Select Your Language

Notifications

webdunia
webdunia
webdunia
webdunia

ಹಗರಣಗಳು ಬಯಲಾಗುವ ಭಯದಿಂದ ಎಸಿಬಿ ರಚನೆ: ಯಡಿಯೂರಪ್ಪ

ಹಗರಣಗಳು ಬಯಲಾಗುವ ಭಯದಿಂದ ಎಸಿಬಿ ರಚನೆ: ಯಡಿಯೂರಪ್ಪ
ಹುಬ್ಬಳ್ಳಿ , ಬುಧವಾರ, 23 ಮಾರ್ಚ್ 2016 (12:46 IST)
ಮುಖ್ಯಮಂತ್ರಿ ಮತ್ತು ಸಚಿವರ ಹರಗಣಗಳು ಬಯಲಾಗುತ್ತವೆ ಎನ್ನುವ ಭಯದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಎಸಿಬಿ ರಚಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.
 
 ಒಂದು ವೇಳೆ, ಎಸಿಬಿ ರಚನೆಯೇ ಅಗತ್ಯವಾಗಿದೆ ಎಂದು ಸರಕಾರ ಭಾವಿಸಿದ್ದಲ್ಲಿ ಲೋಕಾಯುಕ್ತ ಮುಚ್ಚಿ ಎಸಿಬಿ ರಚಿಸಿಬಹುದಿತ್ತು ಎಂದು ವಾಗ್ದಾಳಿ ನಡೆಸಿದ್ದಾರೆ.
 
ಎಸಿಬಿ ಹಠಾವೋ ಬಗ್ಗೆ ಬೆಂಗಳೂರಿನಲ್ಲಿ ಮಾರ್ಚ್ 28 ರಂದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದ್ದಾರೆ 
 
ರಾಜ್ಯದಲ್ಲಿ ಕೊಲೆ, ಸುಲಿಗೆ ಪ್ರಕರಣಗಳು ಹೆಚ್ಚಾಗುತ್ತಿವೆ. ಮೈಸೂರಿನಲ್ಲಿ ಬಿಜೆಪಿ ಕಾರ್ಯಕರ್ತ ರಾಜು ಹಂತಕರು ಯಾರು ಎನ್ನುವುದು ಸರಕಾರಕ್ಕೆ ಗೊತ್ತಿದೆ. ಆದರೆ, ನಿರ್ಧಿಷ್ಠ ಸಮುದಾಯದ ಬೆಂಬಲಕ್ಕಾಗಿ ಸರಕಾರ ಮೌನವಾಗಿದೆ ಎಂದು ಆರೋಪಿಸಿದರು.

Share this Story:

Follow Webdunia kannada