ಹಾವೇರಿ ಪ್ರವಾಸ ಮಂದಿರದ ಮುಂಭಾಗದಲ್ಲಿ ಸಚಿವ ವಿನಯ್ ಕುಮಾರ್ ಸೊರಕೆ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ನೀಡಿದ ಹೇಳಿಕೆಗೆ ಬಿಜೆಪಿ ಕಾರ್ಯಕರ್ತರು ಖಂಡಿಸಿದ ಸಂದರ್ಭದಲ್ಲಿ ಸಚಿವ ಸೊರಕೆ ಮತ್ತು ಪೊಲೀಸ್ ಅಧಿಕಾರಿಯೊಬ್ಬರ ನಡುವೆ ಬಿಸಿ ಬಿಸಿ ಮಾತಿನ ಚಕಮಕಿ ನಡೆಯಿತು.
ಸಚಿವ ವಿನಯ್ ಕುಮಾರ್ ಬಹಿರಂಗ ಕ್ಷಣೆ ಯಾಚಿಸಬೇಕು ಎಂದು ಒತ್ತಾಯಿಸಿ ಸಚಿವ ಸೊರಕೆ ವಿರುದ್ಧ ಬಿಜೆಪಿ ಕಾರ್ಯಕರ್ತರು ಕಪ್ಪುಬಾವುಟ ಪ್ರದರ್ಶನ ಮಾಡಿದರು ಮತ್ತು ಅವರ ಕಾರಿಗೆ ಘೇರಾವ್ ಹಾಕಿದರು. ಪ್ರತಿಭಟನೆ ಸಂದರ್ಭದಲ್ಲಿ ಸೊರಕೆ ಸರ್ಕಲ್ ಇನ್ಸ್ಪೆಕ್ಟರ್ ಅವರನ್ನು ತರಾಟೆಗೆ ತೆಗೆದುಕೊಂಡರು.
ನೀವು ಡ್ಯೂಟಿ ಮಾಡುತ್ತೀದ್ದೀರಾ, ಏನು ಮಾಡ್ತಿದ್ದೀರಿ ನೀವು, ಕತ್ತೆ ಕಾಯಕ್ಕೆ ಬಂದಿದ್ದೀರಾ ಎಂದು ಸರ್ಕಲ್ ಇನ್ಸ್ಪೆಕ್ಟರ್ ವಿರುದ್ಧ ಹರಿಹಾಯ್ದರು. ಆಗ ಇನ್ಸ್ಪೆಕ್ಟರ್ ಏರುದನಿಯಲ್ಲಿ ನೀವು ಸರಿಯಾಗಿ ಮಾತನಾಡಿ ಎಂದು ಸಚಿವರಿಗೇ ದಬಾಯಿಸಿದರು. ಆಗ ಅಲ್ಲಿದ್ದ ಕೆಲವು ಕಾಂಗ್ರೆಸ್ ಮುಖಂಡರು ಕೂಡ ಸಚಿವರನ್ನು ಗದರಿಸಿದರು.