ತಾಯಿ ಬುದ್ಧಿವಾದ ಹೇಳಿದಳು ಎಂಬ ಒಂದೇ ಕಾರಣಕ್ಕೆ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ
ಬೆಂಗಳೂರಿನ ಕೆಂಪಾಪುರದಲ್ಲಿ ನಡೆದಿದೆ.
ಪ್ರೆಸಿಡೆನ್ಸಿ ಕಾಲೇಜಿನ ವಿದ್ಯಾರ್ಥಿನಿ ಸೋಫಿಯಾ (23) ಎಂಬುವವಳೇ ಮೃತ ಯುವತಿ. ಎಲೆಕ್ಟ್ರಾನಿಕ್ ಸಿಟಿಯ ನಿವಾಸಿಯಾಗಿದ್ದ ಸೋಫಿಯಾ ಬೆಂಗಳೂರಿನ ಪ್ರೆಸಿಡೆನ್ಸಿ ಕಾಲೇಜು ಹಾಸ್ಟೆಲ್ನಲ್ಲಿ ವಾಸವಾಗಿದ್ದಳು. ಜುಲೈ 8 ರಂದು ಸೋಫಿಯಾ ತಾಯಿ ಕಾಲೇಜು ಶುಲ್ಕ ತುಂಬಲು ಹೋದಾಗ ಸೋಫಿಯಾ ಕಾಲೇಜಿನಲ್ಲಿ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಮತ್ತೆ ನಿನ್ನೆ ಕಾಲೇಜಿಗೆ ಬಂದ ಸೋಫಿಯಾ ತಾಯಿ ಸಹಪಾಠಿಗಳ ಎದುರೇ ಸೋಫಿಯಾಳಿಗೆ ಬುದ್ಧಿವಾದ ಹೇಳಿದ್ದರು.
ತನ್ನ ಸಹಪಾಠಿಗಳ ಎದುರೇ ತಾಯಿ ಬುದ್ಧಿವಾದ ಹೇಳಿದ್ದಕ್ಕೆ ನೊಂದ ಸೋಫಿಯಾ ಹಾಸ್ಟೆಲ್ನಲ್ಲಿರುವ ಫ್ಯಾನ್ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.