ಕುರುಬರ ಸಂಘದ ಅಭಿನಂದನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅನಿರೀಕ್ಷಿತವಾಗಿ ಸಿಹಿ ಮುತ್ತಿನ ಭಾಗ್ಯ ದೊರೆತಿದೆ.
ಬೆಂಗಳೂರು ನಗರದ ಅರಮನೆ ಮೈದಾನದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘ ಆಯೋಜಿಸಿದ್ದ ಕುರುಬರ ಸಂಘದ ಅಭಿನಂದನಾ ಸಮಾರಂಭದಲ್ಲಿ ಅನಿರೀಕ್ಷಿತವಾಗಿ ತಾಲೂಕು ಪಂಚಾಯತಿ ಸದಸ್ಯೆ ಸಿಹಿ ಮುತ್ತು ಕೊಟ್ಟ ಘಟನೆ ವರದಿಯಾಗಿದೆ. ಸಮಾರಂಭಕ್ಕೆ ಬಂದಿದ್ದ ತಾಲೂಕು ಪಂಚಾಯತಿ ಸದಸ್ಯೆ ಮುಖ್ಯಮಂತ್ರಿಯವರೊಂದಿಗೆ ಪೋಟೊ ತೆಗೆಸಿಕೊಂಡು, ಅಭಿಮಾನದಿಂದ ಮುತ್ತು ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಮ್ಮ ಅಪ್ಪಾಜಿಯಂತೆ, ಅವರ ಪಕ್ಷದಲ್ಲಿ ತಾಲೂಕು ಪಂಚಾಯಿತಿ ಸದಸ್ಯೆಯಾಗಿ ಆಯ್ಕೆಯಾಗಿದ್ದೇನೆ. ಮುಖ್ಯಮಂತ್ರಿಯವರೊಂದಿಗೆ ಮಾತನಾಡಿದ್ದೇನೆ. ಆದರೆ, ಅವರನ್ನು ಭೇಟಿ ಮಾಡಿರಲಿಲ್ಲ. ಸಮಾರಂಭದಲ್ಲಿ ಮುಖ್ಯಮಂತ್ರಿಯವರನ್ನು ಭೇಟಿಯಾಗಲೆಂದೇ ಬಂದಿದ್ದೆ. ಅವರ ಮೇಲಿನ ಪ್ರೀತಿ ಅಭಿಮಾನದಿಂದ ಮುತ್ತು ನೀಡಿದ್ದೇನೆ. ಎಂದು ತಾಲೂಕು ಪಂಚಾಯತಿ ಸದಸ್ಯೆ ಸ್ಪಷ್ಟಪಡಿಸಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ