Webdunia - Bharat's app for daily news and videos

Install App

ರಾಜ್ಯ ಕಾಂಗ್ರೆಸ್ ಉಸ್ತುವಾರಿ ‌ರಣದೀಪ್‌ಸಿಂಗ್ ಸುರ್ಜೇವಾಲಾ ಗಂಭೀರ ಆರೋಪಿ

Webdunia
ಮಂಗಳವಾರ, 17 ಆಗಸ್ಟ್ 2021 (21:25 IST)
ಬಿಜೆಪಿ ಸರ್ಕಾರ ಕಲ್ಯಾಣ ಕರ್ನಾಟಕ (ಹೈದರಾಬಾದ್-ಕರ್ನಾಟಕ) ಅಭಿವೃದ್ಧಿ ವಿರೋಧಿ ಸರ್ಕಾರವಾಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ‌ರಣದೀಪ್‌ಸಿಂಗ್ ಸುರ್ಜೇವಾಲಾ ಗಂಭೀರವಾಗಿ ಆರೋಪಿಸಿದ್ದಾರೆ.  ನಗರದ ಖಾಸಗಿ ಹೊಟೇಲ್‌‌ನಲ್ಲಿ ಆಯೋಜಿಸಿದ ಕಲಬುರಗಿ ವಿಭಾಗೀಯ ಮಟ್ಟದ ಮುಖಂಡರ ಸಭೆಯಲ್ಲಿ ಭಾಗವಹಿಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಲ್ಯಾಣ ಕರ್ನಾಟಕ ಭಾಗಕ್ಕೆ ಈಗೀನ ಬಿಜೆಪಿ ಅಭಿವೃದ್ದಿ ವಿಚಾರದಲ್ಲಿ ಪಕ್ಷಪಾತ ನೀತಿ ಅನುಸರಿಸುತ್ತಿದೆ. ಈ ಭಾಗದಲ್ಲಿ ಕೇವಲ 3 ಜನರಿಗೆ ಮಾತ್ರ ಸಚಿವ ಸ್ಥಾನ ನೀಡಲಾಗಿದೆ. ಹೀಗಾಗಿ ಈ ಭಾಗದಲ್ಲಿ ಅಭಿವೃದ್ದಿ ಕಲ್ಯಾಣ ಮಾಡುವ ಉದ್ದೇಶ ಬಿಜೆಪಿಗಿಲ್ಲವಾಗಿದೆ.  ಈ ಭಾಗಕ್ಕೆ 1500 ಕೋಟಿ ನೀಡುವುದಾಗಿ ಹೇಳಿ  KKRDB  ಗೆ ಮಂಜೂರು 630 ಕೋಟಿ ಬಿಡುಗಡೆ ಮಾಡಿದೆ‌. ಈ 630 ಕೋಟಿ ಮೊತ್ತದ ಅನುದಾನದಲ್ಲಿ ಏನು ಅಭಿವೃದ್ದಿ ನಿರೀಕ್ಷೆ ಮಾಡಲು ಸಾಧ್ಯ. ಕೋವಿಡ್ ಸಮಯದಲ್ಲಿ ಸಕಾಲಕ್ಕೆ ರವಾನಿಸಿಲ್ಲ. ಇದರಿಂದಾಗಿ ರೆಮಿಡಿಷನ್ ಇಂಜಕ್ಷನ್ 25,000 ರೂಪಾಯಿವರೆಗೆ ಮಾರಾಟ ಮಾಡಲಾಗಿದೆ. ರೋಗಿಗಳ ಚಿಕಿತ್ಸೆಗೆ  ಐಸಿಯು ಬೆಡ್ ಅವಶ್ಯಕತೆಯಿತ್ತು. ಆದ್ರೆ ಐಸಿಯು ಬೆಡ್‌ಗಳ ಸರಿಯಾದ ವ್ಯವಸ್ಥೆ ಮಾಡದೆ ಇರುವುದರಿಂದ  ರೋಗಿಗಳು ಪರದಾಡಿದ್ದರು. ಕೋವಿಡ್ ಮೃತಪಟ್ಟವರಿಗೆ ಪ್ರಮಾಣ ಪತ್ರವನ್ನ ಒದಗಿಸಬೇಕು. ಆದ್ರೆ ಸಾವಿನ ಪ್ರಮಾಣ ಪತ್ರ ಸಂಬಂಧಿಕರಿಗೆ ಸಹ ನೀಡಲಾಗುತ್ತಿಲ್ಲವೆಂದು ಸರ್ಕಾರ ವಿರುದ್ದ ವಾಗ್ದಾಳಿ ನಡೆಸಿದ್ರು. ಪ್ರಧಾನಿ ನರೇಂದ್ರ ಮೋದಿ ತೊಗರಿ ಬೆಳೆಗಾರರ ಕಾಳಜಿಯಿಲ್ಲದೆ ಗದಾ ಪ್ರಹಾರ ನಡೆಸಿದ್ದು, ತೊಗರಿ ಬೆಳೆಗಾರಿಗೆ ಬೆಂಬಲ ಬೆಲೆ ಇದುವರೆಗೂ ಪಾವತಿಯಾಗಿಲ್ಲ. ತೊಗರಿ ಬೆಳೆ ಆಮದು ಸಹ ರದ್ದು ಮಾಡಲಾಗಿದ್ದು, ಇದಕ್ಕಿಂತ ದೊಡ್ಡ ವಿಶ್ವಾದ್ರೋಹ ಮೋಸ ದೊಡ್ಡದಿಲ್ಲ ಎಂದರು. 62 ಕೋಟಿ ರೈತರು ಬೀದಿಗೆ ಬಿದ್ದಿದ್ದಾರೆ. ದೊಡ್ಡ ದೊಡ್ಡ ಉದ್ಯಮಿಗಳಿಗೆ ರೈತರ ಜಮೀನು ಮಾರಾಟ ಮಾಡುವ ಸಂಚು ನಡೆಯುತ್ತಿದೆ. 
371(j)  ತಿದ್ದುಪಡಿ ಮಾಡಲಾಗಿತ್ತು. ಆದ್ದರಿಂದ ಸರ್ಕಾರಿ ನೇಮಕಾತಿ ನಿಲ್ಲಿಸಲಾಗಿದೆ. ಹಿಂದೆ ಪ್ರವಾಹ ಬಂದಾಗ 1500 ಕೋಟಿ ಪರಿಹಾರ ನೀಡಿದ್ದರು. ರಾಜ್ಯದಲ್ಲಿ ಜನರ ಓಟಿನಿಂದ ಬಂದ ಸರ್ಕಾರವಲ್ಲ. ಬಿಎಸವೈ ಅವರನ್ನ ಮರ್ಯಾದೆ ಕಳೆದು ಕೆಳಗಿಳಿಸಿದ್ದಾರೆ‌. ಬಿಎಸ್‌ವೈ ಮೇಲೆ ಭ್ರಷ್ಟಾಚಾರ ಆರೋಪವಿತ್ತಾ.. ಅಥವಾ ಇಡಿ ಒತ್ತಡ ಹೇರಲಾಗಿತ್ತಾ. ಅವರನ್ನ ಬಲವಂತವಾಗಿ ಕೆಳಗಿಳಿಸಲಾಯ್ತಾ ಇದರ ಉತ್ತರ ಬಿಜೆಪಿ ಇನ್ನು ನೀಡಿಲ್ಲ.  ಹೀಗಾಗಿ ಈ ಸರ್ಕಾರ ಅನೈತಿಕ ಸರ್ಕಾರವಾಗಿದೆ ಎಂದರು. ಇಂದು ನಡೆದ ಸಭೆ ಕಾಂಗ್ರೆಸ್ ಸಂಘಟನೆ ಬಲ ಪಡಿಸಲು  ಸಭೆ ನಡೆಸಲಾಗಿದೆ‌. ಗ್ರಾಮ ಮತ್ತು ಪಟ್ಟಣಗಳ ವ್ಯಾಪ್ತಿಯಲ್ಲಿ ಪಕ್ಷ ಬಲಗೊಳಿಸುವ ಉದ್ದೇಶ. ಪಕ್ಷ ಸಂಘಟನೆ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು ಎಂದು ತಿಳಿಸಿದ್ರು. ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಸ್‌.ಆರ್.ಪಾಟೀಲ್, ಬಿ.ವಿ.ನಾಯಕ್, ಎನ್.ಎಸ್.ಬೋಸರಾಜ್, ಹೆಚ್.ಮುನಿಯಪ್ಪ ಸೇರಿದಂತೆ ಇತರಿದ್ದರು. 



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹಿಮಾಚಲ ಮೇಘಸ್ಫೋಟದ ವೇಳೆ ಗರ್ಭಿಣಿ ಶಿಕ್ಷಕರನ್ನು ಹೊತ್ತೊಯ್ದ ವಿದ್ಯಾರ್ಥಿಗಳು, ಭಾರೀ ಮೆಚ್ಚುಗೆ

ನೈಜರ್‌ ಭಯೋತ್ಪಾದಕ ದಾಳಿ, ಇಬ್ಬರು ಭಾರತೀಯರು ಸಾವು, ಒಬ್ಬರ ಕಿಡ್ನ್ಯಾಪ್‌

ರೊಹಿಂಗ್ಯಾಗಳ ತಪಾಸಣೆಗೆ ಬಂದ ಶೋಭಾ ಕರಂದ್ಲಾಜೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ

ಸಾಧನಾ ಸಮಾವೇಶ ಮುಗಿಸಿ ವಾ‍ಪಾಸ್ಸಾಗುತ್ತಿದ್ದ ಡಿಕೆ ಶಿವಕುಮಾರ್ ಬೆಂಗಾವಲು ವಾಹನ ಪಲ್ಟಿ, 4ಗಾಯ

ಸಿದ್ದರಾಮಯ್ಯನವರ ಹೆಸರನ್ನೇ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲಿ:ಛಲವಾದಿ ನಾರಾಯಣಸ್ವಾಮಿ

ಮುಂದಿನ ಸುದ್ದಿ
Show comments