Webdunia - Bharat's app for daily news and videos

Install App

ಎಸ್ ಎಂ ಕೃಷ್ಣರನ್ನು ಟೀಕಿಸಲು ಹೋಗಿ ತಾವೇ ಪೆಚ್ಚಾದ ಮಲ್ಲಿಕಾರ್ಜುನ ಖರ್ಗೆ!

Webdunia
ಶುಕ್ರವಾರ, 24 ಮಾರ್ಚ್ 2017 (12:12 IST)
ಬೆಂಗಳೂರು: ಎಸ್ ಎಂ ಕೃಷ್ಣ ಬಿಜೆಪಿಗೆ ಬಂದ ಮೇಲೆ ಕಾಂಗ್ರೆಸ್ ನ ನಾಯಕರು ಅವರ ಮೇಲೆ ಟೀಕೆ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ನಿನ್ನೆ ಮಾಡಿದ ವ್ಯಂಗ್ಯವೊಂದು ಅವರಿಗೇ ತಿರುಗುಬಾಣವಾಗಿದೆ.

 

ನಿನ್ನೆ ಖರ್ಗೆ ಕೃಷ್ಣರನ್ನು ಟೀಕಿಸುವ ಭರದಲ್ಲಿ “ಅಯ್ಯೋ ಪಾಪ… ತಮ್ಮ ಅನುಭವದಷ್ಟು ವಯಸ್ಸಾಗದ ಅಮಿತ್ ಶಾ ಎದುರು ಕೈಕಟ್ಟಿ ನಿಲ್ಲುವ ಪರಿಸ್ಥಿತಿ ಎಸ್ ಎಂ ಕೃಷ್ಣ ಅವರದ್ದಾಗಬಾರದಿತ್ತು ಎಂದಿದ್ದರು.

 
ಬಹುಶಃ ಹಾಗೆ ಹೇಳುವಾಗ ತಮ್ಮ ಪರಿಸ್ಥಿತಿ ಬಗ್ಗೆ ಅವರು ಯೋಚಿಸಲಿಲ್ಲವೇನೋ. ಅದಕ್ಕೇ ಇಂದು ಬಿಜೆಪಿ ನಾಯಕ ಸುರೇಶ್ ಕುಮಾರ್ ಸರಿಯಾಗಿ ತಿರುಗೇಟು ಕೊಟ್ಟಿದ್ದಾರೆ. ಹಾಗಿದ್ದರೆ ಖರ್ಗೆ ರಾಜಕೀಯಕ್ಕೆ ಬಂದಿದ್ದು ಯಾವಾಗ? ರಾಹುಲ್ ಗಾಂಧಿ ವಯಸ್ಸೆಷ್ಟು? ರಾಹುಲ್ ಮತ್ತು ಖರ್ಗೆ ನಡುವೆ ವಯಸ್ಸಿನ ಅಂತರವೆಷ್ಟು ಎಂದು ಟ್ವಿಟರ್ ನಲ್ಲಿ ಟಾಂಗ್ ಕೊಟ್ಟಿದ್ದಾರೆ.

 
ವಿಶೇಷವೆಂದರೆ ಕೃಷ್ಣ ಮತ್ತು ಅಮಿತ್ ಶಾ ಬಗ್ಗೆ ಟೀಕಿಸಿದ್ದ ಖರ್ಗೆ ರಾಜಕೀಯಕ್ಕೆ ಬಂದ ವರ್ಷ ರಾಹುಲ್ ಗಾಂಧಿ ಜನಿಸಿದ್ದರು. ಇದೇ ಹಿನ್ನಲೆಯಲ್ಲಿ ಸುರೇಶ್ ಕುಮಾರ್ ಈ ರೀತಿ ತಿರುಗೇಟು ನೀಡಿದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments