Webdunia - Bharat's app for daily news and videos

Install App

10 ಕೋಟಿ ಕೊಡುವ ಬದಲು ಹೇಳಿಕೆ ಹಿಂಪಡೆಯಿರಿ: ಆರ್.ಅಶೋಕ್ ಸೂಚನೆ

Webdunia
ಶನಿವಾರ, 5 ಸೆಪ್ಟಂಬರ್ 2015 (16:39 IST)
ತಮ್ಮನ್ನು ಬಿಜೆಪಿ ನಾಯಕರು ಅಪಹರಿಸಲು ಪ್ರಯತ್ನಿಸುತ್ತಿದ್ದು ಆಪರೇಶನ್ ಕಮಲ ಮಾಡುವ ಯತ್ನದಲ್ಲಿದ್ದಾರೆ ಎಂದು ಆರೋಪಿಸಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಶಾಸಕ ಆರ್.ಅಶೋಕ್ ಅವರು ಬಿಬಿಎಂಪಿಯ ಕಾಂಗ್ರೆಸ್ ಕಾರ್ಪೊರೇಟರ್ ಆರ್.ಪದ್ಮಾವತಿ ಅವರಿಗೆ ಇಂದು ಲೀಗಲ್ ನೋಟಿಸ್ ಜಾರಿಗೊಳಿಸಿದ್ದು, ಆರೋಪವನ್ನು ಹಿಂಪಡೆಯುವಂತೆ ಸೂಚಿಸಿದ್ದಾರೆ. 
 
ಉನ್ನತ ಮೂಲಗಳ ಪ್ರಕಾರ, ಅಶೋಕ್ ಅವರು ತಮ್ಮ ವಕೀಲರಿಂದ ಈ ಲಿಗಲ್ ನೋಟಿಸ್‌ನ್ನು ಕಳುಹಿಸಿದ್ದು, ತಮ್ಮ ವಿರುದ್ಧ ನಿನ್ನೆ ಮಾಧ್ಯಮಗಳೆದುರು ನೀಡಿದ್ದ ಹೇಳಿಕೆಯನ್ನು ಹಿಂಪಡೆಯಿರಿ. ಇಲ್ಲವಾದಲ್ಲಿ 10 ಕೋಟಿ ರೂ. ಬೇಡಿಕೆಯೊಂದಿಗೆ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂಬುದಾಗಿ ಪದ್ಮಾವತಿ ಅವರನ್ನು ಎಚ್ಚರಿಸಿದ್ದಾರೆ ಎನ್ನಲಾಗಿದೆ. 
 
ಹೌದು, ನಿನ್ನೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ್ದ ನಗರದ ಚೌಡೇಶ್ವರಿ ವಾರ್ಡ್‌ನ ಕಾಂಗ್ರೆಸ್ ಸದಸ್ಯೆ ಪದ್ಮಾವತಿ ಅವರ ಪತಿ ಅಮರನಾಥ್, ಬ್ಯಾಟರಾಯನಪುರ ಬಿಜೆಪಿ ಕಾರ್ಯಕರ್ತರೋರ್ವರ ಮೊಬೈಲ್‌ನಿಂದ ತಮಗೆ ಕರೆ ಬಂದಿದ್ದು, ನಿಮಗೆ 2.5 ಕೋಟಿ ನೀಡುತ್ತೇವೆ. ಅದನ್ನು ತೆಗೆದುಕೊಂಡು ಚುನಾವಣೆಗೆ ಮಾಡಿಕೊಂಡಿರುವ ಸಾಲ ತೀರಿಸಿಕೊಳ್ಳಿ. ಮುಂದೆ ನಮ್ಮದೇ ಪಕ್ಷದಲ್ಲಿ ತಮಗೆ ಟಿಕೆಟ್‌ನ್ನು ನೀಡಿ ಪ್ರಚಾರಕ್ಕೆ ಹಣವನ್ನೂ ಒದಗಿಸಲಿದ್ದೇವೆ ಎಂದು ಹೇಸರನ್ನು ಹೇಳದೆ ಪರೋಕ್ಷವಾಗಿ ಆರ್.ಅಶೋಕ್ ಅವರನ್ನು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಅಶೋಕ್ ನೋಟಿಸ್ ಜಾರಿಗೊಳಿಸಿದ್ದಾರೆ.  

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments