Webdunia - Bharat's app for daily news and videos

Install App

ಮಹದಾಯಿ ಕಾಮಗಾರಿ ವಿಳಂಬ ಮಾಡೋದಿಲ್ಲ ಎಂದ ಸಚಿವ

Webdunia
ಬುಧವಾರ, 26 ಸೆಪ್ಟಂಬರ್ 2018 (16:17 IST)
ಈ ರಾಜ್ಯದ ಜನರ ಜನತೆಯ ಬೇಡಿಕೆಯಂತೆ ಸಿಕ್ಕಿರುವ ಮಹದಾಯಿ ನೀರು ಬಳಸಿಕೊಳ್ಳಲು ಸಿದ್ಧರಾಗಿದ್ದೇವೆ. ಯಾವುದೇ ಕಾರಣಕ್ಕೂ ನಾವು ಮಹದಾಯಿ ಯೋಜನೆ ಕಾಮಗಾರಿ ವಿಳಂಬ ಮಾಡಲ್ಲ. ಹೀಗಂತ ನೀರಾವರಿ ಸಚಿವ ಹೇಳಿದ್ದಾರೆ.

ಬೆಳಗಾಗಿ ಜಿಲ್ಲೆಯ ಕಣಕುಂಬಿ ಪ್ರವಾಸಿ ಮಂದಿರದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿದರು.
ಸಚಿವರಿಗೆ ಶಾಸಕಿಯರಾದ ಅಂಜಲಿ ನಿಂಬಾಳ್ಕರ, ಲಕ್ಷ್ಮೀ ಹೆಬ್ಬಾಳಕರ ಮತ್ತು ಅಧಿಕಾರಿಗಳು ಸಾಥ್ ನೀಡಿದರು.
ಮಹದಾಯಿ ಹೋರಾಟಕ್ಕೆ ಸ್ಪಂದಿಸಿದ ಮಾಧ್ಯಮದವರು ಮತ್ತು ಎಲ್ಲಾ ಹೋರಾಟಗಾರರಿಗೆ ಅಭಿನಂದನೆ ಸಲ್ಲಿಸಿದ ಡಿಕೆಶಿ, ಮಹದಾಯಿ ತೀರ್ಪಿನಿಂದ ನಮಗೆ ಅನ್ಯಾಯವಾಗಿದೆ. ತೀರ್ಪಿನ ಬಗ್ಗೆ ಸಂತೋಷಪಟ್ಟು ಹೇಳಲು ನಾನು ಸರ್ಕಾರದ ಪರ ಸಿದ್ದನಾಗಿಲ್ಲ. ಮಹದಾಯಿ ಜಲಾನಯನ ಪ್ರದೇಶದಲ್ಲಿ 188 ಟಿಎಂಸಿ ನೀರು ಇರುವುದು ಸ್ಪಷ್ಟವಾಗಿದೆ.

140 ಕ್ಕೂ ಅಧಿಕ ಟಿಎಂಸಿ ನೀರು ಸಮುದ್ರಪಾಲಾಗಿದೆ. ಇವತ್ತು ನಾನು ಶಾಸಕರು, ಅಧಿಕಾರಿಗಳ ಜೊತೆ ಕಣಕುಂಬಿಗೆ ಭೇಟಿ ನೀಡಿದ್ದೇನೆ. ಅನ್ಯಾಯದ ವಿರುದ್ಧ ಸುಪ್ರೀಂ ಕೋರ್ಟಗೆ ಹೋಗಲು ಸಿದ್ಧ ಎಂದ ಅವರು, ಮಹದಾಯಿ ಕಾಮಗಾರಿ ನಡೆಸಲು ಸುಪ್ರೀಂ ಕೋರ್ಟ ಕೊಟ್ಟಿರುವ ಸ್ಟೇ ತೆರವುಗೊಳಿಸಲು, ಕೇಂದ್ರ ಸರ್ಕಾರ ಗೇಜೆಟ್ ಆಗಬೇಕು.  ಅರಣ್ಯ ಇಲಾಖೆಗೆ ಕೇಂದ್ರ ಸರ್ಕಾರದ ಅನುಮತಿ ಬೇಕು.  ಈ ಮೂರು ಆದ್ರೆ ನಾವು ಆದಷ್ಟು ಬೇಗ ಕೆಲಸ ಆರಂಭಿಸುತ್ತೇವೆ.

731 ಹೆಕ್ಟೇರ್ ಜಮೀನು ಬೇಕಿದೆ. ಕಳಸಾಗೆ 499 ಅರಣ್ಯ ಜಮೀನು, 199 ಖಾಸಗಿ ಜಮೀನು ಸ್ವಾಧೀನಕ್ಕೆ ಕ್ರಮಕೈಗೊಳ್ಳುತ್ತೇವೆ. ಸಮುದ್ರಕ್ಕೆ ಹೋಗದೆ ವೇಸ್ಟ್‌ ಮಾಡದೇ ನೀರು ಬಳಸಿಕೊಳ್ಳುತ್ತೇವೆ ಎಂದರು.  

 

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments