ ಮಹಂತೇಶ್ ಬೀಳಗಿ

ಮಹಂತೇಶ್ ಬೀಳಗಿಯದ್ದು ಅಪಘಾತವಲ್ಲ, ಮರ್ಡರ್: ಹೀಗೊಂದು ಬಾಂಬ್ ಹಾಕಿದ್ದು ಯಾರು

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಕುರ್ಚಿ ತಿಕ್ಕಾಟಕ್ಕೆ ಸ್ಪೋಟಕ ತಿರುವು

ಮುಂದಿನ ಸುದ್ದಿ
Show comments