Webdunia - Bharat's app for daily news and videos

Install App

ಸಾವಿರಾರು ಜನರೆದುರು ಜೋರಾಗಿ ಕಿರುಚಾಡಿದ ಮಹಿಳಾ ಜಿಲ್ಲಾಧಿಕಾರಿ: ಕಾರಣ ಗೊತ್ತಾ?

Webdunia
ಗುರುವಾರ, 26 ಜುಲೈ 2018 (17:53 IST)
ಅದು ತರಾಸು ರಂಗಮಂದಿರದ ಸಭಾಂಗಣ, ಹಿರಿಯ ಪೊಲೀಸ್ ಅಧಿಕಾರಿಗಳು, ಮಹಿಳಾ ಪೊಲೀಸ್ ಸಿಬ್ಬಂದಿಗಳು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಮಹಿಳೆಯರು, ವಿದ್ಯಾರ್ಥಿನಿಯರು ಸೇರಿದ್ರು, ಈ ವೇಳೆ ಮಹಿಳಾ ಜಿಲ್ಲಾಧಿಕಾರಿ ಇದ್ದಕ್ಕಿದ್ದಂತೆ ಜೋರಾಗಿ ಕಿರುಚೋಕೆ ಶುರು ಮಾಡಿದ್ರು.. ಅಯ್ಯೋ ಅವರಿಗೇನಾಯ್ತಪ್ಪಾ? ಇದ್ಯಾಕೀಗೆ ಕಿರುಚ್ತಿದಾರೆ ಅಂತೀರಾ?  
 
ಕೋಟೆನಾಡು
ಚಿತ್ರದುರ್ಗ ಜಿಲ್ಲಾ ಪೊಲೀಸ್ ಇಲಾಖೆ ಮಹಿಳೆಯರು ಮತ್ತು ಮಕಳಿಗೆ ಹೆಚ್ಚಿನ ರಕ್ಷಣೆ ನೀಡೋ ಜೊತೆಗೆ, ಅವರ ಸುರಕ್ಷತೆಗಾಗಿ ವೀರ ವನಿತೆ ಒನಕೆ ಓಬವ್ವಳ ಹೆಸರಿನಲ್ಲಿ ಓಬವ್ವ ಪಡೆಯೊಂದನ್ನ ತರಬೇತಿ ನೀಡಿ ಸಜ್ಜುಗೊಳಿಸಿದೆ. ಓಬವ್ವ ಪಡೆ ಯಾವ ರೀತಿ ಕಾರ್ಯಪ್ರವೃತ್ತವಾಗಿದೆ ಅನ್ನೋದರ ಡೆಮಾನ್ ಸ್ಟ್ರೇಷನ್ ಕೊಡೋಕೆ ಅಂತ ರಂಗಮಂದಿರದಲ್ಲಿ ಮಹಿಳೆಯರು ಮತ್ತು ಮಕ್ಕಳಿಗಾಗಿ ಸಮಾರಂಭವೊಂದನ್ನ ಆಯೋಜನೆ ಮಾಡಿದ್ರು, ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾಧಿಕಾರಿ ವಿವಿ ಜ್ಯೋತ್ಸ್ನಾ ಅವರು, ಜೋರಾಗಿ ಕಿರೋಚೋಕೆ ಶುರು ಮಾಡಿದ್ರು.

ಇದ್ಯಾಕಪ್ಪ ಮೇಡಂ ಅವರು ಹೀಗೆ ಕಿರುಚ್ತಿದ್ದಾರೆ ಅಂತ ಅಚ್ಚರಿ ಪಡುತ್ತಿರುವಾಗಲೇ ಭಾಷಣ ಮುಂದುವರೆಸಿದ ಡಿಸಿ ಮೇಡಂ, ಇಂದು ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಜೋರಾಗಿ ಮಾತನಾಡದಂತೆ ಕಟ್ಟುಪಾಡುಗಳನ್ನ ಮಾಡಿದ್ದಾರೆ, ಮನೆಯ ಮರ್ಯಾದೆ ಹೆಸರಿನಲ್ಲಿ ಮಹಿಳೆಯರ ಧನಿಯನ್ನು ಹತ್ತಿಕ್ಕಲಾಗ್ತಿದೆ, ಹೀಗಾಗಿ ಮಹಿಳೆಯರ ಮೌನವನ್ನ ದುರ್ಬಳಕೆ ಮಾಡಿಕೊಳ್ಳುತ್ತಿರುವ ಕ್ರಿಮಿನಲ್ ಗಳು, ಮಹಿಳೆಯರು ಮತ್ತು ಮಕ್ಕಳ ಮೇಲೆ ಅತ್ಯಾಚಾರ ಮತ್ತು ದೌರ್ಜನ್ಯ ಎಸಗಿ ತಪ್ಪಿಸಿಕೊಳ್ಳುತ್ತಿದ್ದಾರೆ, ಹೀಗಾಗಿ ಇನ್ನು ಮುಂದೆ ಹೆಣ್ಣು ಮಕ್ಕಳು ಯಾವುದೇ ಅಪಾಯಕ್ಕೆ ಸಿಲುಕಿದಂತ ಸಂದರ್ಭದಲ್ಲಿ ಜೋರು ಧನಿಯಲ್ಲಿ ಕಿರುಚುವ ಮೂಲಕ ಇತರರ ಗಮನವನ್ನು ಸೆಳೆದರೆ, ಕ್ರಿಮಿನಲ್ ಗಳು ಅಲ್ಲಿಂದ ಓಡಿ ಹೋಗ್ತಾರೆ ಎಂದು ಕಿವಿಮಾತು ಹೇಳಿದ್ರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆರ್ ಎಸ್ಎಸ್ ಗೀತೆ ಹಾಡಿದ್ದಕ್ಕೆ ಕ್ಷಮೆ ಯಾಚಿಸಿದ ಡಿಕೆ ಶಿವಕುಮಾರ್

Arecanut Price: ಅಡಿಕೆ, ಕೊಬ್ಬರಿ ಇಂದಿನ ಬೆಲೆ ಇಲ್ಲಿದೆ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಅಣ್ಣಾಮಲೈ ಪದಕ ಹಾಕಲು ಬಂದರೆ ಬೇಡ ಎಂದ ಯುವಕ: ವಿಡಿಯೋ

ಡಾ ಬಿಎಂ ಹೆಗ್ಡೆ ಪ್ರಕಾರ ತುಂಬಾ ಸುಸ್ತಾದಾಗ ಏನು ಮಾಡಬೇಕು

ಮುಂದಿನ ಸುದ್ದಿ
Show comments