ಕಂಠೀರವ ಸ್ಟೇಡಿಯಂನಲ್ಲಿ ಭರದಿಂದ ಸಾಗ್ತಿರೋ ಸ್ಟೇಜ್ ಸಿದ್ಧತಾ ಕೆಲಸ

Webdunia
ಶುಕ್ರವಾರ, 19 ಮೇ 2023 (19:30 IST)
ನಾಳೆ ನೂತನ ಸಿಎಂ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕಾರ ಹಿನ್ನೆಲೆ ಕಂಠೀರವ ಸ್ಟೇಡಿಯಂನಲ್ಲಿ  ಸ್ಟೇಜ್ ಸಿದ್ಧತಾ ಕೆಲಸ ಭರದಿಂದ ಸಾಗಿದೆ.ಸಿಎಂ ಪ್ರಮಾಣವಚನಕ್ಕೆ ಸ್ಟೇಜ್ ಸಿದ್ಧತೆಯಾಗಿದ್ದು.ಎಲ್ ಇಡಿ ಬ್ಯಾಕ್ ಗ್ರೌಂಡ್, ಸ್ಟೇಜ್ ಮತ್ತು ಸ್ಟೇಜ್ ನ ಮುಂಭಾಗ ರೆಡ್ ಕಾರ್ಪೊರೇಟ್ ಹಾಕಿ ವ್ಯವಸ್ಥೆ ಮಾಡಲಾಗಿದೆ.ಸ್ಟೇಜ್ ಎಡಭಾಗ ಮತ್ತು ಬಲಬಾಗ ಇನ್ನೂರಕ್ಕೂ ಹೆಚ್ಚು ಸೀಟ್ ಗಳ ವ್ಯವಸ್ಥೆ ಮಾಡಲಾಗಿದೆ.
 
ಅತಿಥಿಗಳ ಕುಟುಂಬ, ಪಿ.ಎ, ಆಪ್ತ ಸಹಾಯಕರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ.ಸ್ಟೇಡಿಯಂನಲ್ಲಿ ಸುಮಾರು 35ಸಾವಿರ ಜನರಿಗೆ ಆಸನದ ವ್ಯವಸ್ಥೆಗೆ ಸಿದ್ಧತೆ‌‌ ಮಾಡಲಾಗಿದೆ.ಈಗಾಗಲೇ ಅಧಿಕಾರಿಗಳಿಗೆ ಡಿ.ಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ.ಕಾರ್ಯಕ್ರಮ ವ್ಯವಸ್ಥೆಯ ಪ್ರತಿ ಹಂತದ ಬಗ್ಗೆ ವಿವರಣೆ ನೀಡಿದ್ದಾರೆ.
 
ರಾಷ್ಟ್ರೀಯ ನಾಯಕರು, ಬೇರೆ ಬೇರೆ ರಾಜ್ಯದ ಮುಖ್ಯಮಂತ್ರಿಗಳು ಭಾಗಿ ಹಿನ್ನೆಲೆ‌ಗ್ರ್ಯಾಂಡ್ ಆಗಿ ಸ್ಟೇಜ್ ರೆಡಿ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.ಹೀಗಾಗಿ ಸ್ಟೇಜ್ ಬಳಿ ಸಂಪೂರ್ಣ ರೆಡ್ ಕಾರ್ಪರೇಟ್ ಹಾಕಿ ವೇದಿಕೆ ಸಜ್ಜುಗೊಳಿಸಲಾಗಿದೆ.ನಾಳೆ ಕೇಂದ್ರ ನಾಯಕರು ಭಾಗಿ ಹಿನ್ನೆಲೆ Zಕ್ಯಾಟಗರಿ, ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್,ಅಡ್ವಾನ್ಸ್ ಸೆಕ್ಯೂರಿಟಿ ಲೈಸನಿಂಗ್ ಸಿಬ್ಬಂದಿಯಿಂದ ಸೆಕ್ಯೂರಿಟಿ ವ್ಯವಸ್ಥೆ ಮಾಡಲಾಗಿದೆ.ಈಗಾಗಲೇ ಸ್ಟೇಜ್ ಬಳಿ  ಬಂದು  ಹೈ ಸೆಕ್ಯೂರಿಟಿ ಸಿಬ್ಬಂದಿ ಪರೀಶಿಲನೆ ನಡೆಸಿದ್ದಾರೆ.ಡಾಗ್ ಸ್ಕ್ವಾಡ್ ನಿಂದ ನಿಂದ ಸ್ಟೇಜ್ ಸುತ್ತಮುತ್ತ ಪರಿಶೀಲನೆ ನಡೆಸಲಾಗಿದ್ದು,ಡಾಗ್ ಸ್ಕ್ವಾಡ್, ಬಾಂಬ್ ಸ್ಕ್ವಾಡ್, ಸಿಆರ್ ಪಿಎಫ್ ಸಿಬ್ಬಂದಿಯಿಂದ ಪರಿಶೀಲನೆ ನಡರಸಲಾಗ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೆಹಲಿ ಸ್ಫೋಟ ಪ್ರಕರಣ, ಸಾವಿನ ಸಂಖ್ಯೆ 15ಕ್ಕೆ ಏರಿಕೆ

ಕುಟುಂಬದಲ್ಲಿ ಕಲಹದ ನಡುವೆ ವಿರೋಧ ಪಕ್ಷದ ನಾಯಕನಾದ ತೇಜಸ್ವಿ ಯಾದವ್‌

ಮೆಕ್ಕಾ ಯಾತ್ರಿಕರ ಬಸ್ ದುರಂತ: ಪರಿಹಾರ ಘೋಷಿಸಿದ ತೆಲಂಗಾಣ ಸರ್ಕಾರ

6 ವರ್ಷಗಳ ಬಳಿಕ ಭಾರತ, ಚೀನಾ ನಡುವೆ ಏರ್ ಇಂಡಿಯಾ ಹಾರಾಟ ಪುನರಾರಂಭ

ನನ್ನ ವಿರುದ್ಧದ ರಾಜಕೀಯ ಪ್ರೇರಿತ ತೀರ್ಪು: ಬಾಂಗ್ಲಾ ಮಾಜಿ ಪ್ರಧಾನಿ ಹಸೀನಾ

ಮುಂದಿನ ಸುದ್ದಿ
Show comments