Select Your Language

Notifications

webdunia
webdunia
webdunia
webdunia

ತಾಜ್ ಮಹಲ್ ಆಗಲಿದೆಯೇ ಶಿವನ ದೇವಸ್ಥಾನ ?!

ತಾಜ್ ಮಹಲ್ ಆಗಲಿದೆಯೇ ಶಿವನ ದೇವಸ್ಥಾನ ?!
ನವದೆಹಲಿ , ಗುರುವಾರ, 26 ಮಾರ್ಚ್ 2015 (12:47 IST)
ಧರ್ಮಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ವಿವಾದಗಳು ಉದ್ಭವಿಸಬಾರದು ಎಂದು ಪ್ರಧಾನಿ ಮೋದಿ ಅವರು ಉದ್ಗರಿಸುತ್ತಿರುವ ಬೆನ್ನಲ್ಲೇ ಆಗ್ರಾದ ಪ್ರವಾಸಿ ತಾಣ ತಾಜ್ ಮಹಲ್ ಶಿವನ ದೇವಸ್ಥಾನ ಎಂಬ ಪ್ರಕರಣದ ತೀರ್ಪನ್ನು ಆಲಿಸಲು ಬುಧವಾರ ಆರ್ಎಸ್ಎಸ್‌ನ ಆರು ಮಂದಿ ವಕೀಲರು ಇಲ್ಲಿನ ನಗರ ಸಿವಿಲ್ ನ್ಯಾಯಾಲಯಕ್ಕೆ ಆಗಮಿಸಿದ್ದರು. ಆದರೆ ಕೋರ್ಟ್ ತೀರ್ಪನ್ನು ಕಾಯ್ದಿರಿಸಿತು!  
 
ದೂರು ನೀಡಿರುವ ವಕೀಲರಲ್ಲಿ ಹರಿಶೇಖರ್ ಜೈನ್ ಸೇರಿದಂತೆ ಆರು ಮಂದಿ ದೂರು ದಾಖಲಿಸಿದ್ದರು. ದೇವ ಅಗ್ರೇಶ್ವರ್ ಮಹಾದೇವ್ ಅವರೇ ದೂರಿನ ಮುಖ್ಯ ಫಿರ್ಯಾದುದಾರರಾಗಿದ್ದು, ತಾಜ್ ಮಹಲ್ ಆಸ್ತಿಯ ಒಡೆಯರು ಅವರೇ ಆಗಿದ್ದಾರೆ ಎಂದು ಶಿವನ ಹೆಸರನ್ನು ಉಲ್ಲೇಖಿಸಿದ್ದರು. ಅಲ್ಲದೆ ತಾಜ್ ಮಹಲ್ ಸಂಬಂಧವಿರುವ ಎಲ್ಲಾ ಆರೋಪಗಳನ್ನು ಶಮನಗೊಳಿಸಬೇಕಿದೆ. ಜೊತೆಗೆ ಇಲ್ಲಿ ಪ್ರಸ್ತುತ ಮುಸ್ಲಿಂ ಸಮುದಾಯದವರು ಪ್ರಾರ್ಥನೆ ಸಲ್ಲಿಸುತ್ತಿದ್ದು, ಅವರನ್ನು ನಿಷೇಧಿಸಿ ಬಳಿಕ ಹಿಂದೂ ಧರ್ಮದವರಿಗೆ ಶಿವನನ್ನು ಪೂಜಿಸಲು ಅವಕಾಶ ನೀಡಬೇಕು ಎಂದು ದೂರಿನಲ್ಲಿ ತಿಳಿಸಿದ್ದರು.  
 
ತಾಜ್ ಮಹಲ್ ಪ್ರಸ್ತುತ ಸರ್ಕಾರದ ಪುರಾತತ್ವ ಇಲಾಖೆ ಅಡಿಯಲ್ಲಿದೆ.
 
ಇಂತಹುದೇ ವಿವಾದಕ್ಕೆ ಕಾರಣವಾಗಿದ್ದ ಮತ್ತೊಂದು ಪ್ರಕರಣವಾದ ಅಯೋಧ್ಯೆಯು ರಾಮನ ಜನ್ಮಭೂಮಿ ಎಂಬ ಪ್ರಕರಣ ಇಂದಿಗೂ ಕೂಡ ಸುಪ್ರೀಂ ನ್ಯಾಯಾಲಯದಲ್ಲಿ ಇನ್ನೂ ಬಾಕಿ ಉಳಿದಿದೆ. 

Share this Story:

Follow Webdunia kannada