ಮಂಗಳೂರಿನ ಪ್ರಖ್ಯಾತ ಕಟೀಲು ಪರಮೇಶ್ವರಿ ದೇವಸ್ಥಾನದ ಸಹಾಯಕ ಅರ್ಚಕರ ಮೇಲೆ ಹದಿಹರೆಯದ ಯುವತಿಯೋರ್ವಳ ಮೇಲೆ ಅತ್ಯಾಚಾರ ಎಸಗಿದ ಆರೋಪ ಕೇಳಿ ಬಂದಿದೆ.
ಕಳೆದ ವರ್ಷವೇ ಈ ಘಟನೆ ನಡೆದಿತ್ತು, ಆದರೆ ಇತ್ತೀಚಿಗೆ ಪೀಡಿತ ಯುವತಿ ಗರ್ಭಪಾತ ಮಾಡಿಸಿಕೊಳ್ಳಲು ಆಸ್ಪತ್ರೆಗೆ ಬಂದಾಗ ವಿಚಾರ ಬೆಳಕಿಗೆ ಬಂದಿದೆ.
ಪೊಲೀಸರ ಪ್ರಕಾರ ಆರೋಪಿ ಹರಿಶ್ಚಂದ್ರ ರಾವ್ (56) ಅಲಿಯಾಸ್ ಅಪ್ಪು ಭಟ್ಟ ತನ್ನ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯ ಮೇಲೆ ಆಗಸ್ಟ್ 2015ರಲ್ಲಿ ಅತ್ಯಾಚಾರವೆಸಗಿದ್ದರು. ಆಕೆ ಗರ್ಭಿಣಿಯಾದ ಸಂಗತಿ ತಿಳಿದ ಅರ್ಚಕ ಆಕೆಗೆ ಬೇಕಾದಷ್ಟು ಹಣ ಕೊಡುತ್ತೇನೆ ಎಂದು ಪುಸಲಾಯಿಸಲು ಪ್ರಯತ್ನಿಸಿದ್ದ.
ಇತ್ತೀಚಿಗೆ ಆಕೆ ಗರ್ಭಪಾತ ಮಾಡಿಸಿಕೊಳ್ಳಲು ಆಸ್ಪತ್ರೆಗೆ ಬಂದಾಗ ಸತ್ಯ ತಿಳಿದ ಆಸ್ಪತ್ರೆಯ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೀಡಿತೆ ಕೂಡ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.