Select Your Language

Notifications

webdunia
webdunia
webdunia
webdunia

ಭಕ್ತರ ಮಗಳ ಜೊತೆ ಓಡಿಹೋದ ಕಾಮಿ ಸ್ವಾಮೀಜಿ

ಭಕ್ತರ ಮಗಳ ಜೊತೆ ಓಡಿಹೋದ ಕಾಮಿ ಸ್ವಾಮೀಜಿ
ಬೆಳಗಾವಿ , ಸೋಮವಾರ, 12 ಜನವರಿ 2015 (15:28 IST)
ಬೆಳಗಾವಿಯ ಅರಳಿಕಟ್ಟಿ ಗ್ರಾಮದಲ್ಲಿ ಶಿವಯೋಗೀಶ್ವರ ಪ್ರಭು ಸ್ವಾಮೀಜಿಯೇ ಭಕ್ತರ ಮಗಳ ಜೊತೆ ಎಸ್ಕೇಪ್ ಆಗಿರುವ ಘಟನೆ ನಡೆದಿದೆ.  ಕಾಮಿ ಸ್ವಾಮಿಯ ಈ ಕಾಮದಾಟದಿಂದ ರೊಚ್ಚಿಗೆದ್ದ ಗ್ರಾಮಸ್ಥರು ಅರಳಿಕಟ್ಟೆಯ ಮಠಕ್ಕೆ ಬೆಂಕಿ ಹಚ್ಚಿದ್ದಾರೆ.

ಅರಳಿಕಟ್ಟೆಯ ಭಕ್ತರೊಬ್ಬರು ಸ್ವಾಮೀಜಿಯ ಆಶೀರ್ವಾದ ಪಡೆಯಲು ಬರುತ್ತಿದ್ದಾಗ ಭಕ್ತರ ಪುತ್ರಿಯನ್ನೇ ಪ್ರೀತಿಸಲಾರಂಭಿಸಿ ಕೊನೆಗೆ ಅವಳ ಜೊತೆ ಮಠವನ್ನೇ ಬಿಟ್ಟು ಕಳ್ಳ ಸ್ವಾಮೀಜಿ ಓಡಿಹೋಗಿದ್ದಾನೆ.  ಅರಳಿಕಟ್ಟೆ ಗ್ರಾಮದ ಮಠದಲ್ಲಿದ್ದ ಸ್ವಾಮೀಜಿ ಅಲ್ಲಿಗೆ ಬರುತ್ತಿದ್ದ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ.

ಇದರಿಂದ ಕೆಲ ಗ್ರಾಮಸ್ಥರು ರೊಚ್ಚಿಗೆದ್ದಿದ್ದರಿಂದ ಅರಳಿಕಟ್ಟೆ ಮಠಕ್ಕೆ ಬಿಟ್ಟು ಸೋಮನಹಟ್ಟಿಗೆ ತೆರಳಿ ಅಲ್ಲಿಯೂ ತನ್ನ ಕಾಮಚೇಷ್ಟೆ ತೋರಿಸುತ್ತಿದ್ದ. ಸ್ವಾಮೀಜಿಯ ಜೊತೆ ಯುವತಿ ಕಾವಿ ತೊಟ್ಟ ಕಪಟಿಯ ಜೊತೆ  ನಡೆಸಿದ ಸಂಭಾಷಣೆ ಯುವತಿಯ ಮೊಬೈಲ್‌ನಲ್ಲಿರುವುದನ್ನು ಸೋದರ ಸಿಕ್ಕಿದ ಬಳಿಕ ಸ್ವಾಮೀಜಿ ಯುವತಿಯ ಜೊತೆ ಓಡಿಹೋಗಿರುವುದು ಬೆಳಕಿಗೆ ಬಂದಿದೆ.

ಯುವತಿಯ ಪೋಷಕರು ದಾರಿ ಕಾಣದೇ ಕಂಗಾಲಾಗಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಸ್ವಾಮೀಜಿ ಒಂದೊಂದು ಊರಿಗೆ ಹೋದಾಗಲೆಲ್ಲಾ ಒಂದೊಂದು ಹೆಸರನ್ನಿಟ್ಟುಕೊಂಡು ಜನರಿಗೆ ವಂಚಿಸುತ್ತಿದ್ದ ಎಂದು ತಿಳಿದುಬಂದಿದೆ.

Share this Story:

Follow Webdunia kannada