Webdunia - Bharat's app for daily news and videos

Install App

ತುಮಕೂರು: ಜೀವವಿತ್ತವಳ ಜೀವ ತೆಗೆದ ಪಾಪಿ ಪುತ್ರ

Webdunia
ಮಂಗಳವಾರ, 5 ಆಗಸ್ಟ್ 2014 (09:24 IST)
ಕೆಟ್ಟ ಮಗ ಹುಟ್ಟಬಹುದು. ಆದರೆ ಕೆಟ್ಟ ತಾಯಿ ಹುಟ್ಟಲಾರರು ಎಂದು ಹೇಳಲಾಗುತ್ತದೆ. 9 ತಿಂಗಳು ಹೊತ್ತು, ಸಹಿಸಲಾಗದ ನೋವನ್ನನುಭವಿಸಿ ಹೆತ್ತು, ತಾ ಹಡೆದ ಕಂದಮ್ಮನಿಗಾಗಿ ಸರ್ವವನ್ನು ತ್ಯಾಗ ಮಾಡುವ ತಾಯಿ ನಿಸ್ವಾರ್ಥ ಮಮತೆಯ ಗಣಿ. ಆಕೆಗಾಗಿ  ನಾವೆಷ್ಟು ಮಾಡಿದರೂ ಕಡಿಮೆಯೇ.... ಅದರೆ ಆಧುನಿಕ ಕಾಲದಲ್ಲಿ ಎಲ್ಲ ಸಂಬಂಧಗಳು ಅರ್ಥಹೀನ ಎನ್ನಿಸುತ್ತಿದ್ದು, ಅದು ತಾಯಿ- ಮಗನಂತಹ  ಪವಿತ್ರ ಸಂಬಂಧಕ್ಕೂ ಕಪ್ಪುಚುಕ್ಕೆ ತರುತ್ತಿದೆ ಎಂಬುದು ವಿಷಾದನೀಯ.

ಇದಕ್ಕೆ ಸಾಕ್ಷಿ ಎಂಬಂತೆ ಕಳೆದ ಸೋನವಾರ ತುಮಕೂರಿನಲ್ಲಿ ಭಯಾನಕ ಘಟನೆಯೊಂದು ನಡೆದಿದ್ದು, ತನ್ನ ತಾಯಿಯ ನಡವಳಿಕೆಯನ್ನು ಶಂಕಿಸಿ, ಕೇವಲ 16 ವರ್ಷದ ಬಾಲಕನೊಬ್ಬ ತಾಯಿಯ ಕತ್ತುಕೊಯ್ದು ಕೊಲೆ ಮಾಡಿದ್ದಾನೆ. 
 
ತುಮಕೂರಿನ ನೃಪತುಂಗ ಬಡಾವಣೆಯ ನಿವಾಸಿ 35 ವರ್ಷದ ಪುಷ್ಪಾವತಿ ಎಂಬಾಕೆಯೇ ಹೆತ್ತ ಮಗನಿಂದ ಕೊಲೆಗೀಡಾದ ದೌರ್ಭಾಗ್ಯಶಾಲಿ ತಾಯಿಯಾಗಿದ್ದು, ಹೊಸ ಬಡಾವಣೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 
ಕೊಲೆಗಾರ ಮಗನನ್ನು ಬಂಧಿಸಿರುವ ಪೋಲಿಸರು ತನಿಖೆಯನ್ನು ಮುಂದುವರೆಸಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments