Webdunia - Bharat's app for daily news and videos

Install App

ವಿಶೇಷವಾಗಿ ಗಣರಾಜ್ಯೋತ್ಸವ ಶುಭಾಶಯ ಕೋರಿದ ಕೆನರಾ ಬ್ಯಾಂಕ್

Webdunia
ಬುಧವಾರ, 26 ಜನವರಿ 2022 (14:50 IST)
ಬೆಂಗಳೂರಿನಲ್ಲಿ ಇಂದು ಏರೋಪ್ಲೇನ್‌ ಮೂಲಕ ಶುಭಾಷಯ ಕೋರಿ ಗಣರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸಲಾಯಿತು. ಕೆನರಾ ಬ್ಯಾಂಕ್‌ ನಗರದ ಜನರಿಗೆ ಗಣರಾಜ್ಯೋತ್ಸವದ ಶುಭಾಷಯಗಳನ್ನು ವಿಶೇಷವಾಗಿ ತಿಳಿಸುವ ಉದ್ದೇಶದಿಂದ ಕೈಗೊಂಡಂತಹ ಅಭಿಯಾನದ ಇದಾಗಿತ್ತು.
ಬೆಂಗಳೂರಿನ ಆಕಾರ್‌ ಅಡ್ವರ್‌ ಟೈಸಿಂಗ್‌ ಮತ್ತು ಏರಿಯಲ್‌ ವರ್ಕ್ಸ್‌ ಏರೋ ಎಲ್‌ಎಲ್‌ಪಿ ಸಂಸ್ಥೆಗಳು ಇಂದು ಹ್ಯಾಪಿ ರಿಪಬ್ಲಿಕ್‌ ಡೇ ಎನ್ನುವ ಫಲಕವನ್ನ ನಗರದ ವಿವಿಧ ಭಾಗಗಳಲ್ಲಿ ಯಶಸ್ವಿಯಾಗಿ ಭಿತ್ತರಿಸಿದವು.
 
ಏರಿಯಲ್‌ ವರ್ಕ್ಸ್‌ ಏರೋ ಎಲ್‌ಎಲ್‌ಪಿ ಸಂಸ್ಥೆಯ ಕ್ಯಾಪ್ಟನ್‌ ಮುರಳಿ ಅವರು ಹಾರಿಸಿದ ವಿಮಾನದಲ್ಲಿ ಜಕ್ಕೂರಿನ ಏರೋಡ್ರೋಂ ನಿಂದ ಫಲಕವನ್ನ ನಗರದ ಜೆ.ಸಿ ರಸ್ತೆ, ಲಾಲ್‌ಬಾಗ್‌ ಹಾಗೂ ಬೆಂಗಳೂರು ದಕ್ಷಿಣ ಭಾಗದಲ್ಲಿ ಸುಮಾರು 2 ಗಂಟೆಗಳ ಕಾಲ ಹಾರಾಟ ನಡೆಸಿ ಗಣರಾಜ್ಯೋತ್ಸವದ ಸಂದೇಶವನ್ನು ಭಿತ್ತರಿಸಿದರು.ನಂತರ ಕ್ಯಾಪ್ಟನ್‌ ಮುರಳಿ ಮಾತನಾಡಿ, ರಾಜ್ಯದಲ್ಲಿ ಮೊದಲ ಬಾರಿಗೆ ಇಂತಹ ಜಾಹಿರಾತು ಸೇವೆಯನ್ನ ಒದಗಿಸುತ್ತಿರುವುದು ಸಂತಸದ ಸಂಗತಿಯಾಗಿದೆ.
 
ನಮ್ಮ ಸಂಸ್ಥೆ ಏರಿಯಲ್‌ ವರ್ಕ್ಸ್‌ ಏರೋ ಎಲ್‌ಎಲ್‌ಪಿ, ಆಕಾರ್‌ ಅಡ್ವರ್‌ ಟೈಸಿಂಗ್‌ ಜೊತೆಯಾಗಿ ರಾಜ್ಯದ ಜನರಿಗೆ ಈ ವಿಶೇಷ ಸೇವೆಯನ್ನು ಪ್ರಾರಂಭಿಸಲಾಗಿದೆ. ಆಕಾಶದಲ್ಲಿ ಸುತ್ತುತ್ತಾ ಪ್ರೀತಿಯ ಸಂದೇಶಗಳನ್ನು ಪ್ರೀತಿಪಾತ್ರರಿಗೆ ತಲುಪಿಸುವ ಸೇವೆ ಇದಾಗಿದೆ. ಅಲ್ಲದೇ, ಸಂಸ್ಥೆಯ ಬಗ್ಗೆ, ಜನರಿಗೆ ಸಂದೇಶಗಳನ್ನು ಒದಗಿಸುವಂತಹ, ರಾಜಕೀಯ ವಿಷಯಗಳನ್ನು ಬಿತ್ತರಿಸುವಂತಹ ಜಾಹೀರಾತುಗಳನ್ನು ಈ ಸೇವೆಯ ಮೂಲಕ ಬಿತ್ತರಿಸಬಹುದಾಗಿದೆ ಎಂದು ಹೇಳಿದರು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments