ಡಿವೋರ್ಸ್ ಆದ ಮೇಲೂ ಗಂಡ-ಹೆಂಡಿರು ಕಿತ್ತಾಡಿದ್ರೆ ಹೀಗೇ ಆಗೋದು ಅಂತ ಸಿಎಂ ಎಚ್ ಡಿಕೆಗೆ ಸ್ಪೀಕರ್ ಹೇಳಿದ್ದೇಕೆ?!

Webdunia
ಸೋಮವಾರ, 9 ಜುಲೈ 2018 (11:32 IST)
ಬೆಂಗಳೂರು: ಬಜೆಟ್ ಮೇಲಿನ ಪ್ರಶ್ನೋತ್ತರ ಕಲಾಪದಲ್ಲಿ ಸಿಎಂ ಕುಮಾರಸ್ವಾಮಿ ಭಾಷಣ ಮಾಡುತ್ತಿರುವಾಗ ಕೆಲವು ತಮಾಷೆಯ ಪ್ರಸಂಗಗಳು ಎದುರಾದವು.

ಬಿಜೆಪಿ ತಮ್ಮನ್ನು ವಚನ ಭ್ರಷ್ಟ ಎಂದು ಟೀಕಿಸುವುದಕ್ಕೆ ಪ್ರತಿಯಾಗಿ ಸಿಎಂ ಕುಮಾರಸ್ವಾಮಿ ಮತ್ತೆ ತಮ್ಮ 20-20 ಸರ್ಕಾರದ ದಿನಗಳನ್ನು ನೆನಪಿಸುತ್ತಿದ್ದಾಗ ಮಧ್ಯೆ ತಿಳಿಹಾಸ್ಯ ಮಾಡಿದ ಸ್ಪೀಕರ್ ರಮೇಶ್ ಕುಮಾರ್ ವಿಚಿತ್ರ ಉಪಮೆಯೊಂದನ್ನು ನೀಡಿ ಸಭೆಯನ್ನು ನಗೆಗಡಲಲ್ಲಿ ತೇಲಿಸಿದರು.

ಸಿಎಂ ಮಾತುಗಳನ್ನು ಕೇಳಿ ನಕ್ಕ ಸ್ಪೀಕರ್ ರಮೇಶ್ ಕುಮಾರ್ ‘ನೋಡ್ರೀ.. ಗಂಡ-ಹೆಂಡತಿ ಜಗಳ ಆಡಿದ್ರೆ ಡಿವೋರ್ಸ್ ಆಗುತ್ತೆ. ಡಿವೋರ್ಸ್ ಆದ ಮೇಲೂ ಕಿತ್ತಾಡ್ತಾ ಇದ್ರೆ ಸಂಸಾರದ ವಿಚಾರಗಳೆಲ್ಲಾ ಬೀದಿಗೆ ಬರುತ್ತೆ. ಈಗ ಹಾಗೇ ಆಗಿರೋದು’ ಎಂದು ರಮೇಶ್ ಕುಮಾರ್ ನಗುತ್ತಾ ಹೇಳಿದಾಗ ಇಡೀ ಸದನ ನಗೆಗಡಲಲ್ಲಿ  ತೇಲಿತು. ಆಗ ಸಿಎಂ ಕುಮಾರಸ್ವಾಮಿ, ಸಭಾಧ್ಯಕ್ಷರೇ ನಿಮಗೆ ನಗು ಬರುತ್ತದೆ. ನಾನು 20 ತಿಂಗಳು ಅನುಭವಿಸಿದ ನೋವಿನ ವಿಚಾರ ಹೇಳುತ್ತಿದ್ದೇನೆ ಎಂದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಂಬರೀಶ್ ಬಗ್ಗೆ ಕೆಟ್ಟದಾಗಿ ಮಾತನಾಡಿದ್ರಾ ಕೈ ನಾಯಕ ಶಿವರಾಮೇಗೌಡ: ವೈರಲ್ ಅಡಿಯೋದಲ್ಲಿ ಏನಿದೆ

ಮುಡಾ ಹಗರಃಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಬಿಗ್ ರಿಲೀಫ್

ಅಜಿತ್ ಪವಾರ್ ಇದ್ದ ವಿಮಾನದಲ್ಲಿ ಕೊನೆ ಕ್ಷಣದಲ್ಲಿ ಏನೆಲ್ಲಾ ಆಯ್ತು, ಪೈಲೆಟ್ ಹೇಳಿದ್ದೇನು ಇಲ್ಲಿದೆ ಮಾಹಿತಿ

ಜಯನಗರ ವಿಧಾನಸಭೆ ಕ್ಷೇತ್ರದ ಫಲಿತಾಂಶ ವಿವಾದ: ಬಿಜೆಪಿಗೆ ಬಿಗ್ ಶಾಕ್ ಕೊಟ್ಟ ಸುಪ್ರೀಂಕೋರ್ಟ್

ಅಜಿತ್ ಪವಾರ್ ದುರಂತ ಸಾವಿನ ಹಿಂದೆ ಏನೋ ಇದೆ ಎಂದ ಮಮತಾ ಬ್ಯಾನರ್ಜಿ

ಮುಂದಿನ ಸುದ್ದಿ
Show comments