Select Your Language

Notifications

webdunia
webdunia
webdunia
webdunia

ಕನ್ನಡ ನುಡಿ ಜಾತ್ರೆಗೆ ಸಿಎಂ ಆಗಮಿಸಿದ ಕಾಪ್ಟರ್‌ನಲ್ಲಿ ತಾಂತ್ರಿಕ ದೋಷ

ಕನ್ನಡ ನುಡಿ ಜಾತ್ರೆಗೆ ಸಿಎಂ ಆಗಮಿಸಿದ ಕಾಪ್ಟರ್‌ನಲ್ಲಿ ತಾಂತ್ರಿಕ ದೋಷ
ಶ್ರವಣಬೆಳಗೊಳ , ಭಾನುವಾರ, 1 ಫೆಬ್ರವರಿ 2015 (11:15 IST)
ಜೈನ ಕಾಶಿ ಶ್ರವಣಬೆಳಗೊಳದಲ್ಲಿ ಅಕ್ಷರ ಜಾತ್ರೆಗೆ ಜ್ಯೋತಿ ಬೆಳಗುವ ಮೂಲಕ ಸಿಎಂ ಸಿದ್ದರಾಮಯ್ಯ ಅಧಿಕೃತ ಉದ್ಘಾಟನೆ ಮಾಡಲಿದ್ದು, ಈಗಾಗಲೇ ಸಿಎಂ ವೇದಿಕೆಗೆ ಆಗಮಿಸಿದ್ದಾರೆ.  

ಸಿಎಂ ಸಿದ್ದರಾಮಯ್ಯ ಆಗಮಿಸುತ್ತಿದ್ದ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿ ಚಕ್ರವು ಬಿಚ್ಚಿಕೊಳ್ಳದೇ ಕಾಪ್ಟರ್ ಸ್ವಲ್ಪ ಹೊತ್ತು ಆಕಾಶದಲ್ಲಿ ಹಾರಾಡಿತ್ತು. ಸ್ವಲ್ಪ  ಸಮಯದ ನಂತರ ಮತ್ತೆ ಸುರಕ್ಷಿತವಾಗಿ ಲ್ಯಾಂಡಿಂಗ್ ಆಗಿದೆ. ಕೆಲವು ದಿನಗಳ ಹಿಂದೆ ಸಿದ್ದರಾಮಯ್ಯಮೈಸೂರಿಗೆ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷದಿಂದ ಬೆಂಕಿ ಕಾಣಿಸಿಕೊಂಡಿತ್ತು.

ಪ್ರಭಾತಂ ಏವಿಯೇಷನ್ ಕಂಪನಿ ಕಾಪ್ಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಅದರ ಗುತ್ತಿಗೆಯನ್ನು ರದ್ದುಮಾಡಲಾಗಿತ್ತು. ನಿನ್ನೆ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸಿದ್ದಲಿಂಗಯ್ಯ ಅವರ ಅದ್ಧೂರಿ ಮೆರವಣಿಗೆ ನಡೆದಿತ್ತು. ಅನೇಕ ಸಾಹಿತ್ಯಾಸಕ್ತರು, ಸಾಹಿತಿಗಳು, ಕನ್ನಡಾಭಿಮಾನಿಗಳು ಶ್ರವಣಬೆಳಗೊಳದಲ್ಲಿ ನೆರೆದಿದ್ದು, ಕನ್ನಡ ಜಾತ್ರೆಗೆ ಮೆರುಗು ತಂದಿದೆ. 

Share this Story:

Follow Webdunia kannada