ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನಲ್ಲಿರುವ ಆದಿಚುಂಚನಗಿರಿ ಮಠದಲ್ಲಿ ವಿದ್ಯಾಧರನಾಥ ಸ್ವಾಮೀಜಿ ಮತ್ತು ಪ್ರಸನ್ನನಾಥ ಸ್ವಾಮೀಜಿ ನಡುವೆ ತೀವ್ರ ಕಿತ್ತಾಟ ನಡೆದ ಘಟನೆ ಸಂಭವಿಸಿದೆ. ವೇದ ಆಗಮ ಅಧ್ಯಯನ ವಿದ್ಯಾರ್ಥಿಗಳು ವಿದ್ಯಾಧರ ನಾಥ ಸ್ವಾಮೀಜಿ ಜೊತೆ ಮಾತಿನ ಚಕಿಮಕಿಗೆ ಇಳಿದು ಚೆನ್ನಾಗಿ ಥಳಿಸಿ ಹೊರದೂಡಿದ ಪ್ರಸಂಗವೂ ನಡೆಯಿತು.
ಗರ್ಭಗುಡಿ ಪ್ರವೇಶಕ್ಕೆ ಸಂಬಂಧಿಸಿದಂತೆ ಇವರಿಬ್ಬರೂ ಸ್ವಾಮೀಜಿಗಳ ನಡುವೆ ವೈಯಕ್ತಿಕ ಭಿನ್ನಾಭಿಪ್ರಾಯವಿತ್ತು. ಈ ಹಿನ್ನೆಲೆಯಲ್ಲಿ ಸದಾ ಕಿತ್ತಾಟವಾಡುತ್ತಿದ್ದರು. ಆದರೆ ಸ್ವಾಮೀಜಿಗೆ ಥಳಿಸಿದ ಘಟನೆಯ ಹಿಂದೆ ಒಳಸಂಚು ನಡೆದಿರಬಹುದೆಂದು ಶಂಕಿಸಲಾಗಿದೆ.
ಪ್ರಸನ್ನನಾಥ ಸ್ವಾಮೀಜಿ ವಿದ್ಯಾಧರ ಅವರನ್ನು ಥಳಿಸುವಂತೆ ವಿದ್ಯಾರ್ಥಿಗಳಿಗೆ ಪ್ರಚೋದನೆ ನೀಡಿರಬಹುದು ಎಂದು ಶಂಕಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾದರ ಜೊತೆ ಮಾತಿನ ಚಕಮಕಿಗೆ ಇಳಿದ ವಿದ್ಯಾರ್ಥಿಗಳು ಅವರನ್ನು ಥಳಿಸಿದ್ದಾರೆಂದು ಹೇಳಲಾಗುತ್ತಿದೆ.