Webdunia - Bharat's app for daily news and videos

Install App

ಟೈಪ್-2 ಡಯಾಬಿಟೀಸ್ ರೋಗಿಗಳಲ್ಲಿ ರೋಗಿಗಳಲ್ಲಿ ಅತಿಯಾದ ಆಯಾಸ-ಅಧ್ಯಯನದಲ್ಲಿ ದೃಢ

Webdunia
ಶುಕ್ರವಾರ, 12 ನವೆಂಬರ್ 2021 (20:35 IST)
ಬೆಂಗಳೂರು: ಕೋವಿಡ್ ಬಳಿಕ ಟೈಪ್-2 ಡಯಾಬಿಟೀಸ್ ರೋಗಿಗಳಲ್ಲಿ ಅತಿ ಹೆಚ್ಚು ಆಯಸ್ಸು ಬರುತ್ತಿರುವುದು ಅಧ್ಯಯನದಿಂದ ದೃಢಪಟ್ಟಿದೆ.. 
ಫೋರ್ಟಿಸ್, ಸಿ-ಡಾಕ್, ಏಮ್ಸ್,ಸಿನೆಟ್, ಎನ್-ಡಾಕ್ ಮತ್ತು ಡಯಾಬಿಟಿಸ್ ಫೌಂಡೇಶನ್ ಸಂಸ್ಥೆಗಳು ನಡೆಸಿದ ಅಧ್ಯಯನದಲ್ಲಿ ಟೈಪ್-2 ಡಯಾಬಿಟೀಸ್ ಇರುವವರು ಕೋವಿಡ್ ಸೋಂಕಿಗೆ ಒಳಗಾದ ನಂತರ ಸಾಮಾನ್ಯರಿಗಿಂತ ಹೆಚ್ಚು ಆಯಾಸ ಮತ್ತು ಆರೋಗ್ಯ ಸಮಸ್ಯೆಗಳು ಕಂಡುಬರುತ್ತಿವೆ ಎಂಬುದು ಸ್ಪಷ್ಟವಾಗಿದೆ. 
 
ಈ ಬಗ್ಗೆ ವರದಿ ಬಿಡುಗಡೆ ಮಾಡಿ ಮಾತನಾಡಿದ ಫೋರ್ಟಿಸ್ ಸಿ-ಡಾಕ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಡಾ. ಅನೂಪ್ ಮಿಶ್ರ, ನಾವು ನಡೆಸಿದ ಅಧ್ಯಯನದಲ್ಲಿ ಟೈಪ್-2 ಡಯಾಬಿಟೀಸ್ ಹೊಂದಿರುವ ಹಾಗೂ ಕೋವಿಡ್ ಸೋಂಕಿಗೆ ತುತ್ತಾದ 56 ಜನರ ಆರೋಗ್ಯವನ್ನು ಪರಿಶೀಲಿಸಲಾಯಿತು. ಜೊತೆಗೆ 56 ಮಂದಿ ಕೋವಿಡ್‌ನಿಂದ ಬಳಲದೇ ಇರುವ ಟೈಪ್-2 ಡಯಾಬಿಟೀಸ್ ರೋಗಿಗಳನ್ನು 92 ದಿನಗಳ ಕಾಲ ಪರೀಕ್ಷೆಗೆ ಒಳಪಡಿಸಲಾಯಿತು. ಡಯಾಬಿಟೀಸ್ ಇದ್ದು ಕೋವಿಡ್‌ಗೆ ತುತ್ತಾಗಿ ನಂತರ ಗುಣವಾದವರ ಆರೋಗ್ಯ ಸಂಪೂರ್ಣ ಹದಗೆಡುತ್ತಾ ಇತ್ತು, ಜೊತೆಗೆ ಹೆಚ್ಚಿನ ಆಯಾಸ ಇವರಿಗೆ ಕಾಡುತ್ತಿತ್ತು. ರಕ್ತದಲ್ಲಿ ಗ್ಲೂಕೋಸ್ ಮಟ್ಟ ಏರಿಕೆ, ಬಿಪಿಯಲ್ಲಿ ಏರಿಳಿತ, ದೈಹಿಕ ಸಾಮರ್ಥ್ಯ ಕುಸಿತ, ತೂಕದಲ್ಲಿ ಅತಿಯಾದ ಇಳಿಕೆ ಸೇರಿದಂತೆ ಇತರೆ ಅಸಾಧಾರಣ ವ್ಯತ್ಯಾಸಗಳು ಕಂಡು ಬಂದಿದೆ ಎಂದು ವಿವರಿಸಿದ್ದಾರೆ.
 
ಮಧುಮೇಹಿಗಳಿಗೆ ಕೋವಿಡ್ ಸೋಂಕು ಅತ್ಯಂತ ಅಪಾಯಕಾರಿ, ಡಯಾಬಿಟೀಸ್ ಇರುವವರು ಸಾಧ್ಯವಾದಷ್ಟು ಬೇಗ ಈ ಸೋಂಕಿಗೆ ಎಚ್ಚರಿಕೆ ವಹಿಸಬೇಕು, ಒಂದು ವೇಳೆ ಸೋಂಕಿಗೆ ತುತ್ತಾಗಿದ್ದರೂ ಗುಣಮುಖರಾದ ಬಳಿಕ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಲಾಗುತ್ತದೆ. ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ಇಷ್ಟವಾಗುವಂತೆ ನೋಡಿಕೊಳ್ಳಬೇಕು. ಈ ಎಲ್ಲ ಅಂಶಗಳ ಅಧ್ಯಯನದಲಿಯೇ ಸಾಭೀತಾಗಿರುವುದರಿಂದ ಮಧುಮೇಹಿಗಳು ಚೆನ್ನಾಗಿ ಇದ್ದರೆ ಒಳ್ಳೆಯದು,

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಸಿಎಂ ಸಿದ್ದರಾಮಯ್ಯಗೆ ಆರ್ ಎಸ್ಎಸ್ ಬಗ್ಗೆ ವಿವರವಾಗಿ ಹೇಳಿದ ಬಿವೈ ವಿಜಯೇಂದ್ರ

ಧರ್ಮಸ್ಥಳ ಚಲೋಗೆ ಚಾಲನೆ ನೀಡಿದ ಬಿಜೆಪಿ

ಡಾ ಸಿಎನ್ ಮಂಜುನಾಥ್ ಪ್ರಕಾರ ಹೆಣ್ಣುಮಕ್ಕಳಲ್ಲೂ ಹೃದಯಾಘಾತ ಹೆಚ್ಚಲು ಇದೇ ಕಾರಣ

ಮೋದಿ ಆರ್ ಎಸ್ಎಸ್ ಹೊಗಳಿದ್ದಕ್ಕೆ ಸಿದ್ದರಾಮಯ್ಯ ಟೀಕೆ: ನೀವು ಎಮರ್ಜೆನ್ಸಿ ಹೇರಬಹುದಾ ಎಂದ ನೆಟ್ಟಿಗರು

ಮುಂದಿನ ಸುದ್ದಿ
Show comments