ಬೆಂಗಳೂರು: ರಾಜ್ಯ ಕೃಷಿ ಸಚಿವರ ಬೇಜವಾಬ್ದಾರಿ ಹೇಳಿಕೆ ಖಂಡಿಸಿ ಬೆಂಗಳೂರಿನ ಹೆಬ್ಬಾಳ ಕೃಷಿ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಕೃಷಿ ಸಚಿವರ ಕೃಷ್ಣಭೈರೇಗೌಡರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಉದ್ಯೋಗ ನೇಮಕಾತಿ ಕುರಿತಂತೆ ವಿವಿ ವಿದ್ಯಾರ್ಥಿಗಳು ಕೃಷಿ ಸಚಿವ ಕೃಷ್ಣಭೈರೇಗೌಡರನ್ನು ಪ್ರಶ್ನಿಸಿದ್ದಕ್ಕೆ, ಕೃಷಿ ಸಚಿವರು ಆವಾಜ್ ಹಾಕಿ, ನೀವು ಕಾಲೇಜಿಗೆ ಸೇರುವಾಗ ನಾವು ಉದ್ಯೋಗ ಕೊಡ್ತೇವೆ ಎಂದು ಗ್ಯಾರಂಟಿ ನೀಡಿದ್ವಾ? ಉದ್ಯೋಗ ಕೊಡಬೇಕೆಂಬ ಕಾಯ್ದೆ ಇದೀಯಾ? ನಿಮ್ಮನ್ನು ಕೃಷಿ ಪದವಿ ಓದಿ ಎಂದು ಒತ್ತಾಯಾ ಮಾಡಿದ್ವಾ? ಕೃಷಿ ಪದವೀಧರರಿಗೆ ಸರ್ಕಾರವೇ ಕೆಲಸ ಕೊಡಬೇಕು ಎಂಬ ನಿಯಮವೇನೂ ಇಲ್ಲ. ಅದಕ್ಕೆಂದೇ ಅನೇಕ ಖಾಸಗಿ ಕಂಪನಿಗಳಿವೆ ಎಂದು ಸಚಿವರು ಬೇಜವಾಬ್ದಾರಿ ಹೇಳಿಕೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಕೃಷಿ ವಿದ್ಯಾರ್ಥಿಗಳು ಇಂದು ಮುಂಜಾನೆಯಿಂದ ತರಗತಿ ಬಹಿಷ್ಕರಿಸಿ, ಸಚಿವರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.