Webdunia - Bharat's app for daily news and videos

Install App

ಸುಮಲತಾ ನನಗೆ ಶತ್ರು ಅಲ್ಲ, ಸಮಯ ಬಂದಾಗ ಮಾತನಾಡುತ್ತೇನೆ: ಕುಮಾರಸ್ವಾಮಿ

Sampriya
ಬುಧವಾರ, 27 ಮಾರ್ಚ್ 2024 (18:35 IST)
ಬೆಂಗಳೂರು: ಮಂಡ್ಯ ಕ್ಷೇತ್ರದ ಪ್ರಬಲ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಹಾಲಿ ಸಂಸದೆ ಸುಮಲತಾ ಅಂಬರೀಶ್ ಜತೆ ಬಿಜೆಪಿ- ಜೆಡಿಎಸ್‌ನ ಮಂಡ್ಯ ಅಭ್ಯರ್ಥಿ ಎಚ್‌ಡಿ ಕುಮಾರಸ್ವಾಮಿ ಅವರು ಸಮಯ ಬಂದಾಗ ಮಾತುಕತೆ ನಡೆಸುತ್ತೇನೆ ಎಂದು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ರಾಮಾಂಜನೇಯ ಯುದ್ದವೇ ನಡೆದು ಹೋಗಿದೆ. ನಮ್ಮಲ್ಲಿ ಯುದ್ದ ಆಗೊಲ್ಲವಾ ಎಂದರು. ಸುಮಲತಾ ಅವರ ಜೊತೆಗೆ ಮಾತುಕತೆ ಮಾಡ್ತೀನಿ. ಎಲ್ಲವೂ ಸುಗಮವಾಗಿ ನಡೆಯುತ್ತದೆ. ಸುಮಲತಾ ನನಗೆ ಶತ್ರು ಅಲ್ಲ. ಚುನಾವಣೆಗಳು ಬಂದಾಗ ಕೆಲವು ವಿಚಾರದಲ್ಲಿ ಕೆಲವು ಭಿನ್ನಾಭಿಪ್ರಾಯಗಳು ಬಂದಿರುತ್ತವೆ. ಆ ಸಂದರ್ಭದಲ್ಲಿ ಹಲವಾರು ರೀತಿ ಚರ್ಚೆಗಳು ಆಗಿರುತ್ತದೆ. ಅದನ್ನ ಈಗ ಇಟ್ಟುಕೊಳ್ಳುವ ಅವಶ್ಯಕತೆ ಇಲ್ಲ ಎಂದರು.

ಈ ವೇಳೆ ಅಂಬರೀಶ್ ಜತೆ ಕಳೆದ ದಿನಗಳನ್ನು ಮೆಲುಕು ಹಾಕಿದ ಕುಮಾರಸ್ವಾಮಿ ಅವರು, ಅಂಬರೀಶ್ ಇದ್ದಾಗ ಅವರ ಜತೆ ಊಟ ಸವಿದಿದ್ದೇನೆ. ಸುಮಲತಾ ಅವರೇ ನನಗೆ ಊಟ ಬಡಿಸಿದ್ದರು ಎಂದರು.

ರಾಜಕೀಯದಲ್ಲಿ ಕೆಲವು ಸನ್ನಿವೇಶಗಳಲ್ಲಿ ಇಂತಹ ಸಂಘರ್ಷಗಳು ಆಗಿರುತ್ತವೆ. ರಾಮಾಂಜನೇಯ ಯುದ್ದವೇ ಆಗಿ ಹೋಗಿದೆ. ಇನ್ನು ನಾವು ಹುಲು ಮಾನವರು. ನಮ್ಮಲ್ಲಿ ಯುದ್ದ ಆಗದೇ ಇರುತ್ತದೆಯಾ? ದೊಡ್ಡ ಮಟ್ಟದಲ್ಲಿ ಅದನ್ನೇ ಸಾಧಿಸಿಕೊಂಡು ಹೋಗೋ ಅವಶ್ಯಕತೆ ಇಲ್ಲ. ಸಮಯ ಬಂದಾಗ ಸುಮಲತಾ ಜೊತೆ ಮಾತನಾಡುತ್ತೇನೆ ಎಂದು ತಿಳಿಸಿದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Air India Plane crash: ವಿಮಾನ ದುರಂತದಲ್ಲಿ ಮನುಷ್ಯರೇ ಭಸ್ಮವಾದರೂ ಇದೊಂದು ವಸ್ತು ಹಾಗೆಯೇ ಇತ್ತು video

Arecanut price today: ಅಡಿಕೆ ಬೆಲೆ ಯಥಾಸ್ಥಿತಿ, ಕೊಬ್ಬರಿಗೆ ಬಂಪರ್

Gold Price today: ಅಬ್ಬಾ.. ಚಿನ್ನದ ದರ ಇಷ್ಟೊಂದಾ ಎನ್ನುವಷ್ಟಾಗಿದೆ ನೋಡಿ

Air India Plane crash: ವಿಮಾನ ದುರಂತ ವೀಕ್ಷಿಸಿ ರೀಲ್ಸ್ ಮಾಡ್ತೀರಾ, ಸಚಿವ ರಾಮಮೋಹನ್ ನಾಯ್ಡುಗೆ ತರಾಟೆ

Air India plane crash: ವಿಮಾನ ಪತನಕ್ಕೆ ಇದೇ ಕಾರಣನಾ

ಮುಂದಿನ ಸುದ್ದಿ
Show comments