Webdunia - Bharat's app for daily news and videos

Install App

ಅಂಬಿಗೆ ಅಂತಿಮ ನಮನ ಸಲ್ಲಿಸಿದ ಕನ್ನಡದ ಚಿತ್ರರಂಗದ ಗಣ್ಯರು

Webdunia
ಭಾನುವಾರ, 25 ನವೆಂಬರ್ 2018 (13:44 IST)
ಬೆಂಗಳೂರು : ಹಿರಿಯ ನಟ ಅಂಬರೀಶ್ ನಿಧನರಾದ ಹಿನ್ನಲೆಯಲ್ಲಿ ಕನ್ನಡ ಚಿತ್ರರಂಗದ ನಟ ನಟಿಯರು ಸಂತಾಪ ಸೂಚಿಸಿದ್ದು, ಇದೀಗ ಅಂಬಿ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ.


ಅಂಬರೀಶ್ ಅವರ ಅಂತಿಮ ದರ್ಶನ ಪಡೆದ ನಟ ರವಿಚಂದ್ರನ್ ಅವರು, ಅಂಬರೀಶ್ ಯಾವತ್ತಿದ್ರೂ ಶಾಶ್ವತ ಅಮರ. ಅವನ ಸ್ನೇಹ ಅಮರ . ಅಂಬರೀಶ್ ಎಷ್ಟು ತೂಕವಾಗಿದ್ದಾನೆ ಅಂದ್ರೆ ಅಷ್ಟೆ ತೂಕವಾಗಿ ಅವನ ಸ್ನೇಹ ಇದೆ. ಅವನು ತುಂಬಾ ಮೃದು ಸ್ವಭಾವದವನು ಎಂದು ಹೇಳಿದ್ದಾರೆ.


ಅಂಬರೀಶ್ ಅವರ ಅಂತಿಮ ದರ್ಶನ ಪಡೆದ ನಟಿ ಶೃತಿ ಅವರು ಅಂಬರೀಶ್ ಅವರು ಮೃದು ಸ್ವಭಾವದವರು. ರಾಜಕೀಯ ಹಾಗೂ ಸಿನಿಮಾರಂಗದಲ್ಲಿ ಹೆಸರು ಮಾಡಿದವರು. ಅವರು ತೆರೆಯಲ್ಲಿ ಮಾತ್ರ ನಾಯಕರಾಗದೆ, ಚಿತ್ರರಂಗದಲ್ಲಿ ನಡೆಯುವ ಯಾವುದೇ ಸಮಸ್ಯೆಯನ್ನ ಮೊದ್ಲು ತಗೊಂಡು ಹೋಗೋದೇ ಅಂಬರೀಷ್ ಅವ್ರ ಮನೆಗೆ.ಆಗ ಅದು ಖಂಡಿತವಾಗ್ಲೂ ಇತ್ಯರ್ಥವಾಗಿದೆ. ಸಾಲ್ವ್ ಆಗಿದೆ ಎಂದು ಹೇಳಿದ್ದಾರೆ.


ಚಿತ್ರರಂಗದಲ್ಲೂ ಹಾಗೂ ರಾಜಕೀಯದಲ್ಲೂ ಅಂಬರೀಶ್ ಅವರಿಗೆ ಸಾಥ್ ನೀಡಿದ ನಟಿ ತಾರಾ, ಇಹಲೋಕ ತ್ಯಜಿಸಿದ ಅಂಬರೀಶ್ ಅವರನ್ನು ನೆನೆದು ಗಳಗಳನೇ ಅತ್ತಿದ್ದಾರೆ.


ಅಂಬರೀಶ್ ನಿಧನದಿಂದ ಶಾಕ್ ಆದ ಬಹುಭಾಷಾ ನಟ ಪ್ರಕಾಶ್ ರೈ ಅವರು ಮೌನದಿಂದಲೇ  ಅಂಬರೀಶ್ ಅವರ ಅಂತಿಮ ದರ್ಶನ ಪಡೆದಿದ್ದಾರೆ.


ಹಿರಿಯ ನಟಿ ಲಕ್ಷ್ಮೀ ಅವರು ಅಂಬರೀಶ್ ಅವರ ಅಂತಿಮ ದರ್ಶನ ಪಡೆದು ಅಂಬರೀಶ್ ಪತ್ನಿ ಸುಮಲತಾ ಹಾಗೂ ಮಗನಿಗೆ ಸಾಂತ್ವನ ಹೇಳಿದ್ದಾರೆ. ನಟ ಯಶ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ನಿಖಿಲ್ ಕುಮಾರಸ್ವಾಮಿ ಹಾಗೂ ಕನ್ನಡ ಸಿನಿಮಾ ರಂಗದ ಹಲವು ನಟನಟಿಯರು ಆಗಮಿಸಿ ಅಂಬಿ ಅವರಿಗೆ ಅಂತಮ ನಮನ ಸಲ್ಲಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments