ಕುಕ್ಕರ್ ಬಳಸಿ ಕಾಫಿ ತಯಾರಿಸುವುದನ್ನು ನೀವು ನೋಡಿದ್ದೀರಾ?!

Webdunia
ಗುರುವಾರ, 2 ಡಿಸೆಂಬರ್ 2021 (20:25 IST)
ಕುಕ್ಕರ್ ಬಳಸಿ ಕಾಫಿ ತಯಾರಿಸುವುದನ್ನು ನೀವು ನೋಡಿದ್ದೀರಾ?! ಬೀದಿ ವ್ಯಾಪಾರಿಯೊಬ್ಬರು ಕುಕ್ಕರ್​ ಬಳಸಿ ಬಿಸಿ ಬಿಸಿ ಕಾಫಿಯನ್ನು ತಯಾರಿಸುತ್ತಿರುವ ವಿಡಿಯೋ ವೈರಲ್ ಆಗಿದೆ.ನೀವು ಕಾಫಿ ಪ್ರಿಯರಾ? ಫಿಲ್ಟರ್ ಕಾಫಿ ಇಲ್ಲವೆಂದರೆ ನಿಮ್ಮ ದಿನ ಆರಂಭವಾಗುವುದೇ ಇಲ್ಲವಾ? ಮಧ್ಯರಾತ್ರಿ ಎಬ್ಬಿಸಿ ಕಾಫಿ ಕೊಟ್ಟರೂ ಕುಡಿಯುತ್ತೀರಾ? ಬೆಳಗ್ಗೆ ಎದ್ದ ಕೂಡಲೇ ನಿಮಗೆ ಬೆಡ್ ಕಾಫಿ ಬೇಕೇ ಬೇಕಾ? ಹಾಗಿದ್ದರೆ ಈ ವಿಚಿತ್ರವಾದ ಸುದ್ದಿಯನ್ನೊಮ್ಮೆ ಓದಿ ಬಿಡಿ. ಕಾಫಿಯನ್ನು ಇಷ್ಟಪಟ್ಟು ಕುಡಿಯುವವರೆಲ್ಲರಿಗೂ ಕಾಫಿ ಮಾಡಲು ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕಾಫಿ ಮಾಡುವುದು ಕೂಡ ಒಂದು ಕಲೆ. ಇಲ್ಲೊಬ್ಬರು ವ್ಯಕ್ತಿ ಕುಕ್ಕರ್​ನಲ್ಲಿ ರುಚಿ ರುಚಿಯಾದ ಕಾಫಿ ಸಿದ್ಧಪಡಿಸಿಕೊಡುತ್ತಾರೆ. ಅನ್ನ ಮಾಡುವ ಕುಕ್ಕರ್​ನಲ್ಲಿ ಕಾಫಿ ಮಾಡೋದು ಹೇಗೆ ಅಂತ ಆಶ್ಚರ್ಯವಾಗುತ್ತಿದ್ದರೆ ನೀವೂ ಈ ವಿಡಿಯೋವನ್ನೊಮ್ಮೆ ನೋಡಿ.
 
ಒಂದೊಂದು ಪ್ರದೇಶದ ಕಾಫಿಗೂ ವಿಭಿನ್ನವಾದ ರುಚಿ, ಪರಿಮಳ ಇರುತ್ತದೆ. ಕಾಫಿ ನಮ್ಮ ಇಂದ್ರಿಯಗಳನ್ನು ಜಾಗೃತಗೊಳಿಸುತ್ತದೆ. ಈಗೀಗ ಕಾಫಿಯಲ್ಲಿ ಹಲವು ಹೊಸ ಆಯ್ಕೆಗಳಿದ್ದರೂ ಫಿಲ್ಟರ್​ ಕಾಫಿಗೆ ಬೇಡಿಕೆ ಇದ್ದೇ ಇದೆ. ಸಣ್ಣ ಸಣ್ಣ ಗೂಡಂಗಡಿಗಳಲ್ಲೂ ಫಿಲ್ಟರ್ ಕಾಫಿಯನ್ನು ಅತ್ಯಂತ ರುಚಿಯಾಗಿ ಮಾಡಿಕೊಡುತ್ತಾರೆ. ಆದರೆ, ಕುಕ್ಕರ್ ಬಳಸಿ ಕಾಫಿ ತಯಾರಿಸುವುದನ್ನು ನೀವು ನೋಡಿದ್ದೀರಾ?! ಬೀದಿ ವ್ಯಾಪಾರಿಯೊಬ್ಬರು ಕುಕ್ಕರ್​ ಬಳಸಿ ಬಿಸಿ ಬಿಸಿ ಕಾಫಿಯನ್ನು ತಯಾರಿಸುತ್ತಿರುವ ವಿಡಿಯೋ ವೈರಲ್ ಆಗಿದೆ.ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್ ಮಾಡಿರುವ ಈ ವಿಡಿಯೋ ಭಾರೀ ವೈರಲ್ ಆಗಿದೆ. ಸೈಕಲ್​ನಲ್ಲಿ ಕಾಫಿ ಮಾರುತ್ತಿದ್ದ ವ್ಯಕ್ತಿ ಕುಕ್ಕರ್​ನಲ್ಲಿ ಕಾಫಿ ಮಾಡಿ ಕೊಡುತ್ತಿದ್ದಾರೆ. ಕಾಫಿ ಮಾಡುವ ಪಾತ್ರೆಯಲ್ಲಿ ಮೊದಲು ಹಾಲು ಮಿಕ್ಸ್​ ಮಾಡುವ ಆತ ನಂತರ ಕಾಫಿ ಡಿಕಾಕ್ಷನ್, ಸಕ್ಕರೆಯನ್ನು ಹಾಕುತ್ತಾನೆ. ನಂತರ ಆ ಕುಕ್ಕರ್​ನಿಂದ ಕಾಫಿ ಪಾತ್ರೆಯಲ್ಲಿ ನೊರೆ ಬರುವಂತೆ ಮಾಡಿ ಚೆನ್ನಾಗಿ ಮಿಕ್ಸ್​ ಮಾಡುತ್ತಾನೆ. ಕಣ್ಮುಚ್ಚಿ ತೆಗೆಯುವಷ್ಟರಲ್ಲಿ ಬಿಸಿಯಾದ, ನೊರೆಯುಕ್ತ ಕಾಫಿ ತಯಾರಾಗುತ್ತದೆ.
 
ಈ ವೀಡಿಯೊವನ್ನು ಅಪ್‌ಲೋಡ್ ಮಾಡಿದಾಗಿನಿಂದ 2.2 ಮಿಲಿಯನ್ ಜನರು ವೀಕ್ಷಿಸಿದ್ದಾರೆ. 28.7 ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಈ ಹೊಸ ಪ್ರಯೋಗ ಕಾಫಿ ತಯಾರಿಸುವ ಅನೇಕ ಜನರನ್ನು ವಿಸ್ಮಯಗೊಳಿಸಿದೆ. ಆತ ಮಾಡುವ ಕಾಫಿಗೆ ಸಾಕಷ್ಟು ಅಭಿಮಾನಿಗಳಿದ್ದು, ಸೈಕಲ್​ನಲ್ಲಿ ಕಾಫಿ ಮಾಡುವ ವ್ಯಕ್ತಿಯ ಸರಳತೆಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಂಕಷ್ಟದಲ್ಲಿರುವ ಶ್ರೀಲಂಕಾಗೆ ಆಪರೇಷನ್ ಸಾಗರ್ ಬಂಧು ಆರಂಭಿಸಿದ ಭಾರತ

ರಾಜ್ಯದ ಎಲ್ಲ ಸಮಸ್ಯೆಗೆ ನಾಟಿಕೋಳಿಯಲ್ಲಿ ಪರಿಹಾರವಿದೆಯೇ: ಎನ್.ರವಿಕುಮಾರ್ ಪ್ರಶ್ನೆ

ಶ್ರೀಲಂಕಾಗೆ ಸಹಾಯ ಮಾಡಲು ಹೋಗಿ ಮುಜುಗರಕ್ಕೀಡಾದ ಪಾಕಿಸ್ತಾನ, ಆಗಿದ್ದೇನು ಗೊತ್ತಾ

ಎರಡು ರಾತ್ರಿ ತೋಟದಲ್ಲೇ ಕಳೆದ ಮಗು, ಕೊನೆಗೂ ಹುಡುಕಿಕೊಟ್ಟ ಸಾಕು ನಾಯಿ

ಭಾರತಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಭೇಟಿ, ದೆಹಲಿಗೆ ಆಗಮಿಸಿದ ರಷ್ಯಾದ ವಿಶೇಷ ಭದ್ರತಾ ಪಡೆ

ಮುಂದಿನ ಸುದ್ದಿ
Show comments