Webdunia - Bharat's app for daily news and videos

Install App

ಸಮುದ್ರ ನೀರಿನಲ್ಲಿ ಓಡಿದ ಬಸ್ : ತಪ್ಪಿದ ಅನಾಹುತ

Webdunia
ಶುಕ್ರವಾರ, 18 ಜನವರಿ 2019 (16:16 IST)
ಖಾಸಗಿ ಬಸ್ ಚಾಲಕನೊಬ್ಬ ಉದ್ಧಟತನ ತೋರಿ ಪ್ರವಾಸಿಗರಿದ್ದ ಬಸ್ ನ್ನು ಸಮುದ್ರದ ನೀರಿನಲ್ಲಿ ಚಲಾಯಿಸಿ ಕೊನೆಗೆ ಸಂಕಷ್ಟಕ್ಕೆ ಈಡಾದ ಘಟನೆ ನಡೆದಿದೆ.

ಚಾಲಕನ ನಿರ್ಲಕ್ಷ್ಯದಿಂದಾಗಿ ಪ್ರವಾಸಿಗರನ್ನು  ಕರೆದುಕೊಂಡು ಬಂದಿದ್ದ ಮಿನಿಬಸ್ಸೊಂದು ಸಮುದ್ರದ ನೀರಿನಲ್ಲಿ  ಸಿಕ್ಕಿಹಾಕಿಕೊಂಡ ಘಟನೆ ಉತ್ತರ ಕನ್ನಡ ಜಿಕ್ಲೆಯ ಮುರ್ಡೇಶ್ವರದಲ್ಲಿ ನಡೆದಿದೆ.

`ಟೂರ್ ಬಾಸ್' ಹೆಸರಿನ ಮಿನಿಬಸ್‍ನಲ್ಲಿ ಉತ್ತರ ಕರ್ನಾಟಕದಿಂದ ಕೆಲವರು ಮುರುಡೇಶ್ವರಕ್ಕೆ ಪ್ರವಾಸಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಚಾಲಕ ಉದ್ದಟತನ ತೋರಿ ಮಿನಿ ಬಸ್ ಅನ್ನು ಸಮುದ್ರಕ್ಕೆ ತೆಗೆದುಕೊಂಡು ಹೋಗಿದ್ದಾನೆ. ಸಮುದ್ರದಲ್ಲಿ ನೀರಿನ ಇಳಿತವಿದ್ದಿದ್ದರಿಂದ (ಲೋ ಟೈಡ್) ಚಾಲಕ ಏನು ಆಗುವುದಿಲ್ಲ ಎಂದು ಭಾವಿಸಿ ನೀರಿನಲ್ಲಿ ಇನ್ನಷ್ಟು ಮುಂದಕ್ಕೆ ಹೋಗಿದ್ದಾನೆ. ಆಗ ಬಸ್ ಉಸುಕಿನಲ್ಲಿ ಸಿಕ್ಕಿಹಾಕಿಕೊಂಡಿದೆ. ಮಿನಿ ಬಸ್‍ನ ಚಕ್ರಗಳು ಉಸುಕಿನಲ್ಲಿ ಸಿಕ್ಕಿಹಾಕಿಕೊಂಡಿದ್ದರಿಂದ ಎಷ್ಟೇ ಪ್ರಯತ್ನಿಸಿದರೂ ಬಸ್ ಅಲ್ಲಿಂದ ಕದಲಲಿಲ್ಲ.

ಇನ್ನೊಂದೆಡೆ ಸಮುದ್ರದಲ್ಲಿ ಉಬ್ಬರ (ಹೈ ಟೈಡ್) ಹೆಚ್ಚಾಗುತ್ತಿದ್ದರಿಂದ ಬಸ್ ಸಮುದ್ರ ಪಾಲಾಗುವ ಆತಂಕವಿತ್ತು. ಬಸ್‍ನಲ್ಲಿದ್ದ ಬಟ್ಟೆ-ಬರೆ, ಬ್ಯಾಗ್‍ಗಳನ್ನು ಹೊರಗೆ ತೆಗೆಯಲಾಯಿತು. ನೆರವಿಗೆ ಸ್ಥಳೀಯರು ಧಾವಿಸಿದರು. ಕೊನೆಗೆ ಟ್ರ್ಯಾಕ್ಟರ್ ತಂದು ಅದರ ಸಹಾಯದಿಂದ ಬಸ್ ಅನ್ನು ಸುರಕ್ಷಿತವಾಗಿ ದಡಕ್ಕೆ ಎಳೆದು ತರಲಾಯಿತು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸೆ.1ರಂದು ಧರ್ಮಸ್ಥಳ ಚಲೋ, ಬೃಹತ್ ಸಮಾವೇಶ:ವಿಜಯೇಂದ್ರ

ಧರ್ಮಸ್ಥಳದ ವಿರುದ್ಧ ದೊಡ್ಡ ಷಡ್ಯಂತ್ರ: ಎಸ್.ಆರ್.ವಿಶ್ವನಾಥ್

ಟಿಪ್ಪು ಸುಲ್ತಾನ್ ದಸರಾ ಮಾಡಿದ್ರು: ತನ್ವೀರ್ ಸೇಠ್ ಹೇಳಿಕೆ

ಬಾನು ಮುಷ್ತಾಕ್ ಹಿಂದೂ ಸಂಸ್ಕೃತಿ ಒಪ್ಪಿ ಬರ್ತಾರಾ: ಬಿವೈ ವಿಜಯೇಂದ್ರ

ಧರ್ಮಸ್ಥಳ ಪ್ರಕರಣದಲ್ಲಿ ಎಸ್ಐಟಿಗೆ ಸೂಚಿಸಿದ ದೆಹಲಿ ನಾಯಕ ಯಾರು: ತೇಜಸ್ವಿ ಸೂರ್ಯ

ಮುಂದಿನ ಸುದ್ದಿ
Show comments